ಹೊನ್ನಾವರ :
ಭಟ್ಕಳದಲ್ಲಿ ಕಳೆದ ತಿಂಗಳು ನಗರ ಸಭೆಯ ಅಂಗಡಿಯೊಂದರಲ್ಲಿ ಅಧಿಕಾರಿಗಳ ಕಿರುಕುಳ ತಾಳಲಾರದೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ರಾಮಚಂದ್ರ ನಾಯ್ಕರ ಕುರಿತು ಆರ್.ಪಿ. ನಾಯ್ಕ ಇಂಜಿನಿಯರ್ ಜಿಲ್ಲಾ ಪಂಚಾಯತ ಕಾರವಾರ ಇತನು ರೂಪಿಸಿದ ಪಿತೂರಿಯ ಕುರಿತು ಸಂಪೂರ್ಣ ಮಾಹಿತಿ ನೀಡುವ ಆಡಿಯೋ ಕ್ಯಾಸೆಟ್ ಪತ್ರಿಕೆಗೆ ದೊರೆತಿದ್ದು ಇದರ ವಿವರ ಈ ರೀತಿ ಇದೆ.
ಆತ್ಮಹತ್ಯೆಗೂ ಒಂದು ತಿಂಗಳ ಹಿಂದೆ ಭಟ್ಕಳದ ಶ್ರೀಮಂತ ವ್ಯಾಪಾರಿಗಳನ್ನು ಒಂದೆಡೆ ಸೇರಿಸಿಕೊಂಡು ಆರ್.ಪಿ. ನಾಯ್ಕ ಮಾಡಿದ ಮೀಟಿಂಗ್ ಹಾಗೂ ಡೀಲಿಂಗ್ ಕುರಿತ ಮಾತು-ಕತೆ ಈ ಸಿ.ಡಿ ಯಲ್ಲಿ ದಾಖಲೆಗೊಂಡಿದೆ. ಇದರಲ್ಲಿ ಬಡವರನ್ನು ಒಕ್ಕಲೆಬ್ಬಿಸಿ ಶ್ರೀಮಂತ ವ್ಯಾಪಾರಿಗಳಿಗೆ ರತ್ನಕಂಬಳಿ ಹಾಸುವ ಹುನ್ನಾರವನ್ನು ಆರ್.ಪಿ. ನಾಯ್ಕ ರೂಪಿಸಿದ್ದು ಇದರಲ್ಲಿ ರೆಕಾರ್ಡಿಂಗ್ ಆಗಿದೆ. ಬಡವರನ್ನು ಅಲ್ಲಿಂದ ಓಡಿಸಿ ತನಗೆ ಲಂಚ ನೀಡುವವರಿಗೆ ಆ ಸ್ಥಳವನ್ನು ನಗರ ಸಭೆಯ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಕೊಡುವ ಸಂಚನ್ನು ರೂಪಿಸಿದ್ದು ಇದರಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಇಷ್ಟಿದ್ದರೂ ಮೇಲಾಧಿಕಾರಿಗಳು ಜಿಲ್ಲಾಡಳಿತ ಆರ್.ಪಿ. ನಾಯ್ಕರನ್ನು ಬಂಧಿಸದಿರುವುದು, ಆತನನನ್ನು ದಂಡಿಸದಿರುವುದು ಆಶ್ಚರ್ಯ ಮೂಡಿಸುತ್ತದೆ.
Leave a Comment