ಗೇರಸೊಪ್ಪಾ : “ಬೆಂಕಿ ಅವಘಡ” ತಪ್ಪಿಸಲು ನಿರ್ಲಕ್ಷವನ್ನು ತೊರೆದು ಜಾಗೃತರಾಗಿರಬೇಕು. ಅವಘಡ ಸಂಭವಿಸಿದಾಗ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವುದರಿಂದ ನಷ್ಟಗಳನ್ನು ತಪ್ಪಿಸಬಹುದು” ಎಂದು ಹೊನ್ನಾವರ ಅಗ್ನಿಶಾಮಕ ಠಾಣಾದ ಮುಖ್ಯಸ್ಥ ಅನಂತ ಜೆ. ಅಂಬಿಗ ನುಡಿದರು. ಅವರು ಸ್ಥಳೀಯ ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ದಿನಾಚರಣೆಯ ಸಂದರ್ಭದಲ್ಲಿ ಅಗ್ನಿ ಅವಘಡದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ತಮ್ಮ ಸಹೋದ್ಯೋಗಿ ರಮೇಶ ಚಿಕ್ಕಲಗಿರೊಂದಿಗೆ ಸೇರಿ ಅಗ್ನಿಶಾಮಕ ಸಲಕರಣೆಗಳ ಪರಿಚಯ ಮಾಡಿಕೊಟ್ಟರು.
ಪ್ರಾರಂಭದಲ್ಲಿ ದೀಪಬೆಳೆಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಕರಾದ ಬೀರಣ್ಣ ನಾಯಕ ವಹಿಸಿ ವಿವೇಕಾನಂದರ ಬದುಕಿನ ಸಾಧನೆಗಳನ್ನು ವಿವರಿಸಿದರು. ಮತ್ತು ದೇಶಾದ್ಯಂತ ಅಗ್ನಿ ದುರಂತಕ್ಕೆ ಕಾರಣವಾದ ಕೆಲವು ಘಟನೆಗಳನ್ನು ವಿಶ್ಲೇಷಿಸಿದರು. ಆರಂಭದಲ್ಲಿ ಡಾ.ಸುರೇಶ ತಾಂಡೇಲ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಕುಮಾರಿ ಅಂಜಲಿ ನಾಯ್ಕ ಪ್ರಾರ್ಥನೆ ಹಾಡಿದರು. ಕುಮಾರಿ ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದ್ದರು. ಶಿಕ್ಷಕಿ ಮಮತಾ ಎ.ಟಿ ಹಾಗೂ ಅಗ್ನಿಶಾಮಕ ಠಾಣೆಯ ರಮೇಶ ಚಿಕ್ಕಲಗಿ ಉಪಸ್ಥಿತರಿದ್ದರು.
Leave a Comment