ಹೊನ್ನಾವರ ,25 ನೇ ಅಂತರಾಷ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಅಂಗವಾಗಿ ಕಾರವಾರ ಶೈಕ್ಷಣಿಕ ಜಿಲ್ಲೆಯ ಮಕ್ಕಳ ವಿಜ್ಞಾನ ಸಮಾವೇಶವನ್ನು ದಿ 24ರಂದು ಶುಕ್ರವಾರ ಬೆಳಿಗ್ಗೆ 10.00 ಗಂಟೆಗೆ ಶ್ರೀ ಚನ್ನಕೇಶವ ಪ್ರೌಢ ಶಾಲೆ ಕರ್ಕಿ ತಾಲೂಕ ಹೊನ್ನಾವರದಲ್ಲಿಏರ್ಪಡಿಸಲಾಗಿದೆ.ಕೇಂದ್ರ ವಿಷಯವಾದ “ಸುಸ್ಥಿರ ಅಭಿವೃಧ್ಧಿಗೆ ವಿಜ್ಞಾನ ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ” ಎಂಬ ವಿಷಯದ ಅಡಿಯಲ್ಲಿ ವಿಜ್ಞಾನ ಪ್ರಬಂಧ ಮಂಡನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ತರಬೇತಿ ಪಡೆದ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಹಾಜರಿದ್ದು ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜ್ಞಾನ ಸಮಾವೇಶದ ಯಶಸ್ವಿಗೆ ಕಾರಣರಾಗಬೇಕೆಂದು ಜಿಲ್ಲಾ ಸಮನ್ವಯಕರಾದ ಶ್ರೀಕಾಂತ ಹಿಟ್ನಳ್ಳಿ ಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9449236598 ಕ್ಕೆ ಸಂಪರ್ಕಿಸಬೇಕೆಂದು ತಿಳಿಸಿರುತ್ತಾರೆ.
Leave a Comment