ಹಳಿಯಾಳ : ಹಳಿಯಾಳ ಹಬ್ಬದ ಅಂಗವಾಗಿ ಮೂಡಬಿದಿರೆ “ಆಳ್ವಾಸ ಶಿಕ್ಷಣ ಪ್ರತಿಷ್ಠಾನ”ರವರಿಂದ ದೇಶ, ವಿದೇಶ, ರಾಜ್ಯದ ವಿವಿಧ ಭಾಗಗಳಲ್ಲಿ ಕಲಿಯುತ್ತಿರುವ 26 ಸಾವಿರ ವಿದ್ಯಾರ್ಥಿಗಳಲ್ಲಿ 350 ವಿದ್ಯಾರ್ಥಿಗಳಿಂದ ನಡೆಸಿ ಕೊಡುವ “ಸಾಂಸ್ಕøತಿಕ ವೈಭವ ಹಳಿಯಾಳದಲ್ಲಿ ಪ್ರಥಮ ಬಾರಿಗೆ ದಿ: 18ರಂದು ನಡೆಯಲಿದೆ ಎಂದು ನುಡಿಸಿರಿ ವಿರಾಸತ್ನ ಸಂಚಾಲಕನಾಗರಾಜ ಶೆಟ್ಟಿಹೇಳಿದರು. ಪಟ್ಟಣದ ವಿ.ಆರ್.ಡಿ.ಎಮ್.ಟ್ರಸ್ಟ್ನ ದೇಶಪಾಂಡೆ ಭವನದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ದೇಶದ ಸಾಂಸ್ಕøತಿಕ ನೆಲಗಟ್ಟನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಮೋಹನ ಆಳ್ವರವರು ರಾಜ್ಯದ ವಿವಿದೆಡೆ ಸಾಂಸ್ಕøತಿಕ ವೈಭವವನ್ನು ಪರಿಚಯಸಿದ್ದು ಕೇರಳದ ಶಾಸ್ತ್ರೀಯ ನೃತ್ಯ ಮೋಹಿನಿಯಾಟ್ಟಾಂ, ಗಣೇಶ ಸ್ತುತಿ, ಬಡಗುತ್ತಿಟ್ಟು ಯಕ್ಷ ಪ್ರಯೋಗ, ಶ್ರೀರಾಮ ಪಟ್ಟಾಭಿಷೇಕ, ಒರಿಸ್ಸಾದ ಜನಪದ ನೃತ್ಯ ಗೋಟಿಪುವ, ಆಂಧ್ರದ ಬೆಡಗಿನ ಬಂಜಾರ, ಶ್ರೀಲಂಕಾದ ಕ್ಯಾಂಡಿಯನ್ ಸಮೂಹ ನೃತ್ಯ, ಮಣಿಪುರದ ಸ್ಟಿಕ್ ಡ್ಯಾನ್ಸ್ ದೋಲೊ ಚಲೋಮೊ, ಭರತ ನಾಟ್ಯ ಭೋ ಶಂಭೋ, ಕಥಕ – ಪ್ರಹಾರ್, ಮಹಾರಾಷ್ಟ್ರಾದ ಲಾವಣಿ ನೃತ್ಯ, ಸಾಹಸಮಯ ಮಲ್ಲಕಂಬ, ಗುಜರಾಜ ರಂಜಿನ ದಾಂಡಿಯಾ ನೃತ್ಯ, ಪಶ್ಚಿಮ ಬಂಗಾಲದ ಸಿಂಹ ಬೇಟೆಯ ಪುರುಲಿಯೋ, ತೆಂಕುತಿಟ್ಟು ಯಕ್ಷಗಾನ ಅಗ್ರಪೂಜೆ, ಶ್ರೀಲಂಕಾದ ಜನಪದ ನೃತ್ಯ, ವಂದೇ ಮಾತರಂ ನೃತ್ಯ ರೂಪಕ ಇತ್ಯಾದಿ ಕಾರ್ಯಕ್ರಮಗಳು ಹಳಿಯಾಳದ ವಿ. ಆರ್. ಡಿ. ಎಮ್. ಟ್ರಸ್ಟನ ಸಹಯೋಗದೊಂದಿಗೆ ಪಟ್ಟಣದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಡಿ.18 ರಂದು ಸೋಮವಾರದಂದು ಸಂಜೆ 6.00 ಗಂಟೆಗೆ ನಡೆಯಲಿದೆ ಎಂದು ನಾಗರಾಜ ಶೆಟ್ಟಿ ವಿವರಿಸಿದರು. ಆಳ್ವಾಸ ನುಡಿಸಿರಿ ವಿರಾಸತ್À ಘಟಕ ಹಳಿಯಾಳದಲ್ಲಿ ಪ್ರಾರಂಭಗೊಳ್ಳಲಿದ್ದು ಅಳ್ವಾಸ ಮುಖ್ಯಸ್ಥರಾದ ಮೋಹನ ಅಳ್ವಾರವರು ಸದಸ್ಯರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಾಗರಾಜ ಮಾಹಿತಿ ನೀಡಿದರು. ಸುದ್ದಿಗೊಷ್ಠಿಯಲ್ಲಿಟ್ರಸ್ಟ್ನ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಪ್ರಮುಖರಾದ ಶ್ರೀಪಾದ ಮಾನಗೆ, ಎನ್.ಎಸ್.ಎಸ್. ಸಂಯೋಜಕ ದಿನೇಶ ಡಿ. ನಾಯ್ಕ, ಪ್ರಸನ್ನ ನಾಯ್ಕ ಇದ್ದರು.
Leave a Comment