ಹೊನ್ನಾವರ : ಶಿಕ್ಷಕಿಯೊರ್ವಳಿಗೆ ಗಂಡ ಮತ್ತು ಅತ್ತೆ ಸೇರಿ ಬಲವಾಗಿ ಥಳಿಸಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಗೆ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಖರ್ವಾ ಸ.ಹಿ.ಪ್ರಾ. ಶಾಲೆ ದೈಹಿಕ ಶಿಕ್ಷಣದ ಹಾಗೂ ಯೋಗ ಶಿಕ್ಷಕಿ ರಾಜೇಶ್ವರಿ ಹೆಗಡೆ ಗಂಡ ಮತ್ತು ಅತ್ತೆಯ ಧಳಿತದಿಂದ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಕುರಿತು ರಾಜೇಶ್ವರಿ ಹೆಗಡೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಮಧ್ಯಾಹ್ನದ ಊಟ ಮಾಡುತ್ತಿರುವ ವೇಳೆ ಗಂಡ ಮತ್ತು ಅತ್ತೆ ಸೇರಿ ಥಳಿಸಿದ್ದು ಎದ್ದು ನಿಲ್ಲಲೂ ತ್ರಾಣವಿರದೇ ಬಸ್ ಹತ್ತಿ ಹೊನ್ನಾವರಕ್ಕೆ ಬಂದಿಳಿದೆ. ಇಲ್ಲಿಂದ ರಿಕ್ಷಾ ಮೂಲಕ ಆಸ್ಪತ್ರೆ ಸೇರಿ ದಾಖಲಿರುವುದಾಗಿ ರಾಜೇಶ್ವರಿ ಹೆಗಡೆ ಹೇಳಿದ್ದಾರೆ.
ಈ ಮೊದಲಿನಿಂದಲೂ ಗಂಡ ಮತ್ತು ಅತ್ತೆ ಸೇರಿ ಕಿರುಕುಳ ನೀಡುತ್ತಿದ್ದರು. ಆದರೆ ಮರ್ಯಾದೆಗೆ ಅಂಜಿ ಹೊರಗೆ ಹೇಳಿರಲಿಲ್ಲ. ಇಂದು ಅವರು ಥಳಿಸಿದ ಪರಿಣಾಮ ಉಸಿರಾಡಲು ಕಷ್ಟವಾಗಿದೆ. ಮಕ್ಕಳಾಗುವುದು ಬೇಡ ಎನ್ನುತ್ತಿದ್ದ ಅವರು, ಹಣ ಮತ್ತು ಬಂಗಾರಕ್ಕಾಗಿ ಪೀಡಿಸುತ್ತಿದ್ದರು ಎಂದು ಪೋಲಿಸರಿಗೆ ಸಲ್ಲಿಸಿದ ದೂರಿನಲ್ಲಿ ರಾಜೇಶ್ವರಿ ಹೆಗಡೆ ಆರೋಪಿಸಿದ್ದಾರೆ.
Leave a Comment