ಕಾರವಾರ: ದೇಶಕ್ಕಾಗಿ ಭೂಮಿ ತ್ಯಾಗ ಮಾಡಿ ಕಳೆದ 30 ವರ್ಷಗಳಿಂದ ಪರಿಹಾರಕ್ಕಾಗಿ ಕಾಯುತ್ತಿದ್ದ ಸೀಬರ್ಡ್ ನಿರಾಶ್ರಿತರಿಗೆ ಸರಕಾರ ಜಮಾ ಮಾಡಿದ 1 ಕೋಟಿ 94 ಲಕ್ಷ ರೂ.ಪರಿಹಾರದ ಮೊತ್ತವನ್ನು ಈಗ ವಿತರಿಸಲಾಗುತ್ತಿದೆ.
ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಹಾಗೂ ಲೋಕದಾಲತ್ ಮೂಲಕ ಸೀಬರ್ಡ್ ನಿರಾಶ್ರಿತರಿಗೆ ಪರಿಹಾರ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರದ ಅಧ್ಯಕ್ಷ ವಿಠ್ಠಲ್ ಎಸ್.ಧಾರವಾಡಕರ, ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಹಾರದ ಚೆಕ್ಗಳನ್ನು ಎಲ್ಲ ನಿರಾಶ್ರಿತರಿಗೆ ಆದಷ್ಟು ಶೀಘ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸೀಬರ್ಡ್ ನಿರಾಶ್ರಿತರಂತೆ, ಕೊಂಕಣ್ ರೈಲ್ವೆ ಸಂತ್ರಸ್ಥ ನಿರಾಶ್ರಿತರಿಗೂ ಪರಿಹಾರ ಹಣ ಅತೀ ಶೀಘ್ರದಲ್ಲಿಯೇ ಸಿಗುವಂತೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ನ್ಯಾಯವಾದಿ ಆರ್.ಆರ್.ಅಣ್ವೇಕರ ಮಾತನಾಡಿ, ಕೋರ್ಟ್ನಿಂದ ನೀಡಲಾಗಿರುವ ಚೆಕ್ನ ಮಾನ್ಯತಾ ಅವಯು ಕೇವಲ 15 ದಿನಗಳಾಗಿರುತ್ತವೆ. ಆದ್ದರಿಂದ ನಿರಾಶ್ರಿತರು ತಮ್ಮ ವಕೀಲರ ಸಲಹೆ ಪಡೆದು ತಕ್ಷಣ ಖಾತೆಗೆ ಜಮಾ ಮಾಡಬೇಕು. ಅವದಿ ದಿನ ಮೀರಿ ಚೆಕ್ಗಳ ಅಮಾನ್ಯತೆಗೆ ಅವಕಾಶವಾಗದಂತೆ ಮುಂಜಾಗರೂಕತೆ ವಹಿಸಬೇಕು. ಇದೇ ರೀತಿಯ ಲೋಕದಾಲತ್ ಮೂಲಕ ಸೀಬರ್ಡ್ ನಿರಾಶ್ರಿತರಿಗೆ ಪರಿಹಾರ ಚೆಕ್ ವಿತರಿಸುವ ಕಾರ್ಯಕ್ರಮ ಡಿ.31 ರಂದು ಹಮ್ಮಿಕೊಳ್ಳಲಾಗುವುದು ಎಂದು ನಿರಾಶ್ರಿತರಿಗೆ ಮಾಹಿತಿ ನೀಡಿದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಉದಯ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ,ನಿರಾಶ್ರಿತರ ತ್ಯಾಗಕ್ಕೆ ಸಿಗಬೇಕಾದ ಪರಿಹಾರ ಹಣ ಈಗ ಸಿಗುತ್ತಿರುವುದು ಖುಷಿಯ ವಿಚಾರ. ನ್ಯಾಯಾಧೀಶರು ವಿಶೇಷ ಆಸಕ್ತಿಯಿಂದ ಉಳಿದ ಜನರಿಗೆ ಪರಿಹಾರ ಚೆಕ್ ಆದಷ್ಟು ಶೀಘ್ರ ವಿತರಿಸುವಂತಹ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.
ಬಳಿಕ ಮೀನುಗಾರರು ಸೇರಿದಂತೆ ವಿವಿಧ ಸಮುದಾಯದ 84 ಸೀಬರ್ಡ್ ನಿರಾಶ್ರಿತರಿಗೆ ಸುಮಾರು 1 ಕೋಟಿ 94 ಲಕ್ಷ ರೂ. ಪರಿಹಾರ ಹಣದ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾೀಶ ಹಾಗೂ ನ್ಯಾಯಿಕ ದಂಡಾಕಾರಿ ಶಿವಕುಮಾರ್ ಬಿ.,ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾೀಶ ಅಮರನಾಥ್ ಕೆ.ಕೆ.,ಜೆಎಂಎಫ್ಸಿ ನ್ಯಾಯಾೀಶ ಮಹೇಶ ಚಂದ್ರಕಾಂತ್, ವಿಶೇಷ ಭೂಸ್ವಾೀನಾಕಾರಿ ರಮೇಶ,ಶಾಂತಲಾ ಎಸ್.ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ವರದಾ ಡಿ.ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ತಳೇಕರ ವಂದಿಸಿದರು.
Leave a Comment