ಹೊನ್ನಾವರ:ತಾಲೂಕಿನ ಮುಡ್ಕಣಿಯ ಗ್ರಾಮದ ತುಂಬೊಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ವಿಷ್ಣುಮುರ್ತಿ ದೇವರ 5 ನೇ ವರ್ಷದ ವರ್ಧಂತಿ ಉತ್ಸವ ಎಪ್ರೀಲ್ 17 ರಂದು ನಡೆಯಲಿದೆ. ಬೆಳಿಗ್ಗೆ 10 ಘಂಟೆಯಿಂದ ದೇವತಾ ಪ್ರಾರ್ಥನೆ, ಶುದ್ದಿಕರ್ಮ, ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹ, ಸಂಕಲ್ಪ, ಕಲಶ ಸ್ಥಾಪನೆ. ಸತ್ಯನಾರಾಯಣ ಪೂಜೆ, ಅಧಿವಾಸ ಹೋಮ, ತತ್ವ ಹೋಮಾದಿಗಳು, ಪೂರ್ಣಾಹುತಿ, ಕುಂಭಾಭಿಷೇಕ. ಮಧ್ಯಾಹ್ನ ಪೂಜಾ, ಮಧ್ಯಾಹ್ನ ಬಲಿ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. … [Read more...] about 5 ನೇ ವರ್ಷದ ವರ್ಧಂತಿ ಉತ್ಸವ
ವರ್ಷದ
20ನೇ ವರ್ಷದ ಬೆಳದಿಂಗಳ ಸಂಗೀತೋತ್ಸವ
ಹೊನ್ನಾವರ : ಕಲಾಮಂಡಳ ಹೊನ್ನಾವರ, ಎಸ್.ಕೆ.ಪಿ. ಮ್ಯೂಸಿಕ್ ಟ್ರಸ್ಟ್ ಅರೇಅಂಗಡಿ ಮತ್ತು ಎಸ್.ಕೆ.ಪಿ. ದೇವಸ್ಥಾನ ಟ್ರಸ್ಟ್ ನೀಲ್ಕೋಡು ಇವರ ಸಹಯೋಗದೊಂದಿಗೆ ವಿಂಶತಿ ಸಮಾರಂಭ 20ನೇ ವರ್ಷದ ಬೆಳದಿಂಗಳ ಸಂಗೀತೋತ್ಸವ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೂಸ್ಥಾನಿ ಸಂಗೀತದ ಬೆಳವಣಿಗೆಗೆ ಸೇವೆ ಸಲ್ಲಿಸಿದ 40ಕ್ಕೂ ಹೆಚ್ಚು ಹಿರಿಯ ಸಂಗೀತ ಸಾಧಕರಿಗೆ ಸನ್ಮಾನ, "ನಾದಮಾಧವ ರಾಷ್ಟ್ರೀಯ ಪ್ರಶಸ್ತಿ" ಮತ್ತು "ಅವಿನಾಶ ಹೆಬ್ಬಾರ್ ಸಂಸ್ಮರಣ ಯುವ ಪುರಸ್ಕಾರ" ಪ್ರಧಾನ ಕಾರ್ಯಕ್ರಮ … [Read more...] about 20ನೇ ವರ್ಷದ ಬೆಳದಿಂಗಳ ಸಂಗೀತೋತ್ಸವ
ತಕ್ಷಣ ಪರೇಶ ಮೇಸ್ತನ ಸಾವಿಗೆ ಕಾರಣರಾದವರನ್ನು ಬಂದಿಸಿ – ಜಗದೀಪ ತೆಂಗೇರಿ
ಹೊನ್ನಾವರ :ಕಳೆದ ಡಿಸೆಂಬg À6-12 2017 ರ ರಾತ್ರಿ ಹೊನ್ನಾವರದಲ್ಲಿ ನಾಪತ್ತೆಯಾಗಿದ್ದ 21 ವರ್ಷದ ಅಮಾಯಕ ಯುವಕ ಪರೇಶ ಮೇಸ್ತ 8 ಡಿಸೆಂಬರ 2017 ರ ಮುಂಜಾನೆ ನಗರದ ಶೆಟ್ಟಿಕೆರೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದು ನಮ್ಮನ್ನೆಲ್ಲಾ ದುಃಖದ ಕಡಲಿನಲ್ಲಿ ಮುಳುಗಿಸಿದೆ ಎಂದು ಹೇಳಲು ಬೇಸರವಾಗುತ್ತಿದೆ. ಇಂತಹ ಅಮಾನುಷ ಅಮಾನವೀಯ ಘಟನೆಯನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಟು ಶಬ್ದಗಳಿಂದ ಖಂಡಿಸುತ್ತದೆ ಎಂದು ಬಿ.ಸಿ.ಸಿ. ಅಧ್ಯಕ್ಷ ಜಗದೀಪ ಎನ್. ತೆಂಗೇರಿ … [Read more...] about ತಕ್ಷಣ ಪರೇಶ ಮೇಸ್ತನ ಸಾವಿಗೆ ಕಾರಣರಾದವರನ್ನು ಬಂದಿಸಿ – ಜಗದೀಪ ತೆಂಗೇರಿ
ಬಡಜನರಿಂದ ಹೆಚ್ಚಿನ ಹಣ ವಸೂಲಿ
ಹಳಿಯಾಳ ; ಪಟ್ಟಣದಲ್ಲಿಯ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ 24*7 ಯೋಜನೆ ಉಧ್ಘಾಟನೆ ಆಗದೆ ಇದ್ದರೂ ಸಹ ಯೋಜನೆ ಹೊಣೆ ಹೊತ್ತವರು ಬಡಜನರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುವುದರ ಮೂಲಕ ಜನರಿಗೆ ಮೊಸ ಮಾಡುತ್ತಿದ್ದು ನೀರು ಪೊರೈಕೆಗಾಗಿ ಅಳವಡಿಸಲಾದ ಮೀಟರ್ಗಳು ದೋಷಪೂರಿತವಾಗಿದ್ದು ಅವುಗಳನ್ನು ಸರಿಪಡಿಸಲು ಯೋಜನೆಯ ಉಸ್ತುವಾರಿ ಹೊತ್ತಿರುವವರ ಜೊತೆ ವಿಶೇಷ ಸಭೆಯನ್ನು ಕರೆಯಲು ಹಳಿಯಾಳ ಪುರಸಭೆ ನಿರ್ಧರಿಸಿದೆ. ಪಟ್ಟಣದ ಪುರಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ … [Read more...] about ಬಡಜನರಿಂದ ಹೆಚ್ಚಿನ ಹಣ ವಸೂಲಿ
ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿ
ಕಾರವಾರ: ರಿಮ್ಯಾಂಡ್ ರೂಮ್ನಲ್ಲಿ ಬಂಧಿತನಾಗಿದ್ದ ಬಾಲಕ ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿಯಾದ ಘಟನೆ ನಡೆದಿದೆ. ಹಳಿಯಾಳದ ಮೂಲದ 17 ವರ್ಷದ ಬಾಲಕ ಪೊಕ್ಸೊ ಕಾಯ್ದೆ ಅಡಿ ಬಂಧಿತನಾಗಿ, ರಿಮ್ಯಾಂಡ್ ರೂಮ್ ಸೇರಿದ್ದ. ಗುರುವಾರ ಸಂಜೆ ಶೌಚಾಲಯಕ್ಕೆ ತೆರಳಿದ್ದ ಬಾಲಕ ಕಿಟಕಿಯ ಗಾಜು ಒಡೆದು, ಪರಾರಿಯಾಗಿದ್ದಾನೆ, ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿ