ಕಾರವಾರ:
ಕರಾವಳಿ ಉತ್ಸವ 2017ರ ಅಂಗವಾಗಿ ಕಲ್ಲಿನ ಶಿಲ್ಪಕಲಾ ಕೃತಿ ರಚನಾ ಶಿಬಿರ ನಡೆಸಲಾಗುತ್ತಿದ್ದು, ಆಸಕ್ತ ಕಲಾವಿದರು ನ.18 ರೊಳಗೆ ತಮ್ಮ ಹೆಸರುಗಳನ್ನು ಶಿಲ್ಪ ಕಲಾ ನಿರ್ಮಾಣ ಸಮಿತಿ ಬಳಿ ಹೆಸರು ನೊಂದಾಯಿಸಿಕೊಳ್ಳಲು ಶಿಲ್ಪ ಕಲಾ ನಿರ್ಮಾಣ ಸಮಿತಿ ಅಧ್ಯಕ್ಷರು ವಿನಂತಿಸಿದ್ದಾರೆ.
ಉತ್ಸವದ ಅಂಗವಾಗಿ ನಡೆಯುವ ಶಿಲ್ಪಕಲಾ ರಚನಾ ಶಿಬಿರದಲ್ಲಿ ರೂಪಗೊಂಡ ಕಲಾ ಕೃತಿಗಳನ್ನು ರಾಕ್ ಗಾರ್ಡನ್ನಲ್ಲಿ ಪ್ರತಿಷ್ಠಾಪಿಸಲು ಯೋಜಿಸಲಾಗಿದೆ. ಜಿಲ್ಲೆಯ ಮತ್ತು ಹೊರ ಜಿಲ್ಲೆಗಳ ಶಿಲ್ಪಕಲಾ ಕಲಾವಿದರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಲ್ಪಕಲಾ ಕಲಾವಿದರಿಗೆ ಊಟ, ವಸತಿ ಸೌಲಭ್ಯವನ್ನು ಉತ್ಸವ ಸಮಿತಿ ಮಾಡುತ್ತದೆ. ಶಿಲ್ಪದಲ್ಲಿ ರೂಪಿಸಿದ ಕಲಾಕೃತಿಗಳಿಗೆ ಸೂಕ್ತ ಗೌರವಧನವನ್ನು ಸಹ ನೀಡಲಾಗುವುದು. ಉತ್ತರ ಕನ್ನಡ ಪ್ರಕೃತಿ, ಸಾಹಿತ್ಯ, ಸಂಸ್ಕøತಿ ಮತ್ತು ಆಧುನಿಕ ಶೈಲಿಯ ಭಾರತೀಯ ಸಂಸ್ಕøತಿಯ ಶಿಲ್ಪಗಳನ್ನು ಕಲಾತ್ಮಕ ಶಿಲ್ಪಕಲಾ ಕೃತಿಗಳನ್ನು ಶಿಬಿರದಲ್ಲಿ ರೂಪಿಸಲು ಕಲಾವಿದರನ್ನು ಆಹ್ವಾನಿಸಲಾಗುತ್ತಿದ್ದು, 40 ಜನ ಶಿಲ್ಪಕಲಾವಿದರು ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಆಕಸ್ತ ಕಲಾವಿದರು ತಮ್ಮ ಹೆಸರು ಮತ್ತು ವಿವರಗಳನ್ನು ಶಿಲ್ಪಕಲಾ ನಿರ್ಮಾಣ ಸಮಿತಿ, ಕರಾವಳಿ ಉತ್ಸವ-2017, ಮೊಬೈಲ್ ಸಂಖ್ಯೆ 9448221338 ಕ್ಕೆ ಕರೆ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು. ನ.18 ಹೆಸರು ನೊಂದಾಯಿಸಲು ಕೊನೆಯ ದಿನ. ಶಿಬಿರ 15 ರಿಂದ 20 ದಿನಗಳ ಕಾಲ ನಡೆಯಲಿದ್ದು, ಶಿಲ್ಪಕಲಾ ಶಿಬಿರ ಪ್ರಾರಂಭವಾಗುವ ದಿನಾಂಕವನ್ನು ಕಲಾವಿದರಿಗೆ ತಿಳಿಸಲಾಗುವುದು ಎಂದು ಶಿಲ್ಪಕಲಾ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಎಸ್.ಯೋಗಿಶ್ವರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment