• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉಗ್ರ ಹೋರಾಟ, ಧರಣಿ ಸತ್ಯಾಗ್ರಹ ನಡೆಸಲಾಗುವುದು

December 6, 2017 by Gaju Gokarna Leave a Comment

ಹೊನ್ನಾವರ ತಾಲೂಕಿನ ಬಳಕೂರು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಯಾನೆ ಕಾರ್ಯದರ್ಶಿಯಾಗಿ ಕಳೆದ ಎರಡು ತಿಂಗಳಿಂದ  ಕೆಲಸ ನಿರ್ವಹಿಸುತ್ತಿರುವ ವಿನಾಯಕ ಸಿದ್ಧಪುರ ಎಂಬುವವರು ಪಂಚಾಯತ ವ್ಯಾಪ್ತಿಯ ಜನ ಸಾಮಾನ್ಯರು ಪಂಚಾಯತದಿಂದ ಪಡೆಯಬೇಕಾದ ಯಾವುದೇ ಸರ್ಟಿಫಿಕೇಟ್ ಬಯಸಿ ಬಂದವರಿಗೆ ಅದಕ್ಕೆ ನಿಗದಿಪಡಿಸಿದ ಶುಲ್ಕವನ್ನು ಭರಣಮಡಿಸಿಕೊಂಡು ದಾಖಲೆ ನೀಡುವ ಬದಲು ಅವರ ಮನೆಗೆ ಹೋಗಿ ಮನೆಯ ಉದ್ಧಳತೆಯನ್ನು ಅಳೆದು ಹಿಂದಿನ ಕರದ ಮೂರುಪಟ್ಟು ಕರವನ್ನು ಹೇರಿ ವಸೂಲಿ ಪಡೆದು ಆನಂತರ ಸಂಬಂಧಪಟ್ಟ ಸರ್ಟಿಫಿಕೇಟ್ ಯಾ ದೃಡಿಕರಣ ಪತ್ರದ ಶುಲ್ಕವನ್ನು ಪಡೆದು ದಾಖಲೆ ನೀಡುತ್ತಿರುವುದು ಇವರ ಸರ್ವಾಧಿಕಾರ ಮತ್ತು ಜನಸಾಮಾನ್ಯರ ಮೇಲಿನ ದೌರ್ಜನ್ಯವೆಂದೇ ಪರಿಗಣಿಸಬೇಕಾಗಿದೆ ಇದು ಖಂಡನೀಯ. ಇವರ ನಿಯಮ ಬಾಹಿರ ದುಂಡಾವರ್ತನೆಯನ್ನು ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳಾಗಲಿ, ಸ್ಥಳೀಯ ಆಡಳಿತ ವ್ಯವಸ್ಥೆಯಾಗಲಿ, ಒಂದು ತಿಂಗಳಲ್ಲಿ ನಿಯಂತ್ರಿಸದೇ ಇದ್ದಲ್ಲಿ ಉಗ್ರ ಹೋರಾಟ, ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸ್ಥಳೀಯರು ಮತ್ತು ಅರಸು ವಿಚಾರ ವೇದಿಕೆ ಅಧ್ಯಕ್ಷರಾದ ಅನಂತ ನಾಯ್ಕ ಹೆಗ್ಗಾರ ಪತ್ರಿಕೆಗೆ ತಿಳಿಸಿದ್ದಾರೆ.  ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಮನೆ ಮತ್ತು ಕಟ್ಟಡಗಳ ಕರ ಆಕರಣೆಗಳನ್ನು ಪರಿಶ್ಕರಿಸುವುದು ಸರ್ವೆ ಸಾಮಾನ್ಯ. ಆದರೆ ಇದನ್ನು ಗ್ರಾಮ ಪಂಚಾಯತ ಆಡಳಿತ ಕಮಿಟಿಯು ಸಭೆಯಲ್ಲಿ ನಿರ್ಣಯಿಸಬೇಕು. ಆನಂತರ ಸಾರ್ವತ್ರಿಕ ಸರ್ವೆ ಕಾರ್ಯ ನಡೆಸಬೇಕು. ಇಲ್ಲವೇ ಇದ್ದ ಕರಾಕರಣೆಗೆ ಶೇಕಡಾವಾರು ಹೆಚ್ಚಿಸಬೇಕು ತಯಾರಿಸಿದ ಆ ಪಟ್ಟಿಯನ್ನು ಸಾರ್ವಜನಿಕರ ಗಮನಕ್ಕಾಗಿ ನೋಟಿಸ್ ಬೋರ್ಡಿಗೆ ಲಗತ್ತಿಸಬೇಕು. ಸಾರ್ವಜನಿಕರ ಆಕ್ಷೇಪಣೆ ಇದ್ದಲ್ಲಿ ಸ್ವೀಕರಿಸಿ ನಿಖಾಲೆಗೊಳಿಸಬೇಕು ಆನಂತರ ಪಟ್ಟಿಯನ್ನು ಜ್ಯಾರಿಗೊಳಿಸಬೇಕು. ಈ ಯಾವ ಕಾರ್ಯಗಳನ್ನು ನಡೆಸದೇ ಏಕಾಏಕಿ ಪಂಚಾಯತ ದೃಡೀಕರಣ ಪತ್ರ ಬಯಸಿ ಬಂದವರ ಮನೆ ಅಳೆದು ಮನಸೋಇಚ್ಚೆ ಮೂರು ಪಟ್ಟು ಕರವನ್ನು ಹೇರಿ ಅಕ್ರಮವಾಗಿ ಕರ ವಸೂಲಿ ಪಡೆಯುವುದು ಹಗಲು ದರೋಡೆಗೆ ಸಮಾನವಾಗಿದೆ. ಆದ್ದರಿಂದ ಸದ್ರಿ ಅಧಿಕಾರಿಯು  ಅಕ್ರಮವಾಗಿ ವಸೂಲಿ ಪಡೆದಂತ ಈ ಹಣವನ್ನು ಜನಸಾಮಾನ್ಯರಿಗೆ ತಿರುಗಿಸಬೇಕು ಸದ್ರಿ ವ್ಯಕ್ತಿಯ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಇನ್ನೂ  ವಿಷೇಶವೆಂದರೆ ಈ ಅಭಿವೃದ್ದಿ ಅಧಿಕಾರಿ ಯಾನೆ ಕಾರ್ಯದರ್ಶಿಯು ಮಾಹಿತಿ ಹಕ್ಕಿನಡಿಯಲ್ಲಿ ಗ್ರಾಮ ಪಂಚಾಯತದಲ್ಲಿ 3 ವರ್ಷಗಳಲ್ಲಿ ನಡೆಸಿದ ಅಭಿವೃದ್ಧಿ ಕಾಮಗಾರಿಗಳ ಸರಳ ಯಾದಿಯನ್ನು ಬಯಸಿ ಅರ್ಜಿ ಸಲ್ಲಿಸಿದರೆ, ಮಾಹಿತಿ ಪೂರೈಸಲು 10,862=00 ರೂಪಾಯಿ ಭರಣ ಮಾಡಲು ಲಿಖಿತ ಉತ್ತರ ನೀಡುತ್ತಾರೆ. ಅಂದರೆ ಇವರು ಮಾಹಿತಿ ಹಕ್ಕು ಉಲ್ಲಂಘನೆ ಮಾಡಿರುವುದಲ್ಲದೇ ಭೃಷ್ಟಾಚಾರದ ಪೋಷಕರೆಂದೇನಿಸಿಕೊಂಡಿದ್ದಾರೆ. ಇದರಿಂದ ಇವರ ಸರ್ವಾಧಿಕಾರ ಮತ್ತು ಅರ್ಜಿದಾರರ ಕಾಲಹರಣ, ಮಾನಸಿಕ ಆಘಾತ ನೀಡುವ ಉದ್ದೇಶ ಅಡಗಿರುವುದು ಸತ್ಯವಾಗಿದೆ. ಒಬ್ಬ ವ್ಯಕ್ತಿ ಆಧಾರ ಕಾರ್ಡ ಮಾಡಿಸಿಕೊಳ್ಳುವಲ್ಲಿ ಪಂಚಾಯತದಿಂದ ದೃಡೀಕರಣ ಪತ್ರ ಕೇಳಿ ಬಂದವರಿಗೂ ಸಹ ಅವರ ಮನೆಯ ಉದ್ದಗಲ ಅಳೆದು ಮೂರು ಪಟ್ಟು ಕರಾಕರಣೆ ಮಾಡಿ ಕರ ವಸೂಲಿ ಪಡೆದು ಸರ್ಟಿಫಿಕೇಟ್ ನೀಡಿರುವುದು ಅತ್ಯಂತ ಹೇಯ ಕೃತ್ಯ. ಇವರು ಜನ ಸಾಮಾನ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯ ಮತ್ತು ಸರ್ವಾಧಿಕಾರವನ್ನು ಖಂಡಿಸಿ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ, ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಮತ್ತು ಒಂದು ತಿಂಗಳಲ್ಲಿ ಸಮಸ್ಯೆಯನ್ನು ಬಗೆಹರಿಸದೇ ಇದ್ದಲ್ಲಿ ತಾಲೂಕ ಪಂಚಾಯತ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅನಂತ ನಾಯ್ಕ ಹೆಗ್ಗಾರ ಇವರು ಇಲಾಖೆಗೆ ಆಗ್ರಹಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: ಅಧಿಕಾರಿ, ಉಗ್ರ ಹೋರಾಟ, ಕಟ್ಟಡಗಳ ಕರ ಆಕರಣೆ, ಕರ ವಸೂಲಿ, ಕಳೆದ ಎರಡು ತಿಂಗಳಿಂದ, ಕಾಲಕಾಲಕ್ಕೆ ಮನೆ, ಧರಣಿ ಸತ್ಯಾಗ್ರಹ, ನಡೆಸಲಾಗುವುದು, ನೋಟಿಸ್ ಬೋರ್ಡಿಗೆ ಲಗತ್ತಿಸ, ಪಂಚಾಯತ ಅಭಿವೃದ್ದಿ, ಬಳಕೂರು ಗ್ರಾಮ, ಭರಣಮಡಿಸಿಕೊಂಡು ದಾಖಲೆ, ಮೇಲೆ ಸೂಕ್ತ ಕ್ರಮ, ಸದ್ರಿ ವ್ಯಕ್ತಿಯ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar