ಕಾರವಾರ: ಮಂಗಳವಾರ ನಗರಸಭೆ ಮುಂಬಾಗ ನಡೆದ “ನಾನು ಗೌರಿ” ಪ್ರತಿರೋಧ ಸಮಾವೇಶಕ್ಕೆ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಖಾಲಿ ಖುರ್ಚಿಗಳ ಮುಂದೆ ಗಣ್ಯರು ಗೌರಿ ಹಂತಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸಾಕಷ್ಟು ಪ್ರಚಾರ ನೀಡಿದರೂಸ ಸಮಾವೇಶಕ್ಕೆ ಜನ ಬಾರದಿರುವ ಬಗ್ಗೆ ಸಭೆಯಲ್ಲಿಯೇ ಸಂಘಟಕರು ಅಸಮಧಾನವನ್ನು ಹೊರ ಹಾಕಿದರು.
ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ದೇಶದಲ್ಲಿ ಈಚೆಗೆ ಸಂವಿದಾನ ವಿರೋಧಿ ಕೃತ್ಯಗಳು ಹೆಚ್ಚಾಗಿವೆ. ಕೋಮು ಗಲಬೆಗಳಿಂದ ದೇಶಕ್ಕೆ ಅಭದ್ರತೆ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಹು ಸಂಸ್ಕøತಿ, ವಿವಿಧ ಧರ್ಮಗಳ ಆಗರವಾಗಿರುವ ಭಾರತದಲ್ಲಿ ಎಲ್ಲ ಧರ್ಮದವರು ಒಂದೇ ಎಂದು ಕರೆ ನೀಡಿದ್ದ ಗಾಂಧೀಜಿಯವರನ್ನು ಕೊಲ್ಲಲಾಯಿತು. 12ನೇ ಶತಮಾನದಲ್ಲಿ ವರ್ಣಾಶ್ರಮ, ವೈದಿಕ ಬ್ರಾಹ್ಮಣ ಶಾಹಿ ದೋರಣೆ ಖಂಡಿಸಿದ ಶವ ಶರಣ ಹುಲ್ಲಯ್ಯರನ್ನು, ವಿವಿಧ ಸಂಶೋಧನೆ ನಡೆಸಿ ಲಿಂಗಾಯತ ಸ್ವತಂತ್ರ ಧರ್ಮ ಎಂದ ಚಿಂತಕ ಕಲ್ಬುರ್ಗಿಯವರನ್ನು ಅಮಾನುಷವಾಗಿ ಕೊಲೆ ಮಾಡಲಾಯಿತು. ಅದರಂತೆ ಸೌಹಾರ್ದತೆಯನ್ನು ಸಾರುತ್ತಿದ್ದ ಗೌರಿ ಲಂಕೇಶರನ್ನು ಕೂಡ ಬೀಕರವಾಗಿ ಹತ್ಯೆ ಮಾಡಲಾಗಿದೆ. ಗೌರಿಯನ್ನು ಕೊಂದ ಮಾತ್ರಕ್ಕೆ ಅವರ ವಿಚಾರಧಾರೆಗಳನ್ನು ಕೊಲ್ಲಲು ಸಾದ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು.
ಬೆಂಗಳೂರಿನ ಚಿಂತಕ ಶಿವಸುಂದರ ಮಾತನಾಡಿ, ದೇಶದಲ್ಲಿ ಗಾಂಧಿಯವರನ್ನು ಕೊಂದು ಮೊದಲ ಬಾರಿಗೆ ಭಯೋತ್ಪಾದನೆಯ ಬೀಜ ಬಿತ್ತಲಾಯಿತು. ಅವರನ್ನು ಕೊಂದ ನಾತುರಾಂ ಗೋಡ್ಸೆ ನೇರವಾಗಿ ಪೊಲೀಸರಿಗೆ ಶರಣಾಗಿದ್ದ. ಗಣಿಗಾರಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಹಿರು ಮಾಡಿದ್ದ ಗೌರಿ ಹತ್ಯೆ ನಡೆದು 63 ದಿನ ಕಳೆದರೂ ಕೊಲೆಗಾರರನ್ನು ಹಿಡಿದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಹೋರಾಟ ಸಮಿತಿಯ ಕೆ.ಆರ್.ರಮೇಶ, ನಗರಸಭೆ ಸದಸ್ಯ ರಮೇಶ ಗೌಡ ಇದ್ದರು.
Leave a Comment