ಹಳಿಯಾಳ: ಆರ್.ಎಸ್.ಎಸ್,ರಾಷ್ಟ್ರೀಯ ಸ್ವಯಂಸೇವಕ ಸಂಘದ ದಾಂಡೇಲಿ, ಹಳಿಯಾಳ, ಜೋಯಿಡಾ, ಯಲ್ಲಾಪುರ ತಾಲೂಕುಗಳ ವ್ಯಾಪ್ತಿಯ ದಾಂಡೇಲಿ ಜಿಲ್ಲಾ ಪ್ರಾಥಮಿಕ ಶಿಕ್ಷಾ ಸಾಪ್ತಾಹಿಕ ವರ್ಗದ ಕೊನೆಯ ದಿನವಾದ ಸೋಮವಾರ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ಯಶಸ್ವಿಯಾಗಿ ನಡೆಯಿತು.
ಪಟ್ಟಣದ ವಿ.ಡಿ. ಹೆಗಡೆ ವಿದ್ಯಾಲಯದಲ್ಲಿ ಒಂದು ವಾರಗಳ ಕಾಲ ವರ್ಗಗಳನ್ನು ಏರ್ಪಡಿಸಲಾಗಿತ್ತು. ಪ್ರತಿದಿನ ಬೆಳಗಿನ ಜಾವದಿಂದ ಆರಂಭಗೊಂಡು ರಾತ್ರಿಯವರೆಗೆ ವಿವಿಧ ವಿಷಯಗಳ ಬಗ್ಗೆ ತರಬೇತಿ, ರಾಷ್ಟ್ರೀಯ ವಿಷಯಗಳ ಕುರಿತು ಮಾರ್ಗದರ್ಶನ ಹಾಗೂ ಸಂಘದ ಶಾಖೆಯ ಕಾರ್ಯದ ಪರಿಚಯವನ್ನು ನೂತನ ಸ್ವಯಂಸೇವಕರಿಗೆ ಮಾಡಿಕೊಡಲಾಯಿತು.
ಸಂಘದ ವಾದ್ಯ (ಘೋಷ್), ಭಗವಾಧ್ವಜ ಹಾಗೂ ಭಾರತಮಾತೆಯ ಭಾವಚಿತ್ರದೊಂದಿಗೆ ಪಥಸಂಚಲನದಲ್ಲಿ ಗಣವೇಶಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದರು
Leave a Comment