ಹಳಿಯಾಳ: ವೈದ್ಯರು ಚಿಕಿತ್ಸೆ ಮಾಡುವ ವೇಳೆ ತೋರಿದ ನೀರ್ಲಕ್ಷ್ಯದ ಕಾರಣ ಬಾಣಂತಿ(ಹೆರಿಗೆಯಾದ) ಮಹಿಳೆ ಸಾವೀಗಿಡಾಗಿದ್ದಾಳೆಂದು ಆರೋಪಿಸಿ ಅವರ ಕುಟುಂಬದವರು ಹಾಗೂ ಸಮಾಜದ ಜನತೆ ಹಳಿಯಾಳ ಸರ್ಕಾರಿ ಆಸ್ಪತ್ರೆಯ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಹಳಿಯಾಳ ಚವ್ವಾಣ ಪ್ಲಾಟನ ಮುಸ್ಲಿಂ ಸಮುದಾಯಕ್ಕೆ ಸೇರಿದ ಆಯೇಷಾ ಗೌಸ ಅತ್ತಾರ ಸಾವಿಗಿಡಾದ ದುರ್ದೈವಿ ಮಹಿಳೆಯಾಗಿದ್ದಾಳೆ. ಇವಳು ದಿ.8 ರಂದು ರಾತ್ರಿ 2ನೇ ಹೆರಿಗೆಗೆ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು ಅಂದು ಮಧ್ಯರಾತ್ರಿ ವೇಳೆ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಆಯೇಷಾಗೆ ಬಾಣಂತನ ಮಾಡಲಾಗಿದ್ದು ಆ ಸಂದರ್ಭದಲ್ಲಿ ಆಕೆಗೆ ತೀವೃತರವಾದ ರಕ್ತಸ್ರಾವವಾಗುತ್ತಿರುವುದನ್ನು ಅರಿತ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಸೂಚಿಸಿದ್ದು ಅಲ್ಲಿ ತೆರಳಿದ ಕುಟುಂಬಸ್ಥರಿಗೆ ಹುಬ್ಬಳ್ಳಿ ಕಿಮ್ಸ್ಗೆ ದಾಖಲಾಗುವಂತೆ ತಿಳಿಸಿದಾಗ ಆಯೇಷಾಳನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಿ ದಿ.13 ರ ವರೆಗೆ ಚಿಕಿತ್ಸೆ ನೀಡಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ದಿ.13 ರ ಮಧ್ಯಾಹ್ನ ಆಯೇಷಾ ಸಾವನ್ನಪ್ಪಿದ್ದಾಳೆಂದು ಆಕೆಯ ಪತಿ ಹಾಗೂ ತಂದೆ ಮಾಧ್ಯಮದವರಿಗೆ ತಿಳಿಸಿದ್ದಾರೆ. ಶನಿವಾರ ರಾತ್ರಿ ಕುಟುಂಬಸ್ಥರು ಹಾಗೂ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಹಿರಿಯರು ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಶವವನ್ನು ಆಸ್ಪತ್ರೆಯ ಹೊರಗೆ ಅಂಬ್ಯುಲೆನ್ಸನಲ್ಲೇ ಇರಿಸಿ ಪ್ರತಿಭಟಿಸಿದರು ಅಲ್ಲದೇ ತಾಲೂಕಾ ವೈದ್ಯಾಧಿಕಾರಿ ರಮೇಶ ಕದಂ ಅವರ ಕಚೇರಿಗೆ ತೆರಳಿ ಮಹಿಳೆಯ ಹೇರಿಗೆ ಸಂದರ್ಭದಲ್ಲಿ ನಡೆದಿರುವ ಕರ್ತವ್ಯಲೋಪದ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಅಲ್ಲದೇ ಮೃತ ಮಹಿಳೆಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು ಮಾತ್ರವಲ್ಲದೇ ಮೃತಳ ತಂದೆ ಹಾಗೂ ಆಕೆಯ ಪತಿ ಗೌಸ ಲಿಖಿತ ದೂರನ್ನು ತಾಲೂಕಾ ವೈದ್ಯಾಧಿಕಾರಿಗೆ ಸಲ್ಲಿಸಿದರು. ಪ್ರತಿಭಟನಾಕಾರರು ತಾಲೂಕಾ ಆಸ್ಪತ್ರೆಯಲ್ಲಿ ಸಾಕಷ್ಟು ಲೋಪ ದೋಷಗಳಿಗೆ ಪ್ರತಿಯೊಂದು ಸಂದರ್ಭದಲ್ಲಿ ಧಾರವಾಡ, ಹುಬ್ಬಳ್ಳಿಗೆ ಬರೆದು ಕೊಡುತ್ತಾರೆ ಇಲ್ಲಿ ಚಿಕಿತ್ಸೆ ನೀಡುವುದಿಲ್ಲ , ಆಸ್ಪತ್ರೆಯ ವೈದ್ಯರು ಹೊರಗೆ ತಮ್ಮ ಖಾಸಗಿ ಆಸ್ಪತ್ರೆಗಳ ಬಗ್ಗೇ ಹೆಚ್ಚಿನ ಗಮನ ಹರಿಸುತ್ತಾರೆ, ಶುಷ್ರೂಷಕಿಯರು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ರೋಗಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆಂದು ತೀವೃ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಇನ್ನೂ ಮುಂದೆ ಯಾವ ಸಮಾಜದ ಜನತೆಗೂ ಆಸ್ಪತ್ರೆಯಲ್ಲಿ ಸರಿಯಾ ಮಾತಿನ ಚಕಮಕಿ ನಡೆಯಿತು. ತಾಲೂಕಾ ವೈದ್ಯಾಧಿಕಾರಿ ಕದಂ ಅವರು ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಹೇಳಿ ಪ್ರತಿಭಟನಾಕಾರರ ಮನವೊಲಿಸಿದ ಮೇಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸುಬಾನಿ ಹುಬ್ಬಳ್ಳಿ, ಫಯಾಜ ಶೇಖ, ಮುಖಂಡರಾದ ಅಲಿಮ ಬಸರಿಕಟ್ಟಿ, ಪೀರಾ ಮಕಾನದಾರ, ರಾಜು ಮುಲ್ಲಾ, ಅಲಿಸಾಬ ಧಾರವಾಡಕರ, ಮಸ್ತಾನ ಮುನವಳ್ಳಿ, ಮಹಮ್ಮದ ಶಫಿ ಕಾಕರ, ಅನಿಸ ಪಟೇಲ್, ನಿಸಾರ ದಲಾಲ, ಸೈದಾಮದ ಕಾಕರ ಮೌಲಾನಾ ನಸ್ರುಲ್ಲಾ ಮೊದಲಾದವರು ಇದ್ದರು.
Leave a Comment