ಹೊನ್ನಾವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೋಟೆ ಮಾಳಕೋಡ ಹಾಗೂ, ಕೆಳಗಿನ ಇಡಗುಂಜಿ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಶಾಲಾ ವಾರ್ಷಿಕೋತ್ಸವದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿ ನಡೆಯಿತು..
ಕಾರ್ಯಕ್ರಮದ ಉದ್ಘಾಟನೆಯನ್ನು ಭಟ್ಕಳ್ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಕಾಳ ವೈದ್ಯ ನೇರವೆರಿಸಿದರು..
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ವಿನಯತೆ ಕೂಡಾ ಬೇಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ ಸದಸ್ಯೆ ಪುಷ್ಪಾ ನಾಯ್ಕ ಮಾತನಾಡಿ ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳಿಗೆ ಪ್ರತಿಯೊಂದು ಮೂಲಭೂತ ಸೌಕರ್ಯ ಒದಗಿಸಿಕೊಳ್ಳುವಲ್ಲಿ ನಮ್ಮ ಭಾಗದ ಶಾಸಕರು ಬಹಳ ಪ್ರಯತ್ನ ಪಟ್ಟು ಶಾಲೆಗೆ 99% ರಷ್ಟು ಮೂಲಭೂತ ಸೌಕರ್ಯವನ್ನು ಒದಗಿಸಿಕೊಟ್ಟಿದ್ದಾರೆ ಎಂದರು..
“ನೇಸರ” ಹಸ್ತಪ್ರತಿ ಪುಸ್ತಕವನ್ನು ಜಿಲ್ಲಾ ಪಂಚಾಯತ ಸದಸ್ಯೆ ಪುಷ್ಪ ನಾಯ್ಕ್ ಬಿಡುಗಡೆ ಮಾಡಿದರು…
ನಂತರ ಶಾಲಾ ವಿದ್ಯಾರ್ಥಿಗಳಿಗೆ ಶಾಸಕ ಮಂಕಾಳ್ ವೈದ್ಯರವರು ಬಹುಮಾನವನ್ನು ವಿತರಿಸಿದರು..
ಗ್ರಾಮ್ ಪಂಚಾಯತ್ ಅಧ್ಯಕ್ಷೆ ಬೇಬಿ ನಾಯ್ಕ್, ಮಂತಿನ್ ರೊಡ್ರಗೀಸ್, ಗಜಾನನ ಗೌಡ, ಸುಮನಾ ಭಟ್, ಮಂಜುನಾಥ್ ಬಿಳಿಯ ನಾಯ್ಕ್, ಸರೋಜಿನಿ ನಾಯ್ಕ್, ಸುರೇಶ್ ನಾಯ್ಕ್, ಮಂಜುನಾಥ್ ಗೌಡ, ಎನ್ ಎಸ್ ನಾಯ್ಕ್, ಉಲ್ಲಾಸ್ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು
Leave a Comment