ಹಳಿಯಾಳ: ಕರ್ತವ್ಯ ನಿರತ ಹಳಿಯಾಳ ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಕುರಿತು ಹಳಿಯಾಳ ಪೊಲಿಸ್ ಠಾಣೆಯಲ್ಲಿ ಮುಖ್ಯಾಧಿಕಾರಿಯವರು ದೂರು ದಾಖಲಿಸಿರುವ ವಿದ್ಯಮಾನ ಶನಿವಾರ ಹಳಿಯಾಳದಲ್ಲಿ ನಡೆದಿದೆ.ಹಳಿಯಾಳ: ಕರ್ತವ್ಯ ನಿರತ ಹಳಿಯಾಳ ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಕುರಿತು ಹಳಿಯಾಳ ಪೊಲಿಸ್ ಠಾಣೆಯಲ್ಲಿ ಮುಖ್ಯಾಧಿಕಾರಿಯವರು ದೂರು ದಾಖಲಿಸಿರುವ ವಿದ್ಯಮಾನ ಶನಿವಾರ ಹಳಿಯಾಳದಲ್ಲಿ ನಡೆದಿದೆ. ನಡೆದದ್ದೇನು ? :- ಪುರಸಭೆ ವ್ಯಾಪ್ತಿಯ ವಾರ್ಡ ನಂ4 ರ ಹೋರಗಿನ ಗುತ್ತಿಗೇರಿಯ ಪರಿಶಿಷ್ಠ ಜಾತಿ ಕಾಲನಿಯಲ್ಲಿ ಸುಮಾರು 6 ತಿಂಗಳಿಂದ ತುಳಸಾಬಾಯಿ ಎನ್ನುವವರು ಪುರಸಭೆಯ ಗಟಾರಕ್ಕೆ ಮಣ್ಣು ಹಾಕಿ ಗಟಾರನ ಕೊಳಚೆ ನೀರು ಹರಿದು ಹೊಗದಂತೆ ತಡೆ ಹಿಡಿದು ಆ ಪ್ರದೇಶದಲ್ಲಿ ದುರ್ವಾಸನೆ ಹಬ್ಬಿ ಸಾಂಕ್ರಾಮಿಕ ರೋಗ ಹರಡಲು ಕಾರಣರಾಗುತ್ತಿರುವ ಕುರಿತು ಆ ಭಾಗದ ಜನರು ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಕಮಿಷನರ್ ಅವರಿಗೆ ದೂರು ಹಾಗೂ ಅನೇಕ ಬಾರಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಹಾಯಕ ಕಮಿಷನರ್(ಎಸಿ) ಅವರು ಹಳಿಯಾಳ ಪುರಸಭೆಗೆ ಆದೇಶಿಸಿದ್ದರಿಂದ ಶನಿವಾರ ಪುರಸಭೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಮುಖ್ಯಾಧಿಕಾರಿ ಕೇಶವ ಚೌಗಲೆ ಅವರು ಗಟಾರ ಸ್ವಚ್ಚ ಮಾಡಿಸುವ ಸಂದರ್ಭದಲ್ಲಿ ಅಲ್ಲಿಯ ನಿವಾಸಿ ಮಾರುತಿ ಪೇಟಣ್ಣಾ ಪಾಟೀಲ ಊರ್ಪ ಗೌಡಾ ಎನ್ನುವವರು ಹಿಂದಿನಿಂದ ಬಂದು ಮುಖ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಮಾರುತಿ ಮೇಲೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಮುಖ್ಯಾಧಿಕಾರಿ ಕೇಶವ ಅವರು ದೂರು ದಾಖಲಿಸಿದ್ದಾರೆ. ಪೌರ ಸೇವಾ ನೌಕರರಿಂದ ಖಂಡನೆ:- ಕರ್ತವ್ಯ ನಿರತ ಮುಖ್ಯಾಧಿಕಾರಿಯವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿರುವ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಪುರಸಭೆ ಹಳಿಯಾಳ ಘಟಕದವರು ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವುದರಿಂದ ನಗರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಲು ಭಯದ ವಾತಾವರಣ ನಿರ್ಮಾಣವಾಗಿದ್ದು ಎಲ್ಲ ನೌಕರರಿಗೆ ರಕ್ಷಣೇ ನೀಡಬೇಕು ಹಾಗೂ ಮಾರುತಿ ಪಾಟೀಲ್ ನನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ನಗರಾಭಿವೃದ್ದಿ ಕೋಶ, ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಸಂಘದಿಂದ ದೂರು:- ಜಿಲ್ಲಾಧಿಕಾರಿ ಹಾಗೂ ಎಸಿ ಅವರ ಆದೇಶದ ಮೇರೆಗೆ ಹೊರಗಿನ ಗುತ್ತಿಗೇರಿ ಗಲ್ಲಿಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಕೇಶವ ಚೌಗಲೆ ಹಾಗೂ ಇತರ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿರುವಾಗ ಮುಖ್ಯಾಧಿಕಾರಿಯವರ ಮೇಲೆ ಮಾರುತಿ ಪೇಟಣ್ಣಾ ಪಾಟೀಲ್, ಸುರೇಶ ಪಾಟೀಲ್ ಹಾಗೂ ಗಜಾನನ ಪಾಟೀಲ್ ಎನ್ನುವ ಮೂವರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಅಲ್ಲದೇ ದಲಿತರ ಓಣಿಯ ಕೋಳಚೆ, ಗಟಾರ ನೀರನ್ನು ತೆಗೆದುಕೊಳ್ಳುವುದಿಲ್ಲಾ ಎಂದು ದಲಿತರ ಮೇಲೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಇದರಿಂದ ದಲಿತರಿಗೆ ಅವಮಾನವಾಗಿದ್ದು ಈ ಮೂವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಸಂಘ ಹೊರಗಿನ ಗುತ್ತಿಗೇರಿಯವರು ಹಳಿಯಾಳ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾರೆ. ಘಟನೆ ನಡೆದ ತಕ್ಷಣ ಆರೋಪಿಯನ್ನು ಹಳಿಯಾಳ ಪೋಲಿಸರು ವಶಕ್ಕೆ ಪಡೆದು ವಿಚಾರಣೆ
Leave a Comment