ಹಳಿಯಾಳ: ತಾಲೂಕಿನ ಅಂಬಿಕಾನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಕೆಗದಾಳ ಗ್ರಾಮದ ಹೊಲವೊಂರದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಕೊಟ್ಟಿಗೆಯೊಂದಿಗೆ 2 ಆಕಳು, 2 ಕರು ಹಾಗೂ ಕೃಷಿ ಕಾರ್ಯಕ್ಕೆ ಬಳಸುವ ಲಕ್ಷಾಂತರ ರೂ. ಬೆಲೆ ಬಾಳುವ ಕೃಷಿ ಸಲಕರಣೆಗಳು ಬೆಂಕಿಗಾಹುತಿಯಾದ ದುರ್ಘಟನೆ ಬುಧವಾರ ನಸುಕಿನ ಜಾವ ಸಂಭವಿಸಿದೆ. ಕೆಗದಾಳ ಗ್ರಾಮದ ರೈತ ಜುವಾಂವ ಸಿದ್ದಿ ಎನ್ನುವವರಿಗೆ ಸೇರಿದ ಹೊಲದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಕೊಟ್ಟಿಗೆಯೊಂದಿಗೆ, ಕೃಷಿ ಸಲಕರಣೆಗಳು ಹಾಗೂ ಲಕ್ಷಾಂತರ ರೂ ಬೆಲೆ ಬಾಳುವ 2 ಆಕಳು ಹಾಗೂ ಕರು ಸಜೀವ ದಹನಗೊಂಡಿವೆ. ಸ್ಥಳಕ್ಕೆ ಕಂದಾಯ, ಪಶು, ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಈ ಭಾಗದ ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣಾ ಪಾಟೀಲ್ ಭೆಟಿ ನೀಡಿ ಪರಿಶೀಲನೆ ನಡೆಸಿದ್ದು ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
Leave a Comment