ಕಾರವಾರ:
ಅಮದಳ್ಳಿಯ ಬಂಟದೇವ ಯುವಕ ಸಂಘದವರು ವಿಯಪುರದ ವಿವಿಧಡೆ ನಡೆಸಿಕೊಟ್ಟ ಬೀದಿ ನಾಟಕ ಗಮನ ಸೆಳೆಯಿತು.
ಭಾರತ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗ, ಮಹಿಳಾ ಮತ್ತು ಮಕ್ಕಳ ಆಭಿವೃದ್ದಿ ಸಚೀವಾಲಯ, ಮಹಿಳಾ ಮತ್ತು ಮಕ್ಕಳ ಆಭಿವೃದ್ದಿ ಇಲಾಖೆ ವಿಜಯಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಾರಗಳ ಕಾಲ ವಿಜಯಪುರದ ವಿವಿಧಡೆ “ಬೇಟಿ ಬಚಾವೂ-ಬೇಟಿ ಪಡಾವೋ” ಜನಜಾಗೃತಿ ಕಾರ್ಯಕ್ರಮ ನಡೆಯಿತು. ವಿಯಪುರ ನಗರದ ಅಸಗರಗಲ್ಲಿ, ಹಿಟ್ಟಿನಹಳ್ಳಿ, ಮಹಾಲ ಬಾಗಾಯತ ದರ್ಗಾ, ಭೂತನಾಳ, ಕಂಜರ ಭಾಟ್, ಜಲನಗರ ಮತ್ತು ಬೆಂಡಿಗೇರಿ ಗಲ್ಲಿ ಪೇಠ ಗ್ರಾಮಗಳಲ್ಲಿ ಸ್ತ್ರೀ ಭ್ರೂಣ ಹತ್ಯ, ಲಿಂಗ ತಾರತಮ್ಯ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ, ಮಹೀಳಾ ಶಿಕ್ಷಣ, ಮಹಿಳಾ ಶಶಕ್ತೀಕರಣ ಕುರಿತು ಜಾಗೃತಿ ಮೂಡಿಸುವ ನಾಟಕ ನಡೆದವು. ಕಲಾವಿದರಾದ ಮಂಜುನಾಥ ಮುದ್ಘೇಕರ್ ನಾಯಕತ್ವದಲ್ಲಿ ಪುರುಷೋತ್ತಮ ಗೌಡ, ನಾಗರಾಜ ಗೌಡ, ಉಮಾಕಾಂತ ಗೌಡ, ಶ್ರೀನಿವಾಸ ಅಂಬಿಗ, ಉಲ್ಲಾಸ ಗೌಡ, ರಾಜೇಶ ಮಡಿವಾಳ, ಗಜಾನನ ಅಂಬಿಗ, ಮುರಳಿ ಗೌಡ, ಅಜಯ ಮಡಿವಾಳ, ವಿನೋದ ಗೌಡ ಪ್ರತಿಭೆ ಪ್ರತದರ್ಶಿಸಿದರು. ಜಡೆ ಕೋಲಾಟ, ಜಾಗೃತಿ ಗೀತೆ ಮತ್ತು ಬೀದಿನಾಟಕದ ಮೂಲಕ ನೀಡಿದ ಜನಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
Leave a Comment