ಹಳಿಯಾಳ:
ಮುಂದಿನ ಚುನಾವಣೆಯ ಲಾಭ ಪಡೆಯಲು ಬಿಜೆಪಿ ಪಕ್ಷದವರು ಪರೇಶ್ ಮೇಸ್ತ ಸಾವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಜನರಲ್ಲಿ ಗೊಂದಲ ಉಂಟುಮಾಡಿ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವುದನ್ನು ತಾವು ಖಂಡಿಸುವುದಾಗಿ ಉ.ಕ.ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.ಹಳಿಯಾಳ: ಮುಂದಿನ ಚುನಾವಣೆಯ ಲಾಭ ಪಡೆಯಲು ಬಿಜೆಪಿ ಪಕ್ಷದವರು ಪರೇಶ್ ಮೇಸ್ತ ಸಾವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಜನರಲ್ಲಿ ಗೊಂದಲ ಉಂಟುಮಾಡಿ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವುದನ್ನು ತಾವು ಖಂಡಿಸುವುದಾಗಿ ಉ.ಕ.ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು. ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಬುಧವಾರ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಪಕ್ಷಕ್ಕೆ ಸಿಮಿತವಾಗಿರದ ಕುಟುಂಬದ ಅಮಾಯಕ ಬಾಲಕ ಪರೇಶ್ ಮೆಸ್ತ ಸಾವು ನೋವು ತಂದಿದೆ ಇಂತಹ ದುರ್ಘಟನೆ ನಡೆಯಬಾರದಿತ್ತು, ಘಟನೆಯನ್ನು ತಾವು ಖಂಡಿಸುವುದಾಗಿ ಹೇಳಿದ ಘೋಟ್ನೇಕರ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಬಡ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ಸಮಾಜದಲ್ಲಿ ಎಲ್ಲರೂ ಸಮಾರಸ್ಯದಿಂದ ಬದುಕುವಂತೆ ಮನವಿ ಮಾಡಿದರು. ಜಿಲ್ಲೆಯಲ್ಲಿ ಐಜಿ ಹೆಮಂತ ಅವರ ಕಾರು ಸುಟ್ಟ ಪ್ರಕರಣ ಹಾಗೂ ಪೋಲಿಸರ ಮೇಲೆ ಕಲ್ಲೆಸೆದಿರುವುದು ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದೆ ಎಂದರು.
ಉದ್ಯೋಗಾವಕಾಶ :- ಪರೇಶ್ ಕುಟುಂಬಕ್ಕೆ ತಾವು ವೈಯಕ್ತಿಕವಾಗಿ ಹಾಗೂ ಕೆಡಿಸಿಸಿ ಬ್ಯಾಂಕ್ನಿಂದ ಸಹಾಯ ಮಾಡಲು ನಿರ್ಧರಿಸಿದ್ದು ಈ ಕುಟುಂಬದ ಒರ್ವ ಯುವಕ ಅಥವಾ ಯುವತಿಗೆ ಬ್ಯಾಂಕನಲ್ಲಿ ಉದ್ಯೋಗಾವಕಾಶ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು. ಪಕ್ಷಾತೀತವಾಗಿ ಘಟನೆಯನ್ನು ಖಂಡಿಸಿ ಆತನ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಹೊರತು ಸತ್ತವರ ಮೇಲೆ ರಾಜಕಾರಣ ಮಾಡಬೇಡಿ ಎಂದ ಘೋಟ್ನೇಕರ ಪ್ರತಿಯೊಬ್ಬರಿಗೂ ಧರ್ಮಾಭಿಮಾನ ಇರಬೇಕು ಹೊರತು ಅದನ್ನು ರಾಜಕೀಯವಾಗಿ ದುರುಪಯೋಗ ಪಡಿಸಿಕೊಳ್ಳುವುದು ಮೂರ್ಖತನದ ಪರಮಾವಧಿ ಎಂದು ಕಿಡಿ ಕಾರಿದರು. ಪ್ರತಿಭಟನೆ, ಗಲಭೆಗಳಲ್ಲಿ ಮುಖಂಡರು ಮೊದಲು ಬಂಧನಕ್ಕೊಳಗಾಗಿ ಸೇಫ್ ಆಗಿ ಉಳಿಯುತ್ತಾರೆ ಆದರೇ ಕಾರ್ಯಕರ್ತರು, ಅಮಾಯಕರು ಲಾಠಿ ಚಾರ್ಜ, ಗೋಲಿಬಾರ್ನಲ್ಲಿ ಪೆಟ್ಟು ತಿಂದು ಕೇಸ್ಗಳನ್ನು ಮೈ ಮೇಲೆ ಹಾಕಿಕೊಂಡು ಭವಿಷ್ಯ ಹಾಳು ಮಾಡಿಕೊಳ್ಳುತ್ತಾರೆ ಇದನ್ನು ಯುವಕರು ಅರಿಯಬೇಕು ಮುಂದೆ ನೀವು ಪ್ರಕರಣ ಎದುರಿಸುತ್ತಿರುವಾಗ ನಿಮ್ಮ ಹಿಂದೆ ಯಾವ ನಾಯಕರು ಬರುವುದಿಲ್ಲ ಎಂಬುದನ್ನು ಅರಿತು ಇಂತಹ ಗಲಭೆ, ಪ್ರತಿಭಟನೆಗಳಿಂದ ದೂರ ಉಳಿಯುವಂತೆ ಕರೆ ನೀಡಿದರು. ಜಿಲ್ಲೆಯಲ್ಲಿ ಕಾಂಗ್ರೇಸ್ ಮಾಡಿರುವ ಅಭಿವೃದ್ದಿ ಕಾರ್ಯಗಳಿಂದ ಮುಂದೆ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎನ್ನುವ ಹೇದರಿಕೆಯಿಂದ ಬಿಜೆಪಿಗರು ಜನರ ಹಾದಿ ತಪ್ಪಿಸಿ, ರಾಜಕೀಯ ಲಾಭ ಪಡೆಯಲು ಈ ರೀತಿಯ ಗಲಭೆಗಳನ್ನು ಮಾಡಿಸುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು. ಪರೇಶ್ ಮೇಸ್ತ ಪ್ರಕರಣಕ್ಕೆ ಸಚಿವ ದೇಶಪಾಂಡೆ ಕಾರಣರಾಗಿದ್ದು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು ಹೇಳಿರುವ ಮಾಜಿ ಶಾಸಕ ಸುನೀಲ್ ಹೆಗಡೆಗೆ ಸಚಿವರ ಬಗ್ಗೆ ಮಾತನಾಡುವ ಅವರ ರಾಜಿನಾಮೇ ಕೇಳುವ ಯಾವ ನೈತಿಕತೆಯೂ ಇಲ್ಲ ಎಂದ ಘೊಟ್ನೇಕರ ಬುದ್ದಿ ಭ್ರಮಣೆಯಾದಂತೆ ಮಾತನಾಡುತ್ತಿರುವ ಸುನೀಲ್ ಈ ಹಿಂದೆ ಹಳಿಯಾಳ ಸಕ್ಕರೆ ಕಾರ್ಖಾನೆಗೆ ಕಾಳಿ ನದಿ ನೀರು ಕೊಡಬಾರದೆಂದು ನೇತೃತ್ವ ವಹಿಸಿ ಪ್ರತಿಭಟಿಸಿದ್ದು ಯಾರು ?, ಕಾಳಿ ಗ್ಯಾಸ್ ಏಜೆನ್ಸಿನ ಸುಂದರೇಶ ಎನ್ನುವವರಿಗೆ ಎಷ್ಟು ಹಣ ನೀಡುವಂತೆ ನಿಮಗೆ ನ್ಯಾಯಾಲಯ ಆದೇಶಿಸಿದೆ?, ಕಾಳಿನದಿ ನೀರಾವರಿ ಯೋಜನೆಯ ಪೋಟೊ ಮಾರ್ಫೀಂಗ್ನ ಕ್ರೀಮಿನಲ್ ಪ್ರಕರಣ ಏನಾಯ್ತು?, ನಿಮ್ಮ ಶಾಸಕ ಅವಧಿಯಲ್ಲಿ ಏನು ಮಾಡಿದ್ದೀರಿ? ಹಾಗೂ ಕಾಳಿನದಿ ನೀರಾವರಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು ತಮ್ಮ ನಿಲುವೇನು ಎಂಬುವ ತಮ್ಮ ಪ್ರಶ್ನೇಗಳಿಗೆ ಬಹಿರಂಗವಾಗಿ ಉತ್ತರಿಸುವಂತೆ ವಿಪ ಸದಸ್ಯ ಘೊಟ್ನೇಕರ ಅವರು ಹೆಗಡೆಗೆ ಬಹಿರಂಗ ಸವಾಲ್ ಹಾಕಿದರು.
Leave a Comment