ಹಳಿಯಾಳ : ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಕೊಡುವ್ಯದರಿಂದ ಒಂದು ಜೀವ ಉಳಿಸಲು ಸಾಧ್ಯ ಕಾರಣ ರಕ್ತದಾನದಂತಹ ಪುಣ್ಯದ ಕೆಲಸಕ್ಕೆ ಯುವಕರು ಮುಂದಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಕರಾವಳಿ ಉತ್ಸವ 2017ರ ಅಂಗವಾಗಿ ಹಳಿಯಾಳ ಉತ್ಸವ ನಿಮಿತ್ತ ತಾಲೂಕಾಡಳಿತ, ತಾಲೂಕಾ ಆರೋಗ್ಯ ಇಲಾಖೆ, ಪಂಡಿತ ಸಾರ್ವಜನಿಕ ಆಸ್ಪತ್ರೆಯ ಐಎಂಎ ಲೈಫ್ಲೈನ್ ಬ್ಲಡ್ಬ್ಯಾಂಕ್, ಶಿರಸಿಯವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉಧ್ಘಾಟಿಸಿ ಸಚಿವರು ಮಾತನಾಡಿದರು. ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೆಣಕೆ ಮಾತನಾಡಿ ರಕ್ತದಾನ, ನೇತ್ರದಾನ ಶ್ರೇಷ್ಠದಾನವಾಗಿದ್ದು ಇಂತಹ ಶಿಬಿರಗಳು ಹೆಚ್ಚಿನ ಪ್ರಮಾಣದಲ್ಲಿ ನಡೆದು ಜನರಲ್ಲಿ ಜಾಗೃತಿ ಮೂಡಬೇಕೆಂದರು. ರಕ್ತದಾನ ಶಿಬಿರದಲ್ಲಿ ಒಟ್ಟೂ 55 ಯುನಿಟ್ ರಕ್ತವನ್ನು ಶೇಖರಿಸಲಾಗಿದ್ದು 120ಕ್ಕೂ ಅಧಿಕ ಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆಂದು ವೈದ್ಯಾಧಿಕಾರಿಗಳು ತಿಳಿಸಿದರು. ಜಿ.ಪಂ.ಸದಸ್ಯ ಕೃಷ್ಣಾ ಪಾಟೀಲ್, ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಪುರಸಭೆ ಸದಸ್ಯರಾದ ಸತ್ಯಜೀತ ಗಿರಿ, ಮಾಲಾ ಬ್ರಗಾಂಜಾ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ರಮೇಶ ಕದಂ, ಡಾ.ಮಾದನ್ನವರ, ತಾಪಂ ಇಓ ಲಕ್ಷ್ಮಣರಾವ ಯಕ್ಕುಂಡಿ ಸೇರಿದಂತೆ ಇತgರು ಇದ್ದರು.
Leave a Comment