ಹಳಿಯಾಳ : ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆಯವರು ದಿ.16 ಶನಿವಾರ ಬಂದ್ ಕರೆ ನೀಡಿ ಮತ್ತೇ ದಿ.15ರ ರಾತ್ರಿ ಬಂದ್ ಕರೆಯನ್ನು ಮುಂದಕ್ಕೆ ಹಾಕಿರುವುದಾಗಿ ಮುಖಂಡರು ತಿಳಿಸಿದ್ದರೂ ಸಹಿತ ಹಳಿಯಾಳದಲ್ಲಿ ಶನಿವಾರ ಬಹುತೇಕ ಅಂಗಡಿ, ವಾಣಿಜ್ಯ ಮಳಿಗೆಗಳು ಮುಚ್ಚಿದ್ದು ಭಾಗಶಃ ಹಳಿಯಾಳ ಬಂದ್ ಆಗಿತ್ತು. ಹಳಿಯಾಳದಲ್ಲಿ ಯಾವುದೇ ಸಂಘಟನೆಗಳೇ ಇರಲಿ ಬಂದ್ ಕರೆ ನೀಡಿದರೇ ಸಾರ್ವಜನೀಕರು ಸಹಕಾರ ನೀಡುವುದು ಹಿಂದಿನಿಂದಲೂ ನಡೆದು ಬಂದಿದೆ ಅದೇ ರೀತಿ ಶನಿವಾರ ಕರೆ ನೀಡಿದ ಬಂದ್ ಕರೆ ತಡವಾಗಿ ಶುಕ್ರವಾರ ರಾತ್ರಿ ಹಿಂಪಡೆದಿದ್ದರೂ ಸಹಿತ ಬಹುತೇಕ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಬಂದ್ಗೆ ಬೆಂಬಲ ಸೂಚಿಸಿದ್ದಾರೆ. ಪೋಲಿಸ್ ಸರ್ಪಗಾವಲು-ಐಜಿಪಿ ಭೇಟಿ:- ಬಂದ್ ಕರೆ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶವಾಗಿರುವ ಹಳಿಯಾಳಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಅಧಿಕ ಪೋಲಿಸರು ಹಳಿಯಾಳಕ್ಕೆ ಆಗಮಿಸಿದ್ದಾರೆ 5 ಕೆಎಸ್ಆರ್ಪಿ, 1 ಡಿಆರ್ ತುಕಡಿ, ಇಬ್ಬರು ಹೆಚ್ಚುವರಿ ಎಸ್ಪಿಗಳು, ಡಿವೈಎಸ್ಪಿಗಳು 4, ಸಿಪಿಐ 16, ಪಿಎಸ್ಐ 20 ಹೀಗೆ ಹಳಿಯಾಳದಲ್ಲಿ ಪೋಲಿಸರ ಸರ್ಪಗಾವಲು ಎಲ್ಲೆಂದರಲ್ಲಿ ಖಾಕಿ ಧಾರಿಗಳೇ ಕಂಡು ಬಂದರು. ಇನ್ನೂ ಪಶ್ಚಿಮ ವಲಯ ಐಜಿಪಿ ಹೆಮಂತ ನಿಂಬಾಳ್ಕರ ಹಳಿಯಾಳಕ್ಕೆ ಭೇಟಿ ನೀಡಿ ಪೋಲಿಸ್ ಅಧಿಕಾರಿಗಳ ಸಭೆ ನಡೆಸಿ ಯಾವುದೇ ಕಾರಣಕ್ಕೂ ಎಲ್ಲಿಯೂ ಶಾಂತತೆ ಭಂಗವಾಗದಂತೆ ಹಾಗೂ ಜನರಲ್ಲಿ ಶಾಂತತೆ ಕಾಪಾಡಿಕೊಳ್ಳುವಂತೆ, ಸುಳ್ಳು ವದಂತಿಗಳಿಗೆ ಕಿವಿ ಕೊಡದಂತೆ ಜಾಗೃತಿ ಮೂಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
Leave a Comment