ಕಾರವಾರ: ಕೊಡಗಿನ ವಿವಿಧಡೆ ಎಚ್.ಐ.ವಿ ಹಾಗೂ ಏಡ್ಸ ಕುರಿತು ಅಮದಳ್ಳಿಯ ಬಂಟದೇವ ಯುವಕ ಸಂಘದವರು ಜನ ಜಾಗೃತಿ ಕಾರ್ಯಕ್ರಮ ನಡೆಸಿದರು.
ಕೊಡಗು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಏಡ್ಸ ನಿಯಂತ್ರಣ ಕೊಡಗು ಆಶ್ರಯದಲ್ಲಿ ಜಾಗರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 10 ದಿನಗಳ ಕಾಲ ಸಂಪಾಜೆ, ನಾಪೊಕ್ಲು, ಚೀರಾಂಬನೆ, ಭಾಗಮಂಡಲ, ಮಡಿಕೇರಿ, ಚೌಕ, ಮುರ್ನಾಡ, ಕೊಂದಂಗೇರಿ, ಹಾಕತ್ತೂರಯ, ಕೊಡಗಲು, ಆಲೂರು ಸಿದ್ದಾಪುರ, ಶನಿವಾರ ಸಂತೆ, ಕೊಡ್ಲಿಪೇಟ, ಗಡುಗಲಲೆ, ಗೌಡಳ್ಳಿ, ಸೋಮವಾರಪೇಟ, ಬೈದಾಗೊಟ್ಟಾ, ಕುಶಾಲನಗರ, ಬಸವನಹಳ್ಳಿ, ಸುಂಟಿಕೊಪ್ಪದ ಆಯ್ದ 20 ಗ್ರಾಮಗಳಲ್ಲಿ ಜಾಗೃತಿ ನಡೆಸಲಾಯಿತು. ಜಡೆಕೋಲಾಟ ಮತ್ತು ಬೀದಿನಾಟಕ ಜನರ ಗಮನ ಸೆಳೆಯಿತು. ಕಲಾವಿದ ಮಂಜುನಾಥ ಕೆ ಮುದ್ಘೇಕರ್ ನೇತೃತ್ವದಲ್ಲಿ ಶ್ರೀನಿವಾಸ ಅಂಬಿಗ, ನಾಗರಾಜ ಓಣಿಕೇರಿ, ಗಜಾನನ ಅಂಬಿಗ, ಉಮಾಕಾಂತ ಗೌಡ, ಮುರಳಿ ಗೌಡ. ಸಂದೀಪ ಗೌಡ, ಶಿವು ಮುಂಡಗೋಡ, ಜಾನ್ಹವಿ ತಾಂಡೆಲ್ ಮತ್ತು ಕೃತಿಕಾ ತಳೇಕರ್ ಜಾಗೃತಿ ನಡೆಸಿದರು.
Leave a Comment