ಹಳಿಯಾಳ:-
ಕಳೆದ 18 ತಿಂಗಳ ಅವಧಿಯಲ್ಲಿ ಹಳಿಯಾಳ ಪಟ್ಟಣ ಹಾಗೂ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮತ್ತು ಹುಬ್ಬಳ್ಳಿಯ ಕೆಲವು ಕಡೆ ಮನೆ ಕಳ್ಳತನ ಮಾಡಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು 13 ಲಕ್ಷ ರೂ. ಬೆಲೆ ಭಾಳುವ ಚಿನ್ನಾಭರಣ ಹಾಗೂ ಕಳುವಿಗೆ ಬಳಸುತ್ತಿದ್ದ ವಸ್ತುಗಳೊಂದಿಗೆ ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಹಳಿಯಾಳ:- ಕಳೆದ 18 ತಿಂಗಳ ಅವಧಿಯಲ್ಲಿ ಹಳಿಯಾಳ ಪಟ್ಟಣ ಹಾಗೂ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮತ್ತು ಹುಬ್ಬಳ್ಳಿಯ ಕೆಲವು ಕಡೆ ಮನೆ ಕಳ್ಳತನ ಮಾಡಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು 13 ಲಕ್ಷ ರೂ. ಬೆಲೆ ಭಾಳುವ ಚಿನ್ನಾಭರಣ ಹಾಗೂ ಕಳುವಿಗೆ ಬಳಸುತ್ತಿದ್ದ ವಸ್ತುಗಳೊಂದಿಗೆ ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯ ಕುರಿತು ಸುದ್ದಿಗೊಷ್ಠಿಯಲ್ಲಿ ಲಿಖಿತ ಹೇಳಿಕೆಯೊಂದಿಗೆ ಮಾಹಿತಿ ನೀಡಿದ ಡಿವೈಎಸ್ಪಿ ದಯಾನಂದ ಪವಾರ ಪಟ್ಟಣದ ಕೆಎಚ್ಬಿ ಕಾಲೊನಿಯೊಂದಿಗೆ ಸಮೀಪದ ಹವಗಿ ಹಾಗೂ ತೇರಗಾಂವ್ ಗ್ರಾಮದ ಮನೆಗಳಿಂದ ಕಳವು ಮಾಡಲಾದ ಆಭರಣಗಳು ಹಾಗೂ ಅಪಾದಿತರು ಒಪ್ಪಿಕೊಂಡಂತೆ ಹುಬ್ಬಳ್ಳಿಯ ಕಾರವಾರ ರಸ್ತೆಯ, ಗೌರಿಶಂಕರ ನಗರದ ಮನೆಯೊಂದರಲ್ಲಿ ದೋಚಿದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು. ಹಳೆ ಹುಬ್ಬಳ್ಳಿಯ ಬಂಕಾಪುರ ಚೌಕದ ರಹವಾಸಿ ಹುಸೇನಸಾಬ ಯಾನೆ ಹುಸೇನಿ ಇಮಾಂಸಾಬ ಕನವಳ್ಳಿ(23) ವೃತ್ತಿಯಲ್ಲಿ ಗೌಂಡಿ ಮತ್ತು ಹುಬ್ಬಳ್ಳಿಯ ಬಂಕಾಪುರ ಚೌಕದ ಯಲ್ಲಾಫುರ ಓಣಿ, ಗೊಲ್ಲರ ಕಾಲನಿಯವನಾದ ಹಮಾಲಿ ಕೆಲಸ ಮಾಡುವ ರಾಜು ಯಾನೆ ಜಂಗ್ಲ್ಯಾ ಗಡೆಪ್ಪಾ ಬಿಲಾಲ(29) ಬಂಧಿತ ಆರೋಪಿಗಳಾಗಿದ್ದಾರೆ. ಅಪಾದಿತರು ನೀಡಿದ ಮಾಹಿತಿಯ ಮೇರೆಗೆ ಅವರ ಮನೆಗಳಿಂದ ಒಟ್ಟು 430 ಗ್ರಾಮ ಬಂಗಾರದ ಆಭರಣಗಳು ವಶ ಪಟಿಸಿಕೊಳ್ಳಲಾಗಿದ್ದು ಅವುಗಳ ಬೆಲೆ ಸುಮಾರು 13 ಲಕ್ಷ ರೂ ಎಂದು ಹೇಳಲಾಗಿದೆ. ಕಾರವಾರ ಎಸ್ಪಿ ವಿನಾಯಕ ಪಾಟೀಲ ಹಾಗೂ ಡಿಎಸ್ಪಿ ದಯಾನಂದ ಪವಾರರವರ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಸಿಪಿಐ ಸುಂದರೇಶ ಹೊಳೆನ್ನವರ, ಪಿಎಸ್ಐ ಮಲ್ಲು ಹೂಗಾರ್, ಎಎಸೈಗಳಾದ ಪಿಎಮ್ ಸೊಲ್ಲಾಪುರ ಮತ್ತು ಎ.ಡಿ.ಪಾವಸ್ಕರ ಸಿಬ್ಬಂದಿಗಳಾದ ಅಶೋಕ ಹುಬ್ಬಳ್ಳಿ, ಸಂಜು ಅಣ್ಣಿಗೇರಿ, ಗೋವಿಂಧ ಉಪ್ಪಾರ, ಜಗದೀಶ ಕುಂಬಾರ, ಪರಶುರಾಮ, ನಿಂಗಪ್ಪಾ ಬಳ್ಳಾರಿ, ಮಂಜುನಾಥ ದೊಣ್ಣಿ, ಗುರೆಪ್ಪಾ ವಡ್ಡರ, ನವೋಮಿ, ನಾಗರಾಜ ನಾಯ್ಕ, ರಮೇಶ ಕಾರಬಾರಿ, ಗುರುರಾಜ ಬಿಸ್ಟಣ್ಣವರ ಹಾಗು ಹೋಮಗಾರ್ಡ ಬಾಬು ಮತ್ತು ಉಪ್ಪಾರ ಕೂಡ ಭಾಗವಹಿಸ್ದರು ಎಂದು ತಿಳಿಸಿಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಗಾಗಿ ಸಾರ್ವಜನಿಕರು ಹಳಿಯಾಳ ಪೋಲಿಸರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನೂ ತಾಲೂಕಿನ ಮುಂಡವಾಡ ಗ್ರಾಮದ ಬಸ್ ನಿಲ್ದಾಣದ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಓರ್ವ ಕಳ್ಳನನ್ನು ಹಳಿಯಾಳದ ಸಿಪಿಐ ಸುಂದರೇಶ ಹೊಳೆನ್ನವರ, ಪಿಎಸ್ಐ ಮಲ್ಲು ಹೂಗಾರ ಹಾಗೂ ಅವರ 10 ಜನ ಸಹಾಯಕರು ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿದ್ದು ವಿಚಾರಣೆ ನಡೆಯುತ್ತಿದ್ದು ಮಾಹಿತಿ ನೀಡಲಾಗುವುದೆಂದು ಪೋಲಿಸರು ತಿಳಿಸಿದ್ದಾರೆ.
Leave a Comment