• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಡಜನರಿಂದ ಹೆಚ್ಚಿನ ಹಣ ವಸೂಲಿ

October 18, 2017 by Sachin Hegde Leave a Comment

ಹಳಿಯಾಳ ; ಪಟ್ಟಣದಲ್ಲಿಯ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ 24*7 ಯೋಜನೆ ಉಧ್ಘಾಟನೆ ಆಗದೆ ಇದ್ದರೂ ಸಹ ಯೋಜನೆ ಹೊಣೆ ಹೊತ್ತವರು ಬಡಜನರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುವುದರ ಮೂಲಕ ಜನರಿಗೆ ಮೊಸ ಮಾಡುತ್ತಿದ್ದು ನೀರು ಪೊರೈಕೆಗಾಗಿ ಅಳವಡಿಸಲಾದ ಮೀಟರ್‍ಗಳು ದೋಷಪೂರಿತವಾಗಿದ್ದು ಅವುಗಳನ್ನು ಸರಿಪಡಿಸಲು ಯೋಜನೆಯ ಉಸ್ತುವಾರಿ ಹೊತ್ತಿರುವವರ ಜೊತೆ ವಿಶೇಷ ಸಭೆಯನ್ನು ಕರೆಯಲು ಹಳಿಯಾಳ ಪುರಸಭೆ ನಿರ್ಧರಿಸಿದೆ.
ಪಟ್ಟಣದ ಪುರಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 24*7 ಕುಡಿಯುವ ನೀರಿನ ಸರಬರಾಜು ಯೋಜನೆಯ ತೊಡಕುಗಳ ಬಗ್ಗೆ ಗಂಭೀರ ಚರ್ಚೆ ನಡೆದವು. ಪಟ್ಟಣದಲ್ಲಿ ಬಹುನಿರೀಕ್ಷಿತ ಯೋಜನೆಯಾದ ಇದನ್ನು ಸರಿಯಾದ ದಾರಿಯಲ್ಲಿ ಸಾಗಿಸದೇ ಕೇಲವರು ಇದರ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಅಲ್ಲದೇ ನಿರಂತರ ಕುಡಿಯುವ ನೀರಿನ ನಲ್ಲಿ ಜೋಡನೆಗಾಗಿ ಪುರಸಭೆಯ ಸಂಬಂಸಿದ ವಿಭಾಗದ ಸಿಬ್ಬಂದಿಗೆ ಸರಕಾರಿ ಶುಲ್ಕವನ್ನು ಪಾವತಿಸಿ ಜೋಡನೆ ನೀಡುವಂತೆ ಮನವಿ ಮಾಡಿದರೂ ಸಹ ಅವರಿಗೆ ಅನವಶ್ಯಕವಾಗಿ ತೊಂದರೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು ಇದನ್ನು ಗಂಬೀರವಾಗಿ ಪರಿಗಣಿಸಿ ಸರಿಪಡಿಸುವಂತೆ ಸಭೆಯು ಮುಖ್ಯಾಧಿಕಾರಿ ಕೇಶವ ಚೌಗಲೆ ಅವರನ್ನು ತರಾಟೆಗೆ ತೆಗೆದುಕೊಂಡರು ಅಲ್ಲದೇ ಬಡವರಿಗೆ ಅನವಶ್ಯಕವಾಗಿ ಈ ವಿಷಯದಲ್ಲಿ ಕಿರುಕುಳ ನೀಡಿದರೇ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಠರಾವು ಪಾಸ್ ಮಾಡಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
ಪುರಸಭೆಯ 150ನೇ ವರ್ಷದ ಸಂಬ್ರಾಮಾಚರಣೆಯ ಅಂಗವಾಗಿ ಶ್ರೀ ಗ್ರಾಮದೇವಿ ಮೈದಾನದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ರೂ ಅನುದಾನ ಮಂಜೂರಾಗಿದ್ದು ಅಲ್ಲಿಯೇ ನೂತನ ಕಟ್ಟಡ ನಿರ್ಮಿಸುವ ವಿಷಯವು ಸಭೆಯಲ್ಲಿ ಪ್ರಸ್ತಾಪವಾದಾಗ ಸದಸ್ಯರೋರ್ವರು ಎದ್ದು ನಿಂತು ಅಲ್ಲಿಯ ಗ್ರಾಮದೇವಿ ಮೈದಾನವನ್ನು ಬಿಟ್ಟು ಕಟ್ಟಡವನ್ನು ನಿರ್ಮಿಸಬೇಕು ಜೊತೆಗೆ ಪುರಸಭೆಯ ದಾಖಲೆಯಲ್ಲಿ ಅದನ್ನು ಗ್ರಾಮದೇವಿ ಜಾತ್ರೆಗಾಗಿ ಮಾತ್ರ ಮೀಸಲಿಡಬೇಕು ಎಂದಾಗ ಕೆಲ ಕಾಲ ಗೊಂದಲ ಉಂಟಾಗಿ ಅಂತಿಮವಾಗಿ ಅವರ ಮಾತಿಗೆ ಮಣೆ ಹಾಕಲಾಯಿತು. ಅಲ್ಲದೇ ಆ ಪ್ರದೇಶದಲ್ಲಿ ವಾಸಿಸುತ್ತಿರುವ 11 ಕುಟುಂಬಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಲಾಗುವುದು ಮತ್ತು ಮನೆಯ ನಿರ್ಮಾಣಕ್ಕೆ 2.75 ಲಕ್ಷ ರೂ ಹಣಕಾಸಿನ ನೇರವು ನೀಡುವ ವಿಷಯವನ್ನು ಸಹ ಚರ್ಚಿಸಲಾಯಿತು.
ಪುರಸಭೆಯ ಸಿಬ್ಬಂದಿಗಳಿಗೆ ವಸತಿಗೃಹಗಳನ್ನು ನಿರ್ಮಿಸುವ ವಿಷಯವನ್ನು ಇಂಜನಿಯರ್ ಸಭೆಯ ಗಮನ ಸೆಳೆದಾಗ ಬಸವ ನಗರದಲ್ಲಿರುವ ಖಾಲಿ ನಿವೇಶನದಲ್ಲಿ ನಿರ್ಮಿಸಲು ಸಭೆಯು ಅನುಮತಿ ನೀಡಿತು. ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ನಿರ್ಮಾಣಕ್ಕೆ ಇಗಾಗಲೇ ಸರಕಾರದಿಂದ 12 ಲಕ್ಷ ರೂ ಅನುದಾನ ಬಂದಿದ್ದು, ನಿವೇಶನ ಗುರುತಿಸುವ ವಿಷಯ ಬಂದಾಗ ಅದನ್ನು ದೇಶಪಾಂಡೆ ನಗರದಲ್ಲಿ ನೀಡುವಂತೆ ಸೂಚನೆ ನೀಡಲಾಯಿತು. ಬಡವರ ಒಟ್ಟೂ 85 ಮನೆಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ಯಾವುದೇ ಧನಸಹಾಯ ಇನ್ನೂವರೆಗೂ ನಮ್ಮ ಕೈ ಸೇರಿಲ್ಲ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಹೊಸ ಕಟ್ಟಡದ ನಿರ್ಮಾಣದ ನಂತರ ಹಳೆಯ ಕಟ್ಟಡದ ನಿವೇಶನದಲ್ಲಿ ಪುರಭವನÀ ನಿರ್ಮಾಣಕ್ಕೆ 2 ಕೋಟಿ ರೂ ಮಂಜೂರಿಯಾಗಿದ್ದು ನೈರ್ಮಲ್ಯ ಮತ್ತು ಸ್ವಚ್ಚತೆಯ ಕಾರ್ಯವು ಪಟ್ಣಣದಲ್ಲಿ ನಿರಂತವಾಗಿ ನಡೆಯುತ್ತಿರುವ ವಿಷಯಗಳು ಸಹ ಚರ್ಚೆಯಾದವು.
ಅಧ್ಯಕ್ಷ ಉಮೇಶ ಬೋಳಶೆಟ್ಟಿ, ಉಪಾಧ್ಯಕ್ಷ ಅರುಣ ಬೂಬಾಟಿ, ಸ್ಥಾಯಿ ಸಮಿತಿಯ ಚೇರ್ಮನ್ ನೀಲಜಕರ, ಮುಖ್ಯಾಕಾರಿ ಕೇಶವ ಚೌಗುಲೆ, ಸದಸ್ಯರಾದ ಶಂಕರ ಬೆಳಗಾಂವಕರ, ಬಾಬು ಮಾದರ,ಮಾಲಾ ಬ್ರಿಗಾಂಜಾ, ಸತ್ಯಜೀತ ಗಿರಿ, ಸುಭಾನಿ ಹುಬ್ಬಳ್ಳಿ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News Tagged With: 150ನೇ, 24*7, 85 ಮನೆ, ಕುಡಿಯುವ, ನಿರಂತರ, ನೀರು, ನೀರು ಪೊರೈಕೆ, ಪಟ್ಟಣ, ಬಡಜನರಿಂದ, ಮಾಡುವ, ಮೊಸ ಮಾಡುತ್ತಿದ್ದು, ವರ್ಷದ, ವಸೂಲಿ, ಸಂಬ್ರಾಮಾಚರಣೆ, ಸರಬರಾಜು, ಹೆಚ್ಚಿನ ಹಣ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar