• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮನೆ ಕಳ್ಳತನ;ಆರೋಪಿಗಳ ಬಂಧನ

November 23, 2017 by Sachin Hegde Leave a Comment

ಹಳಿಯಾಳ:-

ಕಳೆದ 18 ತಿಂಗಳ ಅವಧಿಯಲ್ಲಿ ಹಳಿಯಾಳ ಪಟ್ಟಣ ಹಾಗೂ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮತ್ತು ಹುಬ್ಬಳ್ಳಿಯ ಕೆಲವು ಕಡೆ ಮನೆ ಕಳ್ಳತನ ಮಾಡಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು 13 ಲಕ್ಷ ರೂ. ಬೆಲೆ ಭಾಳುವ ಚಿನ್ನಾಭರಣ ಹಾಗೂ ಕಳುವಿಗೆ ಬಳಸುತ್ತಿದ್ದ ವಸ್ತುಗಳೊಂದಿಗೆ ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಹಳಿಯಾಳ:-  ಕಳೆದ 18 ತಿಂಗಳ ಅವಧಿಯಲ್ಲಿ ಹಳಿಯಾಳ ಪಟ್ಟಣ ಹಾಗೂ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮತ್ತು ಹುಬ್ಬಳ್ಳಿಯ ಕೆಲವು ಕಡೆ ಮನೆ ಕಳ್ಳತನ ಮಾಡಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು 13 ಲಕ್ಷ ರೂ. ಬೆಲೆ ಭಾಳುವ ಚಿನ್ನಾಭರಣ ಹಾಗೂ ಕಳುವಿಗೆ ಬಳಸುತ್ತಿದ್ದ ವಸ್ತುಗಳೊಂದಿಗೆ ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ.   ಕಾರ್ಯಾಚರಣೆಯ ಕುರಿತು ಸುದ್ದಿಗೊಷ್ಠಿಯಲ್ಲಿ ಲಿಖಿತ ಹೇಳಿಕೆಯೊಂದಿಗೆ ಮಾಹಿತಿ ನೀಡಿದ ಡಿವೈಎಸ್ಪಿ ದಯಾನಂದ ಪವಾರ ಪಟ್ಟಣದ ಕೆಎಚ್‍ಬಿ ಕಾಲೊನಿಯೊಂದಿಗೆ ಸಮೀಪದ ಹವಗಿ ಹಾಗೂ ತೇರಗಾಂವ್ ಗ್ರಾಮದ ಮನೆಗಳಿಂದ ಕಳವು ಮಾಡಲಾದ ಆಭರಣಗಳು ಹಾಗೂ ಅಪಾದಿತರು ಒಪ್ಪಿಕೊಂಡಂತೆ ಹುಬ್ಬಳ್ಳಿಯ ಕಾರವಾರ ರಸ್ತೆಯ, ಗೌರಿಶಂಕರ ನಗರದ ಮನೆಯೊಂದರಲ್ಲಿ ದೋಚಿದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು.  ಹಳೆ ಹುಬ್ಬಳ್ಳಿಯ ಬಂಕಾಪುರ ಚೌಕದ ರಹವಾಸಿ ಹುಸೇನಸಾಬ ಯಾನೆ ಹುಸೇನಿ ಇಮಾಂಸಾಬ ಕನವಳ್ಳಿ(23) ವೃತ್ತಿಯಲ್ಲಿ ಗೌಂಡಿ  ಮತ್ತು ಹುಬ್ಬಳ್ಳಿಯ ಬಂಕಾಪುರ ಚೌಕದ ಯಲ್ಲಾಫುರ ಓಣಿ, ಗೊಲ್ಲರ ಕಾಲನಿಯವನಾದ ಹಮಾಲಿ ಕೆಲಸ ಮಾಡುವ ರಾಜು ಯಾನೆ ಜಂಗ್ಲ್ಯಾ ಗಡೆಪ್ಪಾ ಬಿಲಾಲ(29) ಬಂಧಿತ ಆರೋಪಿಗಳಾಗಿದ್ದಾರೆ.  ಅಪಾದಿತರು ನೀಡಿದ ಮಾಹಿತಿಯ ಮೇರೆಗೆ ಅವರ ಮನೆಗಳಿಂದ ಒಟ್ಟು 430 ಗ್ರಾಮ ಬಂಗಾರದ ಆಭರಣಗಳು ವಶ ಪಟಿಸಿಕೊಳ್ಳಲಾಗಿದ್ದು ಅವುಗಳ ಬೆಲೆ ಸುಮಾರು 13 ಲಕ್ಷ ರೂ ಎಂದು ಹೇಳಲಾಗಿದೆ. ಕಾರವಾರ ಎಸ್‍ಪಿ ವಿನಾಯಕ ಪಾಟೀಲ ಹಾಗೂ ಡಿಎಸ್‍ಪಿ ದಯಾನಂದ ಪವಾರರವರ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಸಿಪಿಐ ಸುಂದರೇಶ ಹೊಳೆನ್ನವರ, ಪಿಎಸ್‍ಐ ಮಲ್ಲು ಹೂಗಾರ್, ಎಎಸೈಗಳಾದ ಪಿಎಮ್ ಸೊಲ್ಲಾಪುರ ಮತ್ತು ಎ.ಡಿ.ಪಾವಸ್ಕರ ಸಿಬ್ಬಂದಿಗಳಾದ ಅಶೋಕ ಹುಬ್ಬಳ್ಳಿ, ಸಂಜು ಅಣ್ಣಿಗೇರಿ, ಗೋವಿಂಧ ಉಪ್ಪಾರ, ಜಗದೀಶ ಕುಂಬಾರ, ಪರಶುರಾಮ, ನಿಂಗಪ್ಪಾ ಬಳ್ಳಾರಿ, ಮಂಜುನಾಥ ದೊಣ್ಣಿ, ಗುರೆಪ್ಪಾ ವಡ್ಡರ, ನವೋಮಿ, ನಾಗರಾಜ ನಾಯ್ಕ, ರಮೇಶ ಕಾರಬಾರಿ, ಗುರುರಾಜ ಬಿಸ್ಟಣ್ಣವರ ಹಾಗು ಹೋಮಗಾರ್ಡ ಬಾಬು ಮತ್ತು ಉಪ್ಪಾರ ಕೂಡ ಭಾಗವಹಿಸ್ದರು ಎಂದು ತಿಳಿಸಿಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಗಾಗಿ ಸಾರ್ವಜನಿಕರು ಹಳಿಯಾಳ ಪೋಲಿಸರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  ಇನ್ನೂ ತಾಲೂಕಿನ ಮುಂಡವಾಡ ಗ್ರಾಮದ ಬಸ್ ನಿಲ್ದಾಣದ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಓರ್ವ ಕಳ್ಳನನ್ನು ಹಳಿಯಾಳದ ಸಿಪಿಐ ಸುಂದರೇಶ ಹೊಳೆನ್ನವರ, ಪಿಎಸ್‍ಐ ಮಲ್ಲು ಹೂಗಾರ ಹಾಗೂ ಅವರ 10 ಜನ ಸಹಾಯಕರು ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿದ್ದು ವಿಚಾರಣೆ ನಡೆಯುತ್ತಿದ್ದು ಮಾಹಿತಿ ನೀಡಲಾಗುವುದೆಂದು ಪೋಲಿಸರು ತಿಳಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News Tagged With: ಆರೋಪಿಗಳ ಬಂಧನ, ಕ ಹುಬ್ಬಳ್ಳಿ, ಕಳ್ಳತನ ಮಾಡಿ, ಗುರೆಪ್ಪಾ ವಡ್ಡರ, ಗೋವಿಂಧ ಉಪ್ಪಾರ, ಗ್ರಾಮಗಳಲ್ಲಿ, ಚಿನ್ನಾಭರಣ, ಜಗದೀಶ ಕುಂಬಾರ, ನಗದು ಕಳ್ಳತನ, ನಿಂಗಪ್ಪಾ ಬಳ್ಳಾರಿ, ಪರಶುರಾಮ, ಮಂಜುನಾಥ ದೊಣ್ಣಿ, ಮನೆ ಕಳ್ಳತನ, ಸಂಜು ಅಣ್ಣಿಗೇರಿ, ಹಳಿಯಾಳ ಪಟ್ಟಣ, ಹುಬ್ಬಳ್ಳಿ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar