ಹಳಿಯಾಳ : ಕರಾವಳಿ ಉತ್ಸವದ ಅಂಗವಾಗಿ ಹಳಿಯಾಳ ಉತ್ಸವ 2017 ನಿಮಿತ್ತ ಪಟ್ಟಣದಲ್ಲಿ ನೂತನ ಹಾಗೂ ವಿಶಿಷ್ಠವಾಗಿ ಮನೆ ಮನೆ ರಂಗೋಲಿ ಸ್ಪರ್ದೆ ಶನಿವಾರ ಬೆಳಿಗ್ಗೆ ನಡೆಯಿತು ಸಚಿವ ಆರ್.ವಿ.ದೇಶಪಾಂಡೆ ಪತ್ನಿ ರಾಧಾಬಾಯಿ ಅವರೊಂದಿಗೆ ಮನೆ ಮನೆಗಳಿಗೆ ತೆರಳಿ ರಂಗೋಲಿಗಳನ್ನು ವಿಕ್ಷಿಸಿ ಸಾರ್ವಜನೀಕರ ಸ್ಪರ್ದಾಮನೋಭಾವನೆಯನ್ನು ಶ್ಲಾಘೀಸಿದರು. ಶನಿವಾರ ಪಟ್ಟಣದ ಬಹುತೇಕ ಎಲ್ಲಾ ಬಡಾವಣೆಗಳು ವಿಧ ವಿಧದ ರಂಗೋಲಿಗಳಿಂದ ಆಕರ್ಷಕವಾಗಿ ಕಾಣುತ್ತಿದ್ದವು ಇದಕ್ಕೆ ಕಾರಣ ಕರಾವಳಿ ಉತ್ಸವದ ಅಂಗವಾಗಿ ನಡೆದ ಮನೆ ಮನೆಗೆ ರಂಗೋಲಿ ಸ್ಪರ್ದೆ ಮನೆಯ ಮುಂದೆ ಬೃಹತ್ ಚಿತ್ತಾಕರ್ಷಕ ರಂಗೋಲಿಗಳು, ಸಾಮಾಜಿಕ ಸಾಮರಸ್ಯ ಸಾರುವ ರಂಗೋಲಿಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಸಚಿವ ದೇಶಪಾಂಡೆ ತಮ್ಮ ಪತ್ನಿ ರಾಧಾಬಾಯಿ, ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ, ಸದಸ್ಯ ಸತ್ಯಜೀತ ಗಿರಿ, ರುಡಸೆಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಸೇರಿದಂತೆ ಇತರರೊಂದಿಗೆ ಬೆಳಿಗ್ಗೆ 6.30ರಿಂದಲೇ ಕಾಲ್ನಡಿಗೆಯಲ್ಲಿ ಪಟ್ಟಣದ ಪ್ರಮುಖ ವಾರ್ಡಗಳಲ್ಲಿ ಸಾಗಿ ರಂಗೋಲಿ ವೀಕ್ಷಿಸಿದರಲ್ಲದೇ ಇಂತಹ ನೂತನ ಪ್ರಯೋಗಗಳು, ಸ್ಪರ್ದಾ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ವಿ.ಆರ್.ಡಿಎಮ್ ಟ್ರಸ್ಟ್ನಿಂದ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿವೆ ಎಂದು ಹೇಳಿದರು. ಸ್ಪರ್ದಾ ವಿಜೇತರಿಗೆ ಸಭಾ ಕಾರ್ಯಕ್ರಮದಲ್ಲಿ ಬಹುಮಾತ ವಿತರಿಸಲಾಗುವುದೆಂದು ತಾಲೂಕಾಡಳಿತ ಹೇಳಿದೆ.
Leave a Comment