ಹೊನ್ನಾವರ: ತಾಲೂಕಿನ ಕರ್ಕಿಯ ಶ್ರೀ ಚನ್ನಕೇಶವ ಪ್ರೌಢಶಾಲೆಯಲ್ಲಿ 25ನೇ ರಾಷ್ಟೀಯ ಮಕ್ಕಳ ವಿಜ್ಞಾನ ಸಮಾವೇಶ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹುಟ್ಟಿಸಲು ಇಂತಹ ಸ್ಪರ್ಧೆಗಳು ಸ್ಪೂರ್ತಿಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪಧಕಿ, ತಾ.ಪಂ. ಸದಸ್ಯ ತುಕಾರಾಮ ನಾಯ್ಕ, ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ ಮೋಗೇರ್, ಎಲ್. ಎಮ್. ಹೆಗಡೆ, ಎಸ್.ಡಿ.ಎಮ್ ಕಾಲೇಜಿನ ಪ್ರಾಧ್ಯಾಪಕ ಶ್ರೀರಾಮ ಭಟ್ಟ, ಶ್ವೇತಾ ಪ್ರಭು, ಅಕ್ಷತಾ ಶೇಟ್, ಶ್ರೀಕಾಂತ ಹಿಟ್ನಳ್ಳಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಎಸ್.ಡಿ.ಎಮ್ ಕಾಲೇಜಿನ ಪ್ರಾಧ್ಯಾಪಕ ಪಿ. ಎಮ್ ಹೊನ್ನಾವರ ಸ್ಫರ್ಧಾಳುಗಳಿಗೆ ಪ್ರಶಸ್ತಿಪತ್ರ ವಿತರಿಸಿದರು. ಮುಕ್ತಾ ನಾಯ್ಕ ಹಾಗೂ ಸೀಮಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಎಸ್. ಎನ್. ಹೆಗಡೆಯವರು ವಂದಿಸಿದರು.
ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
ನಗರ ಹಿರಿಯರ ವಿಭಾಗದಲ್ಲಿ ವಾಣಿಶ್ರೀ ಹೆಗಡೆ (ಪ್ರಥಮ) ಮಾರ್ಥೋಮಾ-ಇಂಗ್ಲೀಷ್ ಮಾಧ್ಯಮ ಹೊನ್ನಾವರ, ಗಾಯತ್ರಿ ನಾಯ್ಕ (ದ್ವಿತೀಯ) ಜಿ.ಎಚ್.ಎಸ್. ಪ್ರಭಾತನಗರ, ಕಿರಿಯರ ವಿಭಾಗದಲ್ಲಿ ದೀಪಿತ್ ನಾಯಕ (ಪ್ರಥಮ) ಜಿ.ಎಚ್.ಎಸ್. ಹಿಲ್ಲೂರು ಅಂಕೋಲಾ, ಎಸ್.ಎಮ್ ಪ್ರಜ್ಞಾ (ದ್ವಿತೀಯ) ಮಾರ್ಥೋಮಾ ಆಂಗ್ಲಮಾಧ್ಯಮ ಹೊನ್ನಾವರ, ಗ್ರಾಮೀಣ ಹಿರಿಯರ ವಿಭಾಗದಲ್ಲಿ ಸೌಮ್ಯ ಎಸ್. ಭಟ್ಟ (ಪ್ರಥಮ) ಜಿ.ಎಚ್.ಎಸ್ ಹೊದ್ಕೆ ಶಿರೂರು, ಕುಮಾರ ಗೌಡ (ದ್ವಿತೀಯ) ಜಿ.ಎಚ್.ಎಸ್ ಹಿಲ್ಲೂರು, ಮಾಧುರಿ ನಾಯ್ಕ (ತೃತೀಯ) ಎಸ್.ಸಿ.ಕೆ.ಎಚ್ ಕರ್ಕಿ, ಕಿರಿಯ ವಿಭಾಗದಲ್ಲಿ ಅಂಕಿತಾ ಮೇಸ್ತ (ಪ್ರಥಮ) ಎಸ್.ಸಿ.ಕೆ.ಎಚ್ ಕರ್ಕಿ ತನುಶ್ರೀ ಗುನಗಾ (ದ್ವಿತೀಯ) ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರ.
Leave a Comment