ಕಾರವಾರ:
ಜಿಲ್ಲಾ ಹಿರಿಯ ನಾಗರಿಕ ಸಬಲೀಕರಣ ಮತ್ತು ವಿಕಲಚೇತನ ಇಲಾಖೆಯಿಂದ ವಿಕಲಚೇತನರಿಗೆ ನೀಡಲಾಗುವ ತ್ರೀಚಕ್ರ ವಾಹನವನ್ನು 25ಕ್ಕೂ ಹೆಚ್ಚು ಫಲಾನುಭವಿಗಳಿಗೆ ವಿತರಿಸಿದೆ.
ಕನ್ನಡ ರಾಜ್ಯೋತ್ಸವದಂದು ವಿಕಲಚೇತನರಿಗೆ ದ್ವೀಚಕ್ರ ವಾಹನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಕೀ ಕೊಟ್ಟು ಪೋಟೊ ತೆಗೆಸಿದ್ದ ಅಧಿಕಾರಿಗಳು ಬಳಿಕ ವಾಹನವನ್ನು ನೀಡಲು ಸತಾಯಿಸುತ್ತಿದ್ದರು. ಅಲ್ಲದೆ ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಮುಂಡಗೇರಿಯ ನಯಾಜ್ ಸೈಯದ್ ಎಂಬುವವರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಇದು ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಬಳಿಕ ವರದಿಯಿಂದ ಎಚ್ಚೆತ್ತುಕೊಂಡ ಇಲಾಖೆ ಎಲ್ಲ ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಿದೆ.
ಇಲಾಖೆಯೇ ಫಲಾನುಭವಿಗಳನ್ನು ಸಂಪರ್ಕಿಸಿ ವಾಹನವನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದೆ. ಆದರೆ ವಾಹನಗಳು ಕಳೆದ 15 ದಿನಗಳಿಂದ ಹಾಗೆ ಇಟ್ಟಿದ್ದರಿಂದ ದೂಳು ಹಿಡಿದಿದ್ದು, ಫಲಾನುಭವಿಗಳು ವಾಹನ ಪ್ರಾರಂಭಿಸಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
Leave a Comment