ಹೊನ್ನಾವರ : ದೇಶದಲ್ಲಿ ಪ್ರಥಮವಾದ ವಿಶ್ವದಲ್ಲಿ ವಿರಳವಾದ ಮುಖ ಸಮರ್ಪಕಗೊಳಿಸುವ ಎರಡು ಶಸ್ತಚಿಕಿತ್ಸೆಗಳನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ದಂತ ವೈದ್ಯಕೀಯ ಕಾಲೇಜು ನಡೆಸಿದ್ದ ಈ ಕುರಿತು ಕಸ್ತೂರ್ಬಾ ಆಸ್ಪತ್ರೆಯ ಸಿಓಓ ಕರ್ನಲ್ ಡಾ. ದಯಾನಂದ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಸ್ವಸ್ಥಾನದಿಂದ ಜಾರಿದ ಕೆಳದವಡೆಗೆ ಟೋಟಲ್ ಟೆಂಪೋರೊಮ್ಯಾಂಡಿಬ್ಯುಲಾರ್ ರಿಪ್ಲೆಸ್ಮಂಟ್ ಎಂಬ ಮುಖದ ರೂಪ ಸರಿಪಡಿಸುವ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ ಬಳಿಕ 21ವರ್ಷ ಪ್ರಾಯದ ಯುವಕನಿಗೆ ಪುನಃ ನಗುವ ಅವಕಾಶ ಒದಗಿತು. ಈ ಶಸ್ತ್ರಚಿಕಿತ್ಸೆಯನ್ನು ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದ ಓರಲ್ ಆಮಡ್ ಮ್ಯಾಕ್ಸಿಲೋಫೀಷಿಯಲ್ ವಿಭಾಗದ ವೈದ್ಯರು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನಡೆಸಿದರು.
ಕರ್ನಾಟಕ ಒಂದು ಪುಟ್ಟ ಗ್ರಾಮದಲ್ಲಿ ವಾಸವಾಗಿರುವ ಅಮನ್ (ಹೆಸರು ಬದಲಾಯಿಸದೆ) ಎಂಬ 21ವರ್ಷದ ಯುವಕನಿಗೆ ಹುಟ್ಟಿನಿಂದಲೇ ಬಾಯಿಯನ್ನು ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಅವನು ಬಹಳ ಸಂಕೋಚಪಡುತ್ತಿದ್ದನು. ಮತ್ತು ಅವನ ವ್ಯಕ್ತಿತ್ವದ ಮೇಲೆ ಇದು ವ್ಯತಿರಕ್ತ ಪರಿಣಾಮ ಬೀರಿತು. ಟಿಎಂಜಿ ಅಂಕೊಲೋಸಿಸ್ ಇರುವ ಕೆಳದವಡೆ ಜಾರುವ ರೋಗಗಳಲ್ಲಿ ಬಯೋಮೆಟ್ ಸ್ಟಾಕ್ ಪ್ರಾಸ್ಥೆಸಿಸ್ ಬಳಸಿ ಕೀಲಿನ ಸಂಪೂರ್ಣ ಬದಲಿ ಜೋಡಣೆ ಪ್ರಕ್ರಿಯೆಯನ್ನು ನಡೆಸುವುದು ಭಾರತದಲ್ಲಿ ಇದು ಮೊದಲನೆಯ ಪ್ರಕರಣವಾಗಿದೆ ಮತ್ತು ಪ್ರಾಯಶಃ ವೈದ್ಯಕೀಯ ಇತಿಹಾಸದಲ್ಲಿ ಕೇವಲ ಒಂದೆರಡು ಪ್ರಕರಣಗಳು ಕಾಣಸಿಗಬಹುದು.
ಇನ್ನೊಂದು ಪ್ರಕರಣಗಳಲ್ಲಿ 20ವರ್ಷದ ಪ್ರಾಯದ ರವಿ (ಹೆಸರು ಬದಲಿಸಲಾಗಿದೆ) ಎಂಬ ಯುವಕನು ಮುಖದ ಒಂದು ಪ್ರಮುಖ ಭಾಗವನ್ನು ಕಳೆದುಕೊಂಡಿದ್ದರಿಂದ ಒಂದು ಬಗೆಯ ಮಾನಸಿಕ ನರಳಿಕೆಗೆ ಒಳಗಾಗಿದ್ದನು. ಅವನು ಸಾರ್ವಜನಿಕ ಸ್ಥಳಗಳಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದನು. ಅವನ ಹೆತ್ತವರು ಓರಲ್ ಆಂಡ್ ಮ್ಯಾಕ್ಸಿಲೊಫೇಷಿಯಲ್ ವಿಭಾಗಕ್ಕೆ ಭೇಟಿ ನೀಡಿ, ಡಾ. ಅಭಯ್ ಟಿ. ಕಾಮತರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಇಂತಹ ಪ್ರಕರಣಗಳಿಗೆಂದೇ ನಿರ್ಮಿಸಲಾಗುವ ಟೈಟಾನಿಯಂ ನಿರ್ಮಿತ ಇಂಪ್ಲಾಂಟನ್ನು ಕೆಳದವಡೆಯ ಜಾಗದಲ್ಲಿ ಕೂರಿಸುವ ಸಲಹೆ ನೀಡಲಾಯಿತು. ಬಯೋಮೆಟ್ ಕಸ್ಟಮ್ ಮೇಡ್ ಕೀಲು ಬಳಸಿ ರೋಗಿಗೆ ಹೊಂದುವಂತಹ ಇಂಪ್ಲಾಂಟ್ ಅಳವಡಿಸುವ ಪ್ರಕ್ರಿಯೆಯೂ ಭಾರತದಲ್ಲಿ ಇದೇ ಮೊದಲು.
ಎಡರೂ ಪ್ರಕರಣಗಳಲ್ಲಿ ಡಾ. ಅಭಯ್ ಟಿ. ಕಾಮತರವರು ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ್ದು ಇವರು ಕೆನಡಾ ಟೊರೊಂಟೋದಲ್ಲಿ ಡಾ. ಡೇವಿಡ್ ಪ್ಸುಟ್ಕಾರ್ ಮಾರ್ಗದರ್ಶನದಲ್ಲಿ ಟಿಎಂಜಿ ಬದಲಿ ಜೋಡಣೆಗಳ ಬಗ್ಗೆ ತರಬೇತಿ ಪಡೆದಿದ್ದಾರೆ. ಅವರಿಗೆ ಸಹಾಯಕರಾಗಿ ಡಾ. ಆದರ್ಶ, ಡಾ. ಶ್ರೀಕಾಂತ, ಡಾ. ಚಿತ್ರಾ, ಡಾ. ಸುನೀಲ್ ಮತ್ತು ಡಾ. ಆನಂದರವರು ಶಸ್ತ್ರಚಿಕಿತ್ಸಾ ತಂಡದಲ್ಲಿದ್ದರು. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಯಾವುದೇ ತೊಡಕುಗಳು ಕಂಡು ಬರಲಿಲ್ಲ ಮತ್ತು ರೋಗಿಗಳಿಗೆ ಸರಿಯಾಗಿ ಆಹಾರ ಸೇವಿಸಲು ಮತ್ತು ಬಾಯಿ ತೆರೆಯಲು ಸಾಧ್ಯವಾಯಿತು. ಎರಡೂ ಪ್ರಕರಣಗಳಲ್ಲಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಅರವಳಿಕೆ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿರುವ ಡಾ. ಅನಿತಾ ನೀಲೇಶ್ವರ ಮತ್ತು ಮತ್ತೋರ್ವ ಪ್ರಾಧ್ಯಾಪಕರಾದ ಡಾ. ಮಂಜುನಾಥರವರು ಅರವಳಿಕೆ ನೀಡಿದರು. ಶಸ್ತ್ರಚಿಕಿತ್ಸೆಯ ಬಳಿಕ ಎರಡೂ ರೋಗಿಗಳ ಆತ್ಮವಿಶ್ವಾಸ ಹೆಚ್ಚಿದೆ ಮತ್ತು ಕಳೆದುಹೋದ ನಗು ಮುಖದಲ್ಲಿ ಪುನಃ ಅರಳಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಭಯ್ ಕಾಮತ್ರವರು ಕಡುಬಡವರಾದ ಅಮನ್ರ ಶಸ್ತಚಿಕಿತ್ಸೆಗೆ ಆರ್ಥಿಕ ಸಹಾಯ ಒದಗಿಸಿದ ಎಲ್ಲಾ ಪ್ರಮುಖರಿಗೂ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು. ಶಸ್ತ್ರಚಿಕಿತ್ಸೆಯ ಫಲಿತಾಂಶ ಅದ್ಭುತವಾಗಿದೆ ಮತ್ತು ಮುಖ ಹಾಗೂ ಬಾಯಿಗಷ್ಟೇ ಹೊಸ ರೂಪ ನೀಡಿಲ್ಲ, ಇಡೀ ವ್ಯಕ್ತಿಗೆ ಹೊಸ ರೂಪ ನೀಡಿದೆ ಎಂಬುದಾಗಿ ಮಣಿಪಾಲದ ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಕೀರ್ತಿಲತಾ ಎಂ ಪೈ ಅವರು ಅಭಿಪ್ರಾಯಪಟ್ಟರು. ಡಾ. ಅಭಯ್ ತಾರಾನಾಥ್ ಕಾಮತ್ ನೇತೃತ್ವದ ಮಣಿಪಾಲದ ದಂತ ವೈದ್ಯಕೀಯ ಮಹಾವಿದ್ಯಾಲಯದ ನಮ್ಮ ಓರಲ್ ಮತ್ತು ಮ್ಯಾಕ್ಸಿಲೊಫೇಷಿಯಲ್ ಸರ್ಜರಿ ವಿಭಾಗದ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ ಎಂದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯ ನಿರ್ವಹಣಾಧಿಕಾರಿಗಳಾದ ಡಾ. ಕರ್ನಲ್ ದಯಾನಂದರವರು “ಭಾರತದಲ್ಲೇ ಮೊದಲ ಬಾರಿಗೆ ಎಂಬಂತೆ ನಮ್ಮ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮುಂದುವರಿದ ದಂತ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿರುವ ಬಗ್ಗೆ ನಮಗೆ ಹೆಮ್ಮೆ ಅನಿಸುತ್ತದೆ ಮತ್ತು ಈ ಸಂದರ್ಭದಲ್ಲಿ ನಾವು ಡಾ. ಅಭಯ್ ತಾರಾನಾಥ ಕಾಮತ್ ಅವರ ತಂಡ ಹಾಗೂ ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದವರಿಗೆ ಶುಭಾಷಯಗಳನ್ನು ಕೋರುತ್ತೇವೆ ಎಂದು ಡಾ. ಕರ್ನಲ್ ಎಂ ದಯಾನಂದ, ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯ ನಿರ್ವಹಣಾಧಿಕಾರಿಗಳು ಹೇಳಿದ್ದಾರೆ.
Leave a Comment