ಹೊನ್ನಾವರ : ಪಟ್ಟಣದ ಶನಿ ದೇವಾಲಯದ ಪಕ್ಕ ಶೆಟ್ಟಿಕೆರೆಯಲ್ಲಿ ಡಿ. 8 ರಂದು ನಿಗೂಢ ಸಾವನ್ನಪ್ಪಿದ ಪರೇಶ ಕಮಲಾಕರ ಮೇಸ್ತ ಇತನಿಗೆ ಶೃದ್ಧಾಂಜಲಿ ಕಾರ್ಯಕ್ರಮ ಶ್ರೀ ದಂಡಿನ ದುರ್ಗಾ ದೇವಸ್ಥಾನದಲ್ಲಿ ನಡೆಯಿತು. ಪರೇಶ ಮೇಸ್ತನ ಭಾವಚಿತ್ರಕ್ಕೆ ತಂದೆ ಕಮಲಾಕರ ಮೇಸ್ತ ಹಾಗೂ ಕುಟುಂಬದವರು, ಹಿಂದೂ ಸಮಾಜ ಬಾಂಧವರು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಪುಷ್ಪಾರ್ಚನೆ ಸಲ್ಲಿಸಿ ಶೃದ್ಧಾಂಜಲಿ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಪಿ.ಎಸ್.ಐ ಆನಂದ ಮೂರ್ತಿ, ಹಿರಿಯರಾದ ವಸಂತ ಕರ್ಕಿಕರ್, ಮೀನುಗಾರ ಮುಖಂಡರಾದ ಉಮೇಶ ಮೇಸ್ತ, ಲೋಕೇಶ ಮೇಸ್ತ, ಸತ್ಯಾ ಜಾವಗಲ್, ಹಿಂದೂ ಸಂಘಟನೆಯ ಮುಖಂಡರಾದ ಜೆ.ಟಿ.ಪೈ, ಶಿವರಾಜ ಮೇಸ್ತ, ಮಹೇಶ ನಾಯ್ಕ, ಜಿ.ಜಿ.ಶಂಕರ, ರಘು ಪೈ, ಶ್ರೀಧರ ಮೇಸ್ತ, ವಿಶ್ವನಾಥ ನಾಯಕ, ಕೊಂಕಣ ಖಾರ್ವಿ ಸಮಾಜದ ಮುಖಂಡ ಸೂರ್ಯಕಾಂತ ಸಾರಂಗ, ಶಿವಾನಂದ ಮೇಸ್ತ, ಮಂಜುನಾಥ ಶೇಟ್, ಹಾಗೂ ಸಾವಿರಾರು ಸಮಾಜ ಮುಖಂಡರು ಭಾಗವಹಿಸಿದ್ದರು.
Leave a Comment