ಕಾರವಾರ:
ಅಕ್ರಮ ತಡೆಗೆ ವಿಫಲವಾದ ಅಂಕೋಲಾದ ಪಿಎಸ್ಐ ಹಾಗೂ ಮೂವರು ಕಾನ್ಸ್ಟೇಬಲ್ರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಆದೇಶ ಹೊರಡಿಸಿದ್ದಾರೆ.
ಅಂಕೋಲಾ ನಗರಠಾಣೆಯ ಪಿಎಸ್ಐ ಓಂಕಾರಪ್ಪ, ಕಾನ್ಸ್ಟೇಬಲ್ಗಳಾದ ವಸಂತ ನಾಯ್ಕ, ಗಣಪತಿ ನಾಯ್ಕ ಹಾಗೂ ಗಿರೀಶ್ ಲಮಾಣಿ ಅಮಾನತುಗೊಂಡವರು. ಅಂದ್ಲೇ ಎಂಬಲ್ಲಿ ಈಚೆಗೆ ವಿಪರೀತವಾಗಿ ಅಕ್ರಮ ಇಸ್ಪಿಟ್ ಅಡ್ಡೆ ನಡೆಯುತ್ತಿದ್ದು, ಅವುಗಳ ಮೇಲೆ ಡಿಸಿಐಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಅಂಕೋಲಾ ಪೊಲೀಸರು ಕರ್ತವ್ಯ ಲೋಪ ಎಸಗಿರುವದು ಕಂಡು ಬಂದಿತ್ತು. ಹೀಗಾಗಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ.
Leave a Comment