ಹೊನ್ನಾವರ:- ರಾಷ್ಟ್ರೀಯ ಹೆದ್ದಾರಿ 66 ಮತ್ತು ರಾಷ್ಟ್ರೀಯ ಹೆದ್ದಾರಿ 206 ಕೂಡುವಿಕೆಯ ಹೊನ್ನಾವರ ಪಟ್ಟಣದ ಗೇರಸೊಪ್ಪಾ ಸರ್ಕಲ್ ಬಳಿ ಇರುವ ಅತ್ಯಂತ ಅಪಾಯಕಾರಿ ಪ್ರಪಾತದ ಬಗ್ಗೆ ಸಂಬಂಧಪಟ್ಟ ಇಲಾಖೆಯಾಗಲೀ, ಜನಪ್ರತಿನಿಧಿಗಳಾಗಲಿ ಈ ತನಕ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿ. ಯಾಕೆಂದರೆ ಈ ಕ್ಲಿಷ್ಟವಾದ ಸ್ಥಳದಲ್ಲಿ ಪಾದಾಚಾರಿಗಳಿಗೆ ಓಡಾಡಲು, ನಿಲ್ಲಲು ಸ್ಥಳವೇ ಇಲ್ಲ. ಪಾದಚಾರಿಗಳಾಗಲೀ, ವಾಹನ ಚಾಲಕರಾಗಲೀ, ಸ್ವಲ್ಪವೇ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದ್ದÀಲ್ಲ. ಈ ಅಪಾಯಕಾರಿ ತಿರುವಿನಲ್ಲಿ ಆಗುವ ಅನಾಹುತವನ್ನು ತಪ್ಪಿಸಲು ಹೋಗಿಯೇ ಗ್ಯಾಸ್ ಟ್ಯಾಂಕರ್ ಇತ್ಯಾದಿಯಾಗಿ ಹಲವು ವಾಹನಗಳು ಆಯತಪ್ಪಿ ಬಿದ್ದರಬಹುದೆಂದು ಸಾರ್ವಜನಿಕರು ಅರ್ಥೈಯಿಸಿದ್ದಾರೆ. ಯಾಕೆಂದರೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಓಡಾಡುವ ವಾಹನಗಳಿಗೆ ಸಾಕಷ್ಟು ಸ್ಥಳಾವಕಾಶ ಈ ಸರ್ಕಲಿನಲ್ಲಿ ಇಲ್ಲದಿರುವುದೇ ಕಾರಣವಾಗಿದೆ. ಏಂದೋ ಆಗಲಿರುವ ಚತುಷ್ಪಥ ಹೆದ್ದಾರಿಯ ಕನಸು ಕಾಣುತ್ತಿರುವ ನಾವು ತುರ್ತು ಘಟಿಸುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದಾರಿ ಕಂಡುಕೊಳ್ಳದಿರುವುದು ಬೇಜವಬ್ದಾರಿತನವಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಮತ್ತು ಜನ ಪ್ರತಿನಿಧಿಗಳು ಪಾದಾಚಾರಿಗಳ ಓಡಾಡಕ್ಕೆ ಅನೂಕೂಲವಾಗಲೂ ಮತ್ತು ವಾಹನ ಚಾಲಕರಿಗೆ ಆಗುವ ತೊಂದರೆಗಳನ್ನು ತಪ್ಪಿಸಲೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ದಿ|| ಡಿ. ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ಎಂ.ಡಿ.ಗೌಡ ಆರೋಳ್ಳಿ, ಸಿ.ಬಿ.ನಾಯ್ಕ ಪ್ರಬಾತನಗರ, ದೇವೆಂದ್ರ ನಾಯ್ಕ ಹುಂಜನಮಕ್ಕಿ ಇವರು ಪತ್ರಿಕಾ ಹೇಳಿಕೆಯ ಮೂಲಕ ಇಲಾಖೆಯನ್ನು ಎಚ್ಚರಿಸಿದ್ದಾರೆ.
Leave a Comment