ಹೊನ್ನಾವರ ತಾಲೂಕ ಸ್ಟುಡಿಯೋ ಪೋಟೋಗ್ರಾಪರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ದಶಮಾನೋತ್ಸವ ಕಾರ್ಯಕ್ರಮ ಪ್ರಭಾತನಗರದ ಮೂಡಗಣಪತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧಿಶ ಹಾಗು ತಾಲೂಕಿನ ಕಾನೂನು ಸೇವಾಸಮಿತಿ ಅಧ್ಯಕ್ಷರಾದ ಎಂ.ವಿ.ಚೆನ್ನಕೇಶವರೆಡ್ಡಿ ಮಾತನಾಡಿ, ಛಾಯಾಗ್ರಾಹಕರು ಜೀವನದ ಸಂತೋಷ ಹಾಗು ದುಃಖದ ಸನ್ನಿವೇಶವನ್ನು ಸೆರೆಹಿಡಿಯುವ ಉತ್ತಮ ಕಲಾವಿದರು. ಅದ್ಬುತ ಶಕ್ತಿಯ ನಿಮ್ಮ ವೃತ್ತಿಗೆ ಉತ್ತಮ ಕಾರ್ಯಕ್ರಮವನ್ನು ನೀಡುತ್ತಿದ್ದಿರಿ. ಮಕ್ಕಳಲ್ಲಿ ಈ ಕಲೆಯ ಅಭಿರುಚಿ ಬೆರೆಸಿದಾಗ ಆ ಕಲೆಯನ್ನು ಕರಗತವಾದಂತೆಯು ಆಗುವುದು .ಜೊತೆಗೆ ಕಲಾವಿದರು ಆಗುತ್ತಾರೆ.ನಿಮ್ಮ ಸಂಘಟನೆ ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಬೆಳಕು ಗ್ರಾಮೀಣಾಭಿವೃದ್ದಿ ಸಂಸ್ದೆಯ ಅಧ್ಯಕ್ಷÀ ನಾಗರಾಜ ನಾಯ್ಕ ತೊರ್ಕೆ, ಛಾಯಾ ಸ್ಪೂರ್ತಿ ಎಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಎಲ್ಲರ ಜೀವನದ ವಿಭಿನ್ನ ಗುಣವನ್ನು ಮೆಲಕುಹಾಕವ ಸನ್ನಿವೇಶವನ್ನು ಸೆರೆಹಿಡಿಯುವ ಕಲಾವಿದರು ನೀವು. ಬಾಲ್ಯದ ಜೀವನವನ್ನು ಸದಾಕಾಲ ನೆನಪಿಡುವಂತೆ ಮಾಡುವುದು ನಮ್ಮ ಚಿತ್ರಪಟ. ನೀವು ಈದಿನ ಕೇವಲ ಕಾರ್ಯಕ್ರಮಕ್ಕೆ ಸೀಮಿತರಾಗದೇ ಎಲ್ಲಿಗೆ ತಲುಪಿಸಬೇಕೊ ಅಲ್ಲಿಗೆ ತಲುಪಿಸಿ, ಸಾಧಿಸಿ ದಶಮಾನೋತ್ಸವ ಆಚರಿಸಿದ್ದೀರಿ. ನೀವೆಲ್ಲ ಅನೇಕ ಸೌಲಭ್ಯದಿಂದ ವಂಚಿತರಾಗುತ್ತರುವ ಬಗ್ಗೆ ತಿಳಿಸಿದ್ದಿರಿ. ಕೇಂದ್ರ ಸಚಿವರು ನಮ್ಮ ಭಾಗದ ಸಂಸದರ ಬಳಿ ತಿಳಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡೋಣ . ನಿಮ್ಮ ಸಂಘಟನೆಗೆ ಸದಾ ನನ್ನ ಬೆಂಬಲವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ ರಾಮಚಂದ್ರನ್ ಶುಭಹಾರೈಸಿದರು.
ತಾಲೂಕಿನ ಪ್ರಸಿದ್ದ ಛಾಯಗ್ರಾಹಕರಾದ ಚಂದ್ರಶೇಖರ ದೇಶಭಂಡಾರಿ, ಎಸ್.ವಿ.ಭಟ್ಟ್, ಕೆ.ರಾಮಚಂದ್ರನ್, ಮಂಜು ಆಚಾರ್ಯ, ಎನ್.ಗಣಪತಿ, ಸುರೇಶ ಹೊನ್ನಾವರ್, ಮಾರ್ಷಲ್ಫನಾಂಡಿಸ್ ಗೌರವಪೂರ್ವಕ ಸನ್ಮಾನ ನಡೆಸಲಾಯಿತು. ವೇದಿಕೆಯಲ್ಲಿ ರಾಜ್ಯ ಛಾಯಗ್ರಾಹಕ ಸಂಘದ ಅಧ್ಯಕ್ಷ ಬಿ.ಎಸ್.ಶ್ರೀಧರ, ಉಪನಿರೀಕ್ಷಕರಾದ ಆನಂದಮೂರ್ತಿ, ಪಶ್ಚಿಮವಲಯದ ಆದ್ಯಕ್ಷರಾದ ಲಕ್ಷೀನಾರಾಯಣ ಭಟ್ಟ , ಪಿ.ಕೆ.ಹೆಗಡೆ ಉಪಸ್ದಿತರಿದ್ದರು. ಆಶಾ ಹೆಗಡೆ ಪ್ರಾರ್ಥಿಸಿದರೆ, ಮೋಹನ ನಾಯ್ಕ ಸ್ವಾಗತಿಸಿದರು. ನಂತರ ವಿಶೇಷ ಕಾರ್ಯಕ್ರಮವಾದ ದಿ. ಪದ್ಮಶೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಇವರ ಛಾಯಾಚಿತ್ರ ಪ್ರದರ್ಶಿಸಿಲಾಯಿತು. ದಶಮಾನೊತ್ಸವದ ಸಂಭ್ರಮದ ಪ್ರಯುಕ್ತ ಸುದರ್ಶನ ಹಾಗು ಕಾರ್ತವೀರ್ಯ ಯಕ್ಷಗಾನ ಪ್ರದರ್ಶನ ನಡೆಯಿತು
Leave a Comment