ಹಳಿಯಾಳ: ಮುರ್ಕವಾಡ ಹಾಗೂ ಬೆಳವಟಗಿ ವಲಯ ವ್ಯಾಪ್ತಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯದವರು ಎಂದು ಹೇಳಿಕೊಂಡ ಕೆಲವರು ಏಕಾಏಕಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಅಂಗನವಾಡಿ ನೌಕರರನ್ನು ಹೊರಹಾಕಿ ಅಲ್ಲಿನ ಸಾಮಗ್ರಿಗಳನ್ನು ಪರಿಶೀಲಿಸಿ, ಕೇಂದ್ರದ ದಾಖಲಾತಿಗಳನ್ನೆಲ್ಲಾ ಸಿಡಿಪಿಓ ಇಲಾಖೆ ಪರವಾನಿಗೆ ಇಲ್ಲದೇ ಪರಿಶೀಲನೆ ನಡೆಸಿ ಗೊಂದಲ ಸೃಷ್ಠಿಸಿ, ಭಯದ ವಾತಾವರಣ ನಿರ್ಮಾಣ ಮಾಡಿದ್ದು ಘಟನೆಗೆ ಸಂಬಂಧಿಸಿ ಸಂಘಟನೆಯ ಮೇಲೆ ಕಾನೂನು ಕ್ರಮ ಒದಗಿಸಿ ಅಂಗನವಾಡಿ ಕೆಲಸಗಳು ಮುಕ್ತವಾಗಿ ನಡೆಸುವಂತೆ ಹಾಗೂ ಅಂಗನಾಡಿ ಕಾರ್ಯಕರ್ತರಿಗೆ ನಿರ್ಭಯವಾಗಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಸಿಐಟಿಯೂ ಸಂಘಟನೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ.ಹಳಿಯಾಳ: ಮುರ್ಕವಾಡ ಹಾಗೂ ಬೆಳವಟಗಿ ವಲಯ ವ್ಯಾಪ್ತಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯದವರು ಎಂದು ಹೇಳಿಕೊಂಡ ಕೆಲವರು ಏಕಾಏಕಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಅಂಗನವಾಡಿ ನೌಕರರನ್ನು ಹೊರಹಾಕಿ ಅಲ್ಲಿನ ಸಾಮಗ್ರಿಗಳನ್ನು ಪರಿಶೀಲಿಸಿ, ಕೇಂದ್ರದ ದಾಖಲಾತಿಗಳನ್ನೆಲ್ಲಾ ಸಿಡಿಪಿಓ ಇಲಾಖೆ ಪರವಾನಿಗೆ ಇಲ್ಲದೇ ಪರಿಶೀಲನೆ ನಡೆಸಿ ಗೊಂದಲ ಸೃಷ್ಠಿಸಿ, ಭಯದ ವಾತಾವರಣ ನಿರ್ಮಾಣ ಮಾಡಿದ್ದು ಘಟನೆಗೆ ಸಂಬಂಧಿಸಿ ಸಂಘಟನೆಯ ಮೇಲೆ ಕಾನೂನು ಕ್ರಮ ಒದಗಿಸಿ ಅಂಗನವಾಡಿ ಕೆಲಸಗಳು ಮುಕ್ತವಾಗಿ ನಡೆಸುವಂತೆ ಹಾಗೂ ಅಂಗನಾಡಿ ಕಾರ್ಯಕರ್ತರಿಗೆ ನಿರ್ಭಯವಾಗಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಸಿಐಟಿಯೂ ಸಂಘಟನೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ. ಸಿಐಟಿಯೂ ಸಂಘಟನೆಯವರು ಸಭೆ ಸೇರಿ ಘಟನೆಯ ಕುರಿತು ಖಂಡನೆ ವ್ಯಕ್ತಪಡಿಸಿ ಬಳಿಕ ಇಲ್ಲಿಯ ಮಿನಿ ವಿಧಾನ ಸೌಧಕ್ಕೆ ಆಗಮಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕಳೆದ 30-40 ವರ್ಷಗಳಿಂದ 6 ವರ್ಷಗಳ ಮಕ್ಕಳಿಗೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಹಾಗೂ ಪ್ರಾಯಪೂರ್ವ ಬಾಲಕಿಯರಿಗೆ ಅಧಿಕ ಪೋಷಕಾಂಶ ಒದಗಿಸುವುದು ಮತ್ತು 3-6 ವರ್ಷಗಳ ನಡುವಣ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವುದು ಮಾಡುತ್ತಿದ್ದು ಸರ್ಕಾರ ಪ್ರಾರಂಭಿಸಿದ ಮಾತೃಪೂರ್ಣ ಯೋಜನೆಗಳಂತಹ ಹತ್ತು ಹಲವು ಕೆಲಸಗಳು ಅಂಗನವಾಡಿ ನೌಕರರಿಂದಲೇ ಮಾಡಿಸುತ್ತಿದ್ದು ಸಾಕಷ್ಟು ಕೆಲಸಗಳ ಒತ್ತಡ ಹಾಕಿದರು ಪ್ರಾಮಾಣಿಕವಾಗಿ ಸರ್ಕಾರದ ಕೆಲಸವನ್ನು ಮಾಡುತ್ತಿದ್ದಾರೆ. ಆದರೇ ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯವರು ಎಂದು ಹೇಳಿಕೊಂಡು ಕಾರಿನಲ್ಲಿ ಬಂದು ಮುರ್ಕವಾಡ ಹಾಗೂ ಬೆಳವಟಗಿ ವಲಯ ವ್ಯಾಪ್ತಿಯಲ್ಲಿ ಏಕಾಏಕಿ ಅಂಗನವಾಡಿ ಕೇಂದ್ರಕ್ಕೆ ಹೋಗಿ ಅಂಗನವಾಡಿ ನೌಕರರನ್ನು ಹೊರಹಾಕಿ ಅಲ್ಲಿನ ಸಾಮಗ್ರಿಗಳನ್ನು ಅತ್ತಿತ್ತ ಸರಿಸಿ ಪರಿಶೀಲಿಸಿದ್ದು ಮಕ್ಕಳು ಅವರ ಬೆದರಿಕೆಗೆ ಹೆದರಿ ಗಲಿಬಿಲಿಗೊಂಡಿರುತ್ತಾರೆ ಅಲ್ಲದೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಧಿಕೃತ ಪರವಾನಿಗೆ ಪಡೆಯದೇ ಕೇಂದ್ರದ ದಾಖಲಾತಿಗಳನ್ನೆಲ್ಲಾ ಪರಿಶೀಲಿಸಿದ್ದಾರೆ. ಹೀಗೆ ಒಂದು ಸಂಘಟನೆ ಎಕಾಏಕಿಯಾಗಿ ಮಹಿಳೆಯರೇ ಕೆಲಸ ಮಾಡುವ ಅಂಗನವಾಡಿಗಳಿಗೆ ನುಗ್ಗಿ ಪರಿಶೀಲನೆ ನೆಪದಲ್ಲಿ ಕಿರುಕುಳ ಕೊಡುವುದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಇದೇ ರೀತಿ ದಿನಕ್ಕೊಂದು ಸಂಘಟನೆಗಳು ಪರಿಶೀಲನೆ ನೆಪದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಪ್ರವೇಶಿಸಿದ್ದಲ್ಲಿ ಅಂಗನವಾಡಿ ನಡೆಸಿಕೊಂಡು ಹೋಗುವುದು ತುಂಬಾ ಕಷ್ಟಕರವಾಗಬಹುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಯಾರ್ಯಾರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬಹುದೆಂದು ಹೆಸರಿಸಿದೆ. ಅವರನ್ನು ಹೊರತುಪಡಿಸಿ ಮಹಿಳೆಯರೇ ಇರುವಲ್ಲಿ ಪುರುಷರು ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಕಾರ್ಯಕರ್ತೆ ಮತ್ತು ಸಹಾಯಕರಿಗೆ ಹೊರಗೆ ಹೋಗುವಂತೆ ಹೇಳಿ ಪುಟ್ಟ ಮಕ್ಕಳು ಇರುವಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುವುದು ಕಾನೂನು ಬಾಹಿರವಾಗಿದೆ ಎಂದಿರುವ ಅವರು ಸದ್ರಿ ಸಂಘಟನೆಯ ಮೇಲೆ ತಾಲೂಕಾಡಳಿತವು ಸೂಕ್ತ ಕಾನೂನು ಕ್ರಮ ಕೈಗೊಂಡು ಅಂಗನವಾಡಿ ಕೆಲಸಗಳು ಮುಕ್ತವಾಗಿ ನಡೆಸಲು ಹಾಗೂ ಅಂಗನಾಡಿ ಕಾರ್ಯರ್ತೆಯರಿಗೆ ನಿರ್ಭಯವಾಗಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ. ಮನವಿ ಸಲ್ಲಿಸುವಾಗ ಸಿಐಟಿಯು ಅಧ್ಯಕ್ಷೆ ಜಯಶ್ರೀ ಹಿರೇಕರ, ಖಜಾಂಚಿ ಸುವರ್ಣಾ ಮಿರಾಶಿ, ಹಳಿಯಾಳ ವಲಯದ ಬ್ರಿಜಿಟಾ ಜೃಗಾಂಜಾ, ಗಿರಿಜಾ ಮರಾಠೆ, ಮುರ್ಕವಾಡ ವಲಯದ ಸುಷ್ಮಾ ಶಿಂಧೆ, ಬೆಳವಟಗಿ ವಲಯದ ನಿರ್ಮಲಾ ಚೌಗಲೆ, ಯಲ್ಲವ್ವಾ ಮೇತ್ರಿ, ಸಿಐಟಿಯನ ಜಿಲ್ಲಾ ಮುಖಂಡ ಹರೀಶ ನಾಯ್ಕ ಇನ್ನಿತರರು ಇದ್ದರು.
Leave a Comment