ಹೊನ್ನಾವರ :
ಕಳೆದ ಡಿಸೆಂಬg À6-12 2017 ರ ರಾತ್ರಿ ಹೊನ್ನಾವರದಲ್ಲಿ ನಾಪತ್ತೆಯಾಗಿದ್ದ 21 ವರ್ಷದ ಅಮಾಯಕ ಯುವಕ ಪರೇಶ ಮೇಸ್ತ 8 ಡಿಸೆಂಬರ 2017 ರ ಮುಂಜಾನೆ ನಗರದ ಶೆಟ್ಟಿಕೆರೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದು ನಮ್ಮನ್ನೆಲ್ಲಾ ದುಃಖದ ಕಡಲಿನಲ್ಲಿ ಮುಳುಗಿಸಿದೆ ಎಂದು ಹೇಳಲು ಬೇಸರವಾಗುತ್ತಿದೆ. ಇಂತಹ ಅಮಾನುಷ ಅಮಾನವೀಯ ಘಟನೆಯನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಟು ಶಬ್ದಗಳಿಂದ ಖಂಡಿಸುತ್ತದೆ ಎಂದು ಬಿ.ಸಿ.ಸಿ. ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದ್ದಾರೆ.ಹೊನ್ನಾವರ : ಕಳೆದ ಡಿಸೆಂಬg À6-12 2017 ರ ರಾತ್ರಿ ಹೊನ್ನಾವರದಲ್ಲಿ ನಾಪತ್ತೆಯಾಗಿದ್ದ 21 ವರ್ಷದ ಅಮಾಯಕ ಯುವಕ ಪರೇಶ ಮೇಸ್ತ 8 ಡಿಸೆಂಬರ 2017 ರ ಮುಂಜಾನೆ ನಗರದ ಶೆಟ್ಟಿಕೆರೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದು ನಮ್ಮನ್ನೆಲ್ಲಾ ದುಃಖದ ಕಡಲಿನಲ್ಲಿ ಮುಳುಗಿಸಿದೆ ಎಂದು ಹೇಳಲು ಬೇಸರವಾಗುತ್ತಿದೆ. ಇಂತಹ ಅಮಾನುಷ ಅಮಾನವೀಯ ಘಟನೆಯನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಟು ಶಬ್ದಗಳಿಂದ ಖಂಡಿಸುತ್ತದೆ ಎಂದು ಬಿ.ಸಿ.ಸಿ. ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದ್ದಾರೆ.
ಅವರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ನಡೆದ ಘಟನೆಯನ್ನು ಎಳೆಎಳೆಯಾಗಿ ತನಿಖೆ ನಡೆಸಿ ಇತನ ಸಾವಿನಲ್ಲಿ ಬಾಗಿಯಾದ ಏಷ್ಟೇ ಪ್ರಭಾವಿಗಳಿದ್ದರೂ ಕೂಡ ಅವರಿಗೆ ಉಗ್ರ ಶಿಕ್ಷೆಯಾಗುವಂತೆ ಕಾನೂನಿನ ಕುಣಿಕೆಯಲ್ಲಿ ಬಂಧಿಸಿ ಪರೇಶ ಮೇಸ್ತನ ಕುಟುಂಬಕ್ಕೆ ಮತ್ತು ಹೊನ್ನಾವರ ಜನತೆಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸುತ್ತೇವೆ. ಮತ್ತು ಯಾವುದೇ ಇಂತಹ ಘಟನೆಗಳು ಶಾಂತಿಪ್ರಿಯ ಹೊನ್ನಾವರದಲ್ಲಿ ಮರುಕಳಿಸದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.
ಹಾಗೆಯೇ ಅತ್ಯಂತ ಬಡ ಮೀನುಗಾರ ಕುಟುಂಬದ ಮಗನಾಗಿದ್ದ ಪರೇಶ ಮೇಸ್ತನ ಪಾಲಕರು ಮಗನನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ. ಕಾರಣ ಪರೇಶ ಮೇಸ್ತನ ಸಹೋದರಿ ಉತ್ತಮ ಶಿಕ್ಷಣ ಪಡೆದಿದ್ದು ಅವಳ ವಿದ್ಯಾರ್ಹತೆಗೆ ತಕ್ಕಂತೆ ಯೋಗ್ಯ ಸರಕಾರಿ ಹುದ್ದೆ ನೀಡುವಂತೆ ಮತ್ತು ಆ ಬಡ ಕುಟುಂಬಕ್ಕೆ ತಕ್ಷಣ ಪರಿಹಾರ ಘೋಷಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
Leave a Comment