ಹೊನ್ನಾವರ: ಪಟ್ಟಣದ ರಾಮತೀರ್ಥ ಗುಡ್ಡದ ಬಳಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಬಹುಮಹಡಿ ಕಟ್ಟಡ ಅಕ್ರಮವಾಗಿ ತಲೆ ಎತ್ತುತ್ತಿದ್ದು, ಕಂದಾಯ ಮತ್ತು ಅರಣ್ಯ ಇಲಾಖೆಯ ಎಲ್ಲಾ ನೀತಿ, ನಿಯಮಾವಳಿಗಳನ್ನು ಗಾಳಿಗೆ ತೂರಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಹೊನ್ನಾವರ ಪಟ್ಟಣ ಪಂಚಾಯತ ನಿರ್ಗಮಿತ ಅಧ್ಯಕ್ಷೆ ಜೈನಾಬಿ ಇಸ್ಮಾಯಿಲ್ ಸಾಬ ಗಂಭೀರ ಆರೋಪಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೊನ್ನಾವರ: ಪಟ್ಟಣದ ರಾಮತೀರ್ಥ ಗುಡ್ಡದ ಬಳಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಬಹುಮಹಡಿ ಕಟ್ಟಡ ಅಕ್ರಮವಾಗಿ ತಲೆ ಎತ್ತುತ್ತಿದ್ದು, ಕಂದಾಯ ಮತ್ತು ಅರಣ್ಯ ಇಲಾಖೆಯ ಎಲ್ಲಾ ನೀತಿ, ನಿಯಮಾವಳಿಗಳನ್ನು ಗಾಳಿಗೆ ತೂರಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಹೊನ್ನಾವರ ಪಟ್ಟಣ ಪಂಚಾಯತ ನಿರ್ಗಮಿತ ಅಧ್ಯಕ್ಷೆ ಜೈನಾಬಿ ಇಸ್ಮಾಯಿಲ್ ಸಾಬ ಗಂಭೀರ ಆರೋಪಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಡು ಬಡವರು ವಾಸ್ತವ್ಯಕ್ಕಾಗಿ ತುಂಡು ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡರೆ, ಅರಣ್ಯಾಧಿಕಾರಿಗಳು ತಕ್ಷಣ ಜೆ.ಸಿ.ಬಿ.ಯೊಂದಿಗೆ ಬಂದು ನಿರ್ದಾಕ್ಷೀಣ್ಯವಾಗಿ ಕಿತ್ತೆಸೆಯುತ್ತಾರೆ. ಆದರೆ ಇಂತಹ ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸುತ್ತಿರುವ ಒಂದೇ ಒಂದು ಬಹುಮಹಡಿ ಕಟ್ಟಡಕ್ಕೆ 20 ಮೀಟರ ಅಗಲದ ಸುಮಾರು 400 ಮೀಟರ ಉದ್ದದ ರಸ್ತೆ ನಿರ್ಮಿಸಿ ಸಾರ್ವಜನಿಕ ಬಳಕೆಗೆ ಕಚ್ಚಾ ರಸ್ತೆ ಎಂದು ತೋರಿಸುತ್ತಿರುವುದು ಅರಣ್ಯಾಧಿಕಾರಿಗಳ ದ್ವಂದ್ವ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಆಪಾದಿಸಿದ್ದಾರೆ.
ರಾಮತೀರ್ಥ ಗುಡ್ಡದ ಮೇಲೆ ಚಂದಾವರ ರಸ್ತೆ ಮಾರ್ಗದಲ್ಲಿ ಸ.ನಂ. 517ಎಚ್/2 ನೇದರ 10 ಗುಂಟೆ ಸ್ಥಳವು ಹೊನ್ನಾವರ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ರವೀಂದ್ರ ಶಿವಪ್ಪ ನಾಯ್ಕ ಅವರ ಪತ್ನಿ ಸವಿತಾ ರವೀಂದ್ರ ನಾಯ್ಕ ಇವರ ಹೆಸರಿನಲ್ಲಿರುವ ಕೃಷಿ ಭೂಮಿಯಾಗಿದ್ದು, ಕಂದಾಯ ಇಲಾಖೆ ತನ್ನ ಎಲ್ಲಾ ನಿಯಮಾವಳಿಗಳನ್ನು ಉಲ್ಲಂಘಿಸಿ, ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ನಗರ ಯೋಜನಾ ಪ್ರಾಧಿಕಾರ ನಗರದ ಬಡ ಅರ್ಜಿದಾರರಿಗೆ ಪ್ರಾಧಿಕಾರದ ಒಪ್ಪಿಗೆ ಪಡೆಯಲು ಒಂದಿಲ್ಲೊಂದು ಕಾರಣ ನೀಡಿ ಅಲ್ಲಿಂದಿಲ್ಲಿಗೆ ಅಲೆದಾಡಿಸುತ್ತಿದ್ದು, ಇಂತವರ ಕಡತಗಳು ಸಲಿಸಾಗಿ ಪ್ರಾಧಿಕಾರದ ಒಪ್ಪಿಗೆ ಪಡೆಯುತ್ತಿರುವುದು ಆಶ್ಚರ್ಯ ತಂದಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೆಲ್ಲವನ್ನು ಮೀರಿ ಈ ಬಹುಮಹಡಿ ಕಟ್ಟಡದಲ್ಲಿ ಬಾರ್ ಎಂಡ್ ರೆಸ್ಟೊರೆಂಟ್ ಮಾಡಲು ಸಾರ್ವಜನಿಕರು ವಿರೋಧಿಸಿದ್ದರಿಂದ, ರಾಮತೀರ್ಥದಂತಹ ಪುಣ್ಯ ಭೂಮಿಯಲ್ಲಿ ಬಾರ್ ಎಂಡ್ ರೆಸ್ಟೊರೆಂಟ್ಗೆ ಪರವಾನಿಗೆ ನೀಡಲು ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ನಿರಾಕರಿಸಿದ್ದೇನೆ. ಆದ ಕಾರಣ ಹೊನ್ನಾವರ ಪಟ್ಟಣ ಪಂಚಾಯತ ಅಧ್ಯಕ್ಷೆಯಾಗಿದ್ದ ನನ್ನ ವಿರುದ್ಧ ಪಿತೂರಿ ನಡೆಸಿ ಕೆಲ ಸದಸ್ಯರುಗಳನ್ನು ಎತ್ತಿ ಕಟ್ಟಿ ನನ್ನ ವಿರುದ್ಧ ಅವಿಶ್ವಾಸ ಮಂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಾರಣ ಕೂಡಲೇ ಉತ್ತರಕನ್ನಡ ಜಿಲ್ಲೆಯ ದಕ್ಷ ಜಿಲ್ಲಾಧಿಕಾರಿಗಳು ಮತ್ತು ಹೊನ್ನಾವರದ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಮಧ್ಯಪ್ರವೇಶಿಸಿ ಇಂತಹ ಶರತ್ತುಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಕಟ್ಟುತ್ತಿರುವ ಬಹುಮಹಡಿ ಕಟ್ಟಡಗಳಿಗೆ ತಡೆ ಹಾಕುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದೇನೆ. ಇಂತಹ ಅಕ್ರಮದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಬಡ ಅರಣ್ಯ ಅತಿಕ್ರಮಣದಾರರೊಂದಿಗೆ ಸೇರಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
Leave a Comment