• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ

December 13, 2017 by Sachin Hegde Leave a Comment

ಹಳಿಯಾಳ:

ಮುಂದಿನ ಚುನಾವಣೆಯ ಲಾಭ ಪಡೆಯಲು ಬಿಜೆಪಿ ಪಕ್ಷದವರು ಪರೇಶ್ ಮೇಸ್ತ ಸಾವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಜನರಲ್ಲಿ ಗೊಂದಲ ಉಂಟುಮಾಡಿ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವುದನ್ನು ತಾವು ಖಂಡಿಸುವುದಾಗಿ ಉ.ಕ.ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.ಹಳಿಯಾಳ:  ಮುಂದಿನ ಚುನಾವಣೆಯ ಲಾಭ ಪಡೆಯಲು ಬಿಜೆಪಿ ಪಕ್ಷದವರು ಪರೇಶ್ ಮೇಸ್ತ ಸಾವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಜನರಲ್ಲಿ ಗೊಂದಲ ಉಂಟುಮಾಡಿ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವುದನ್ನು ತಾವು ಖಂಡಿಸುವುದಾಗಿ ಉ.ಕ.ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.  ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಬುಧವಾರ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಪಕ್ಷಕ್ಕೆ ಸಿಮಿತವಾಗಿರದ ಕುಟುಂಬದ ಅಮಾಯಕ ಬಾಲಕ ಪರೇಶ್ ಮೆಸ್ತ ಸಾವು ನೋವು ತಂದಿದೆ ಇಂತಹ ದುರ್ಘಟನೆ ನಡೆಯಬಾರದಿತ್ತು, ಘಟನೆಯನ್ನು ತಾವು ಖಂಡಿಸುವುದಾಗಿ ಹೇಳಿದ ಘೋಟ್ನೇಕರ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಬಡ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ಸಮಾಜದಲ್ಲಿ ಎಲ್ಲರೂ ಸಮಾರಸ್ಯದಿಂದ ಬದುಕುವಂತೆ ಮನವಿ ಮಾಡಿದರು.  ಜಿಲ್ಲೆಯಲ್ಲಿ ಐಜಿ ಹೆಮಂತ ಅವರ ಕಾರು ಸುಟ್ಟ ಪ್ರಕರಣ ಹಾಗೂ ಪೋಲಿಸರ ಮೇಲೆ ಕಲ್ಲೆಸೆದಿರುವುದು ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದೆ ಎಂದರು.

ಉದ್ಯೋಗಾವಕಾಶ :- ಪರೇಶ್ ಕುಟುಂಬಕ್ಕೆ ತಾವು ವೈಯಕ್ತಿಕವಾಗಿ ಹಾಗೂ ಕೆಡಿಸಿಸಿ ಬ್ಯಾಂಕ್‍ನಿಂದ ಸಹಾಯ ಮಾಡಲು ನಿರ್ಧರಿಸಿದ್ದು ಈ ಕುಟುಂಬದ ಒರ್ವ ಯುವಕ ಅಥವಾ ಯುವತಿಗೆ ಬ್ಯಾಂಕನಲ್ಲಿ ಉದ್ಯೋಗಾವಕಾಶ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು. ಪಕ್ಷಾತೀತವಾಗಿ ಘಟನೆಯನ್ನು ಖಂಡಿಸಿ ಆತನ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಹೊರತು ಸತ್ತವರ ಮೇಲೆ ರಾಜಕಾರಣ ಮಾಡಬೇಡಿ ಎಂದ ಘೋಟ್ನೇಕರ ಪ್ರತಿಯೊಬ್ಬರಿಗೂ ಧರ್ಮಾಭಿಮಾನ ಇರಬೇಕು ಹೊರತು ಅದನ್ನು ರಾಜಕೀಯವಾಗಿ ದುರುಪಯೋಗ ಪಡಿಸಿಕೊಳ್ಳುವುದು ಮೂರ್ಖತನದ ಪರಮಾವಧಿ ಎಂದು ಕಿಡಿ ಕಾರಿದರು. ಪ್ರತಿಭಟನೆ, ಗಲಭೆಗಳಲ್ಲಿ ಮುಖಂಡರು ಮೊದಲು ಬಂಧನಕ್ಕೊಳಗಾಗಿ ಸೇಫ್ ಆಗಿ ಉಳಿಯುತ್ತಾರೆ ಆದರೇ ಕಾರ್ಯಕರ್ತರು, ಅಮಾಯಕರು ಲಾಠಿ ಚಾರ್ಜ, ಗೋಲಿಬಾರ್‍ನಲ್ಲಿ ಪೆಟ್ಟು ತಿಂದು ಕೇಸ್‍ಗಳನ್ನು ಮೈ ಮೇಲೆ ಹಾಕಿಕೊಂಡು ಭವಿಷ್ಯ ಹಾಳು ಮಾಡಿಕೊಳ್ಳುತ್ತಾರೆ ಇದನ್ನು ಯುವಕರು ಅರಿಯಬೇಕು ಮುಂದೆ ನೀವು ಪ್ರಕರಣ ಎದುರಿಸುತ್ತಿರುವಾಗ ನಿಮ್ಮ ಹಿಂದೆ ಯಾವ ನಾಯಕರು ಬರುವುದಿಲ್ಲ ಎಂಬುದನ್ನು ಅರಿತು ಇಂತಹ  ಗಲಭೆ, ಪ್ರತಿಭಟನೆಗಳಿಂದ ದೂರ ಉಳಿಯುವಂತೆ ಕರೆ ನೀಡಿದರು. ಜಿಲ್ಲೆಯಲ್ಲಿ ಕಾಂಗ್ರೇಸ್ ಮಾಡಿರುವ ಅಭಿವೃದ್ದಿ ಕಾರ್ಯಗಳಿಂದ ಮುಂದೆ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎನ್ನುವ ಹೇದರಿಕೆಯಿಂದ ಬಿಜೆಪಿಗರು ಜನರ ಹಾದಿ ತಪ್ಪಿಸಿ, ರಾಜಕೀಯ ಲಾಭ ಪಡೆಯಲು ಈ ರೀತಿಯ ಗಲಭೆಗಳನ್ನು ಮಾಡಿಸುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.  ಪರೇಶ್ ಮೇಸ್ತ ಪ್ರಕರಣಕ್ಕೆ ಸಚಿವ ದೇಶಪಾಂಡೆ ಕಾರಣರಾಗಿದ್ದು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು ಹೇಳಿರುವ ಮಾಜಿ ಶಾಸಕ ಸುನೀಲ್ ಹೆಗಡೆಗೆ  ಸಚಿವರ ಬಗ್ಗೆ ಮಾತನಾಡುವ ಅವರ ರಾಜಿನಾಮೇ ಕೇಳುವ ಯಾವ ನೈತಿಕತೆಯೂ ಇಲ್ಲ ಎಂದ ಘೊಟ್ನೇಕರ ಬುದ್ದಿ ಭ್ರಮಣೆಯಾದಂತೆ ಮಾತನಾಡುತ್ತಿರುವ ಸುನೀಲ್ ಈ ಹಿಂದೆ ಹಳಿಯಾಳ ಸಕ್ಕರೆ ಕಾರ್ಖಾನೆಗೆ ಕಾಳಿ ನದಿ ನೀರು ಕೊಡಬಾರದೆಂದು ನೇತೃತ್ವ ವಹಿಸಿ ಪ್ರತಿಭಟಿಸಿದ್ದು ಯಾರು ?, ಕಾಳಿ ಗ್ಯಾಸ್ ಏಜೆನ್ಸಿನ ಸುಂದರೇಶ ಎನ್ನುವವರಿಗೆ ಎಷ್ಟು ಹಣ ನೀಡುವಂತೆ ನಿಮಗೆ ನ್ಯಾಯಾಲಯ ಆದೇಶಿಸಿದೆ?, ಕಾಳಿನದಿ ನೀರಾವರಿ ಯೋಜನೆಯ ಪೋಟೊ ಮಾರ್ಫೀಂಗ್‍ನ ಕ್ರೀಮಿನಲ್ ಪ್ರಕರಣ ಏನಾಯ್ತು?, ನಿಮ್ಮ ಶಾಸಕ ಅವಧಿಯಲ್ಲಿ ಏನು ಮಾಡಿದ್ದೀರಿ? ಹಾಗೂ ಕಾಳಿನದಿ ನೀರಾವರಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು ತಮ್ಮ ನಿಲುವೇನು ಎಂಬುವ ತಮ್ಮ ಪ್ರಶ್ನೇಗಳಿಗೆ  ಬಹಿರಂಗವಾಗಿ ಉತ್ತರಿಸುವಂತೆ  ವಿಪ ಸದಸ್ಯ ಘೊಟ್ನೇಕರ ಅವರು ಹೆಗಡೆಗೆ ಬಹಿರಂಗ ಸವಾಲ್ ಹಾಕಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News Tagged With: ಕೂಡಲೇ ಬಂಧಿಸಿ, ಕೆಡಿಸಿಸಿ ಬ್ಯಾಂಕ್‍ನಿಂದ ಸಹಾಯ, ಗಲಭೆಗಳಲ್ಲಿ ಮುಖಂಡರು ಮೊದಲು ಬಂಧನಕ್ಕೊಳಗಾಗಿ ಸೇಫ್ ಆಗಿ, ಗೋಲಿಬಾರ್‍ನಲ್ಲಿ, ಚುನಾವಣೆಯ ಲಾಭ, ಜನರಲ್ಲಿ ಗೊಂದಲ ಉಂಟು, ತಪ್ಪಿತಸ್ಥರನ್ನು, ಪಡೆಯಲು, ಪರೇಶ್ ಮೇಸ್ತ, ಪ್ರತಿಭಟನೆ, ಬಡ ಕುಟುಂಬ, ಬಿಜೆಪಿ ಪಕ್ಷದವರು, ರಾಜಕೀಯವಾಗಿ ದುರ್ಬಳಕೆ, ಲಾಠಿ ಚಾರ್ಜ, ಸಾವನ್ನು

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar