ಹೊನ್ನಾವರ : ಮಾಧ್ಯಮದ ಮುಂದೆ ನಾನು ಹೇಳಿದಂತೆ ರಾಮತೀರ್ಥ ಗುಡ್ಡದ ಮೇಲೆ ಮಾಜಿ ಪ.ಪಂ. ಅಧ್ಯಕ್ಷ ಹಾಲಿ ಸದಸ್ಯ ರವೀಂದ್ರ ನಾಯ್ಕ ಇವರ ಮಾಲೀಕತ್ವದ ಮದ್ಯದಂಗಡಿ ನನ್ನ ವಿರುದ್ಧ ಅವಿಶ್ವಾಸ ನೀರ್ಣಯಕ್ಕೆ ಗೇಲುವಾದ 15 ದಿನದಲ್ಲೇ ತೆರೆದುಕೊಂಡಿದೆ ಎಂದು ಹೇಳಲು ತುಂಬಾ ದುಃಖವಾಗುತ್ತಿದೆ ಎಂದು ಪ.ಪಂ. ಮಾಜಿ ಅಧ್ಯಕ್ಷೆ ಜೈನಾಬಿ ಸಾಬ್ ಹೇಳಿದ್ದಾರೆ.
ಕಳೆದ ಆರು ತಿಂಗಳಿಂದ ಮದ್ಯದಂಗಡಿಗೆ ಪರವಾನಿಗೆ ನೀಡುವಂತೆ ನನಗೆ ಕೆಲವು ಸದಸ್ಯರು ಹಣದ ಆಮಿಷ ಒಡ್ಡಿ ಹಿಂಸಿಸುತ್ತಿದ್ದರು. ಆದರೆ ನಾನು ಅದ್ಯಾವುದಕ್ಕೂ ಬಗ್ಗದೇ ಸಂಬಂಧಿತ ಕಡತಕ್ಕೆ ಸಹಿ ಹಾಕಿರಲಿಲ್ಲ. ಸ್ಥಳೀಯ ನೂರಾರು ಜನರು ರಾಮತೀರ್ಥದಂತಹ ಸ್ಥಳ ತುಂಬಾ ಶಾಂತ ಪ್ರದೇಶವಾಗಿದ್ದು ಈ ಭಾಗದಲ್ಲಿ ಮದÀ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಅರ್ಜಿ ನೀಡಿ ಆಗ್ರಹಿಸಿದ್ದರು. ನಾನು ಕೂಡ ಸ್ಥಳೀಯ ವಾಸಿಯಾಗಿದ್ದೂ ಇದರ ಗಂಭೀರತೆಯನ್ನು ಅರಿತು ಒರ್ವ ಮಹಿಳೆಯಾಗಿ ಈ ರಾಮತೀರ್ಥದಂತಹ ಪುಣ್ಯ ಸ್ಥಳದಲ್ಲಿ ಯಾವುದೇ ಅನೈತಿಕ ಚಟುವಟಿಕೆಯ ಆಗರವಾಗದಂತೆ ತಡೆಯಲು ಮುಂದಾಗಿದ್ದೆ. ಆದರೆ ಸಂಸ್ಕøತಿಯ ಗುತ್ತಿಗೆ ಪಡೆದವರಂತೆ ವರ್ತಿಸುವ ಬಿ.ಜೆ.ಪಿ.ಯ ಪ.ಪಂ. ಸದಸ್ಯರು ರಾಮತೀರ್ಥದಂತಹ ಪುಣ್ಯ ಭೂಮಿಯಲ್ಲಿ ಯಾವುದೋ ಆಮಿಷಕ್ಕೆ ಬಲಿಯಾಗಿ ಮದÀ್ಯದಂಗಡಿ ತೆರೆಯಲು ಉಳಿದ ಸದಸ್ಯರೊಂದಿಗೆ ಕೈಜೋಡಿಸಿರುವುದು ಇವರ ನೈತಿಕತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜೈನಾಬಿ ಸಾಬ್ ಆಪಾದಿಸಿದ್ದಾರೆ. ಅಲ್ಲದೇ ನಾನು ಹೊನ್ನಾವರದ ಅಭಿವೃದ್ಧಿಗಾಗಿ ಹೊರಾಡುತ್ತಿದ್ದರೆ ಇಂತವರು ತಮ್ಮ ಸ್ವಾರ್ಥಕ್ಕಾಗಿ ನನ್ನ ವಿರುದ್ಧ ಅವಿಶ್ವಾಸ ಮಂಡಿಸಿ ತಮ್ಮ ಸ್ವಾರ್ಥ ಸಾಧಿಸಿಕೊಂಡಿದ್ದಾರೆ.
ಇತ್ತೀಚೆಗೆ ಮಾಧ್ಯಮದ ಎದುರು ಪ. ಪಂ. ಸದಸ್ಯ ರವೀಂದ್ರ ನಾಯ್ಕ ನಾನು ರಾಮತೀರ್ಥ ಬಳಿ ಯಾವುದೇ ಬಾರ್ & ರೆಸ್ಟೊರೆಂಟ್ ತೆರೆಯಲು ಅರ್ಜಿ ಸಲ್ಲಿಸಿಲ್ಲಾ ಬದಲಾಗಿ ಹೊಟೆಲ್ ಉಧ್ಯಮಕ್ಕೆ ಅರ್ಜಿ ಸಲ್ಲಿಸಿದ್ದೆ ಎಂದು ಹೇಳಿರುವುದು ಸುಳ್ಳಿನ ಕಂತೆಯಾಗಿದೆ ಎಂದರು. ಆದರೆ ಎಲ್ಲಾ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ತಮ್ಮ ಕಟ್ಟಡಕ್ಕೆ ದಾರಿ ಮಾಡಿಕೊಂಡು, ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿ, ಅಬಕಾರಿ ಇಲಾಖೆಯಿಂದ ಪರವಾನಿಗೆ ಪಡೆದು ಈ ಅಕ್ರಮ ಕ್ವಾಲಿಟಿ ಬಾರ್ ಎಂಡ್ ರೆಸ್ಟೊರೆಂಟ್ ತೆರೆದಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.
ಈ ಕುರಿತು ನಗರದ ಜನತೆಗೆ ಅರಣ್ಯಾಧಿಕಾರಿಗಳು, ಕಂದಾಯಾಧಿಕಾರಿಗಳು ಮತ್ತು ಅಬಕಾರಿ ಇಲಾಖೆಯವರು ಇದರಲ್ಲಿ ತಮ್ಮ ಪಾಲೇಷ್ಟಿದೆ ಅಂತಾ ತಕ್ಷಣ ಉತ್ತರಿಸಬೇಕಾಗಿದೆ. ಜನ ಅರಣ್ಯ ಮತ್ತು ಇತರ ಇಲಾಖೆಯ ವಿರುದ್ಧ ಸಿಡಿದೆಳುವ ಕಾಲ ಸನ್ನಿಹಿತವಾಗಿದೆ ಎಂದು ಜೈನಾಬಿ ಸಾಬ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Leave a Comment