ಕಾರವಾರ: ಭಾರತೀಯ ನೌಕಾನೆಲೆ ವೀಕ್ಷಣೆಗಾಗಿ ಶಾಸಕ ಹಾಗೂ ಅಧಿಕಾರಿಗಳನ್ನು ಒಳಗೊಂಡ ತಂಡ ಕಾರವಾರಕ್ಕೆ ಭೇಟಿ ನೀಡಿದೆ.
ಶನಿವಾರ ಮದ್ಯಾಹ್ನ 12 ಗಂಟೆ ವೇಳೆಗೆ ನಾಲ್ಕು ಐಷಾರಾಮಿ ಬಸ್ಗಳಲ್ಲಿ ಜನಪ್ರತಿನಿಧಿಗಳು ನೌಕಾನೆಲೆ ಪ್ರವೇಶಿಸಿದರು. ಸಂಜೆ 7.40ರ ವರೆಗೂ ನೌಕಾನೆಲೆ ಕುರಿತು ಶಾಸಕರು ಅದ್ಯಯನ ನಡೆಸಿದರು. ಐ.ಎನ್.ಎಸ್ ಆದಿತ್ಯ ಯುದ್ದನೌಕೆಯಲ್ಲಿ ಸುಮಾರು ಒಂದುವರೆ ಗಂಟೆಗಳ ಕಾಲ ಅರಬ್ಬಿ ಸಮುದ್ರದಲ್ಲಿ ಸಂಚರಿಸಿದ ಶಾಸಕರು ಯುದ್ದನೌಕೆಯ ಕುರಿತು ಸಮಗ್ರ ಮಾಹಿತಿ ಪಡೆದರು. ನಂತರ ದೇಶದ ಅತಿ ದೊಡ್ಡ ಯುದ್ದನೌಕೆ ಐ.ಎನ್.ಎಸ್ ವಿಕ್ರಮಾದಿತ್ಯವನ್ನು ವೀಕ್ಷಿಸಿದರು. 35ಕ್ಕೂ ಅಧಿಕ ಹೆಲಿಕಾಪ್ಟರ್ ಹಾಗೂ ಹಲವು ಯುದ್ದ ವಿಮಾನಗಳ ಹಾರಾಟವನ್ನು ಗಮನಿಸಿದರು. ತುರ್ತು ಪರಿಸ್ಥಿತಿಯಲ್ಲಿ ಬಳಸುವ ಶಸ್ತ್ರಾಸ್ತ್ರಗಳನ್ನು ವೀಕ್ಷಣೆ ಮಾಡಿದರು. ಸಮುದ್ರದಲ್ಲಿ ಬಿದ್ದವರ ಜೀವ ರಕ್ಷಣೆ ಹಾಗೂ ಇತರೆ ಚಟುವಟಿಕೆಗಳ ಕುರಿತು ನೌಕಾನೆಲೆ ಅಧಿಕಾರಿಗಳು ಪ್ರಾತಕ್ಷಿತೆ ನಡೆಸಿದರು. ಕದಂಬ ನೌಕಾನೆಲೆ ಹಾಗೂ ಅಲ್ಲಿ ನಡೆಯುವ ಚಟುವಟಿಕೆಗಳ ಕುರಿತು ಜನಪ್ರತಿನಿಧಿಗಳು ಅದ್ಯಯನ ನಡೆಸಿದರು. ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಿದ್ದ ಶಾಸಕರನ್ನು ಪ್ರಧಾನಿ ನರೇಂದ್ರ ಮೋದಿ ನೌಕಾನೆಲೆ ವೀಕ್ಷಣೆಗೆ ಆಮಂತ್ರಿಸಿದ್ದರು. ಇದೇ ಮೊದಲ ಬಾರಿಗೆ ನೌಕಾನೆಲೆ ಭೇಟಿ ನೀಡಿದ ಶಾಸಕರು ಭಾರತೀಯ ನೌಕಾ ವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
Leave a Comment