ಹೊನ್ನಾವರ ;
ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಖಾತ್ರಿ ಪಡಿಸಲು ನ್ಯಾಕ್ ಮಾನ್ಯತೆಯು ಅಗತ್ಯವಾಗಿದ್ದು, ಅದು ಕಾಲೆಜಿಗೆ ಸಂಬಂಧಿಸಿದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದು ಸ್ಫರ್ಧಾತ್ಮಕ ಯುಗವಾಗಿದ್ದು, ಇದರಲ್ಲಿ ಶಿಕ್ಷಣ ಸಂಸ್ಥೆಯುಒಂದು ಸ್ಥಾನ ಪಡೆಯಲು ಸದಾ ಸ್ಫರ್ಧಾತ್ಮಕವಾಗಿರುವುದು ಅಗತ್ಯ ಈ ನಿಟ್ಟಿನಿಲ್ಲ ಶೈಕ್ಷಣಿಕ ಅಭಿವೃದ್ದಿಗೆ ಯಾವಾಗಲು ಆದ್ಯತೆ ನೀಡಬೇಕಾಗುತ್ತದೆ ಎಂದು ಎಸ್.ಡಿ.ಎಂ. ಕಾಲೇಜು ಹೊನ್ನಾವರದ ಪ್ರಾಂಶುಪಾಲರಾದ ಡಾ. ಎಸ್.ಎಸ್. ಹೆಗಡೆ ಹೇಳಿದರು. ಅವರು ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಘಟಕವು ಏರ್ಪಡಿಸಿದ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಗಾರ ದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ್ದರು.
“ನಮ್ಮ ವೈಯಕ್ತಿಕ ಬೆಳವಣಿಗೆಯ ಜೊತೆಗೆ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಯ ಬೆಳವಣಿಗೆ ಇದರಿಂದ ಸಾಧ್ಯವಾಗುತ್ತದೆ ಎಂದರು” ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಮಂಗಲಾ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಮೇಘನ ಕೆ. ಸ್ವಾಗತಿಸಿದ್ದರು. ಪ್ರೊ. ಅಂಬುಜಾಕ್ಷಿ ಜಿ. ನಿರೂಪಿಸಿದ್ದರು. ಪ್ರೊ. ವಿನಿತ ವೆಂಕಟಪ್ಪ ವಂದಿಸಿದರು. ಕಾರ್ಯಗಾರದಲ್ಲಿ ಐಕ್ಯೂಎಸಿ ಸಂಚಾಲಕರಾದ ಪ್ರೊ. ಗಣೇಶ ಹೆಗಡೆ ರವರು ಉಪಸ್ಥಿತರಿದ್ದರು.
Leave a Comment