ಕಾರವಾರ: ರೈತರಿಗೆ ಅನುಕೂಲವಾಗುವ ಕೃಷಿ ಪ್ರಧಾನ ಕೈಗಾರಿಕೆಗಳು, ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.ಕಾರವಾರ: ರೈತರಿಗೆ ಅನುಕೂಲವಾಗುವ ಕೃಷಿ ಪ್ರಧಾನ ಕೈಗಾರಿಕೆಗಳು, ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ.ದೇಶಪಾಂಡೆ ಅಭಿಪ್ರಾಯಪಟ್ಟರು. ಕಾರವಾರ ಕೋಡಿಭಾಗ್ ಕಾಳಿ ರಿವರ್ ಗಾರ್ಡನ್ನಲ್ಲಿ ನಡೆಯುತ್ತಿರುವ ದ್ರಾಕ್ಷಾರಸ ಮೇಳ-2017 ಕ್ಕೆ ಭೇಟಿ ನೀಡಿ ವೀಕ್ಷಿಸಿದ ಅವರು, ರೈತರಿಗೆ ನಿಜವಾಗಲೂ ಅನುಕೂಲ ಮಾಡುವುದಾದರೆ ಕೃಷಿ ಪ್ರಧಾನ ಕೈಗಾರಿಕೆಗಳೂ ಬರಬೇಕು. ಇದರಿಂದ ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಿಗಲಿದೆ ಎಂದು ಅವರು ತಿಳಿಸಿದರು. ಇದೇ ಮೊದಲ ಬಾರಿಗೆ ಉತ್ತರಕನ್ನಡ ಜಿಲ್ಲೆ ಕಾರವಾರದಲ್ಲಿ ದ್ರಾಕ್ಷಾರಸ ಮೇಳವನ್ನು ಆಯೋಜಿಸಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದೇ ದಿನದಲ್ಲಿ ಏಳ ಲಕ್ಷ ರೂ.ಗೆ ಹೆಚ್ಚು ವಹಿವಾಟು ನಡೆದಿದ್ದು ಇನ್ನೂ ಎರಡು ದಿನಗಳು ನಡೆಯುವುದರಿಂದ ಮೇಳದಲ್ಲಿ ಉತ್ತಮವಹಿವಾಟು ನಡೆಯುಲಿದೆ. ಅಲ್ಲದೆ ಕಾಳಿ ರಿವರ್ ಗಾರ್ಡನ್ನಂತಹ ಜಾಗದಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರು ತಮ್ಮ ಕುಟುಂಬ ಸಹಿತ ಭಾಗವಹಿಸುತ್ತಿದ್ದಾರೆ. ಮಕ್ಕಳಿಂದ ವೃದ್ಧವರೆಗೆ ಇಲ್ಲಿನ ಸೌಂದರ್ಯ ಸವಿಯಲು ಉತ್ತಮವಾಗಿದೆ ಎಂದರು. ಪ್ರವಾಸೋದ್ಯಮಕ್ಕೆ ಪೂರಕವಾಗಿ ಸಾಕಷ್ಟು ಯೋಜನೆಗಳು, ಉತ್ಸವಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡಿ ಹೋದ ಬಳಿಕ ಕರಾವಳಿ ಉತ್ಸವ, ಹಾರ್ನಬಿಲ್ ಉತ್ಸವ, ಸ್ಕೂಬಾ ಫೆಸ್ಟಿವಲ್, ಗಾಳಿಪಟ ಉತ್ಸವ ಹೀಗೆ ಜಿಲ್ಲಾದ್ಯಂತ ವಿವಿಧೆಡೆಗಳಲ್ಲಿ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಲ್.ಚಂದ್ರಶೇಖರ್ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ರವೀಂದ್ರ ಶಂಕರ್ ಮಿರ್ಜಿ, ಕಾಳಿ ರಿವರ್ ಗಾರ್ಡನ ಪ್ರಧಾನ ವ್ಯವಸ್ಥಾಪಕ ರೋಷನ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.
Leave a Comment