ಕಾರವಾರ: ಜಯ ಕರ್ನಾಟಕ ವತಿಯಿಂದ ಮುಖ್ಯ ಕಡಲತೀರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶನಿವಾರ ಸಂಜೆ ನಡೆದ ರಸ ಮಂಜರಿ ಹಾಗೂ ಜಾದು ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.
ಬೆಂಗಳೂರಿನ ಗಾನ ಗಂಧರ್ವ ಮೆಲೋಡಿಸ್ ಸಂಗೀತ ತಂಡದವರು ರಸ ಮಂಜರಿ ನಡೆಸಿಕೊಟ್ಟರು. ಕೃಷ್ಣೇಂದ್ರ ಪಂಡಿತ್ ಹಾಗೂ ಇತರ ಗಾಯಕರು ಹಾಡಿದರು. ನಂತರ ಮಂಜು ಹೊನ್ನಾವರ ತಂಡದವರಿಂದ ಜಾದು ಕಾರ್ಯಕ್ರಮ ನಡೆಯಿತು. ಸ್ಥಳೀಯ ಕಲಾವಿದರು ಭಾಗವಹಿಸಿ ನೃತ್ಯ ಪ್ರದರ್ಶಿಸಿದರು.
Leave a Comment