ಹಳಿಯಾಳ: ಸುಮಾರು 70 ವರ್ಷದ ಕಾಲದಿಂದ ಜಿಲ್ಲೆಯಲ್ಲಿ ಅನೇಕ ಬಡ ರೈತರು ಅರಣ್ಯ ಜಮೀನುಗಳನ್ನು ಅತಿಕ್ರಮಣ ಮಾಡಿ ತಮ್ಮ ಉಪ ಜೀವನಕ್ಕಾಗಿ ಸದರ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆದು ತಮ್ಮ ಕುಟುಂಬಗಳ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದು ಅಂತಹವರಿಗೆ ಈವರೆಗೆ ಪಟ್ಟಾ ನೀಡದೆ ಅನ್ಯಾಯ ವೆಸಗಲಾಗುತ್ತಿದ್ದು 2 ತಿಂಗಳ ಒಳಗೆ ಪಟ್ಟಾ ನೀಡದೆ ಇದ್ದರೇ ಹಳಿಯಾಳದಿಂದ ಪಾದಯಾತ್ರೆಯ ಮೂಲಕ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು “ಚಲೋ ವಿಧಾನಸೌಧ” ಚಳುವಳಿ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮೀತಿ ಕೆಂಪು ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ವ್ಹಿ.ಬಿ.ರಾಮಚಂದ್ರ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದಲ್ಲಿ ಸಭೆ ಸೇರಿದ ಕೆಂಪು ಸೇನೆ ಸಂಘಟನೆಯವರು ರೈತರೊಂದಿಗೆ ಚರ್ಚಿಸಿ ಈ ಕುರಿತು ಪತ್ರಿಕಾಗೊಷ್ಠೀ ನಡೆಸಿ ಮಾಹಿತಿ ನೀಡಿದರು. ಅರಣ್ಯ ಜಮೀನು ಅತಿಕ್ರಮಣ ಸಮಸ್ಯೆ ಕುರಿತು ರಾಜ್ಯ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಸರ್ಕಾರಗಳು ಆಡಳಿತ ನಡೆಸಿ ಹೊಗಿದ್ದರು ಯಾರು ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಆರೋಪಿಸಿದ ಅವರು ಇದಕ್ಕಾಗಿಯೇ ದಲಿತ ಸಂಘರ್ಷ ಸಮಿತಿ (ಕೆಂಪು ಸೇನೆ) ವತಿಯಿಂದ ಪಾದಯಾತ್ರೆಯ ಮೂಲಕ ಹಳಿಯಾಳ ತಾಲೂಕಿನಿಂದ ಕಾರವಾರ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು 2 ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದ ಅವರು ಅರಣ್ಯ ಜಮೀನನ್ನು ಎಲ್ಲಾ ಜಾತಿಯ ಬಡ ರೈತರು ಅತಿಕ್ರಮಣ ಮಾಡಿ ಸಾಗುವಳಿ ಮಾಡಿಕೊಂಡು ಬರುತ್ತಿರುವÀ ಜಿ.ಪಿ.ಎಸ್ ಮಾಡಿರುವ ಜಮೀನುಗಳನ್ನು ಹಾಗೂ ಜಿ.ಪಿಎಸ್ ಮಾಡದೇ ಇರುವ ಜಮೀನುಗಳನ್ನು ಜಿ.ಪಿ.ಎಸ್ ಮಾಡಿ ರೈತರ ಹೆಸರಿಗೆ ಖಾಯಂ ಮಂಜೂರು ಮಾಡಿ ಪಟ್ಟಾ ಕೊಡಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದೆ ಎಂದ ರಾಮಚಂದ್ರ ಒಂದಾನು ವೇಳೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದೆ ಯಾವುದೇ ರೀತಿಯ ಕ್ರಮ ಕೈಗೊಳ್ಳದಿದ್ದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಮಸ್ತ ಅತಿಕ್ರಮಣ ರೈತರೊಂದಿಗೆ ಹಳಿಯಾಳದಿಂದ ಪಾದಯಾತ್ರೆಯ ಮೂಲಕ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ರಾಜಧಾನಿಯವರಗೆ “ಚಲೋ ವಿಧಾನಸೌಧ” ನಡೆಸಲು ತೀರ್ಮಾನಿಸಿರುವುದಾಗಿ ಘೊಷಿಸಿದರು. ನಮ್ಮ ಹಕ್ಕನ್ನು ಪಡೆಯಲು ಈಗಾಗಲೇ ಪ್ರತಿ ತಾಲೂಕು, ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸುತ್ತಿದ್ದು ಸಾವಿರಾರು ರೈತರು ಹೋರಾಟದಲ್ಲಿ ಭಾಗಿಯಾಗಲು ಮುಂದೆ ಬಂದಿದ್ದು ಸರ್ಕಾರದ ನಡೆಯನ್ನು ನೋಡಿ ಮುಂದಿನ ಹೋರಾಟ ನಡೆಸಲಾಗುವುದು ಎಂದ ಅವರು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು. ಸುದ್ದಿಗೊಷ್ಠಿಯಲ್ಲಿ ಜಿಲ್ಲೆಯ ವಿವಿಧ ತಾಲೂಕಾಧ್ಯಕ್ಷರುಗಳಾದ ಶಿವಾಜಿ ಮಂಗೇಶ್ಕರ, ಲಕ್ಷ್ಮಣ ದನಗಾರ, ಚಂದ್ರಕಾಂತ ಭೋವಿವಡ್ಡರ, ಅಶೋಕ ಕೆಸರೆಕರ, ಮುಬಾರಕ, ಕೈತಾನ ಕಮ್ರೇಕರ, ಸುಭಾಷ ಜಾಧವ, ಮುಕುಂದ ಕಿನಗೆಕರ, ರಾಜು, ಹನುಮಂತ, ಸೈಯದಸಾಬ, ಅಬ್ದುಲ್, ಜುಮಾಸಾಬ ಪಾಟೀಲ್, ರಾಮಪ್ಪಾ ಇತರರು ಇದ್ದರು
Leave a Comment