ಹೊನ್ನಾವರ. ತಾಲೂಕಿನ ಕರ್ಕಿ ಶ್ರೀ ಚೆನ್ನಕೇಶವ ಪ್ರೌಢ ಶಾಲೆ, ಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಜಾಗೃತಿ ಜಾಥಾದ ಮೂಲಕ ಆಚರಿಸಲಾಯಿತು.
ಕನ್ನಡಾಂಬೆಯ ಮೆರವಣಿಗೆಗೆ ಕರ್ಕಿ ಗ್ರಾಮಪಂಚಾಯತ ಅಧ್ಯಕ್ಷÀ ಶ್ರೀಕಾಂತ ಮೋಗೇರ ಚಾಲನೆ ನೀಡಿ ಕನ್ನಡ ನಾಡು, ನುಡಿ, ಜಲದ ಬಗ್ಗೆ ಅಭಿಮಾನ, ಗೌರವ ಸದಾ ಎಲ್ಲರಲ್ಲೂ ಜಾಗೃತವಾದರೆ ಏಕೀಕರಣ ಕರ್ನಾಟಕ ಸಾರ್ಥಕವಾಗುತ್ತದೆ ಎಂದರು.
ಕನ್ನಡ ಜಾಗೃತಿ ಘೋಷಣೆಗಳ ಮೂಲಕ ಊರ ನಾಗರಿಕರ ಸಹಕಾರದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಓದುತ್ತಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವ ವಿಶೇಷವಾಚನಾಲಯವನ್ನು ಗಿರೀಶ ಪದಕಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, À ಇವರು ಉದ್ಘಾಟಿಸಿದರು. ವಾಚನಾಲಯ ಉದ್ಘಾಟಿಸಿ ಮಾತನಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಅನುಕೂಲವಾಗುವಂತಹ ಪೂರಕ ಸಾಹಿತ್ಯ, ಪ್ರಶ್ನೆ ಪತ್ರಿಕೆ ಮತ್ತು ನೀಲ ನಕ್ಷೆ ಒಳಗೊಂಡ ಎಲ್ಲಾ ವಿಷಯಗಳ ಪುಸ್ತಕಳಿರುವ ವಿಶೇಷ ವಾಚನಾಲಯವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಗುಣಮಟ್ಟದ ಫಲಿತಾಂಶ ನೀಡಬೇಕೆಂದರು.
ವಾಚನಾಲಯಕ್ಕೆ ಸುಮಾರು 10 ಸಾವಿರ ರೂ. ಬೆಲೆಯ ಪುಸ್ತಕವನ್ನು ಗಿರೀಶ ಪದಕಿಯವರು ವಾಚನಾಲಯಕ್ಕೆ ನೀಡಿದರು,À ಅಧ್ಯಕ್ಷತೆಯನ್ನು ವಹಿಸಿ ಕೃಷ್ಣಮೂರ್ತಿ ಹೆಬ್ಬಾರ. ಮಾತನಾಡಿ ಪುಸ್ತಕ ಪ್ರೇಮ, ಅಗತ್ಯತೆ ಮತ್ತು ಬೌಧ್ಧಿಕ ಶ್ರೇಷ್ಠತೆಗೆ ಪುಸ್ತಕದ ಅನಿವಾರ್ಯತೆಯ ಬಗ್ಗೆ ತಿಳಿಸಿದರು.
ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಕಾಂತ ಮೊಗೇರ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ ಎಚ್ ನಾಯ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕರಾದ ಎಲ್ ಎಂ ಹೆಗಡೆ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಶ್ರೀಕಾಂತ ಹಿಟ್ನಳ್ಳಿ ವಂದಿಸಿದರು.
Leave a Comment