ಹೊನ್ನಾವರ ತಾಲೂಕಿನ ಮಂಕಿಯ ಬೋಳೆ ಬಸ್ತಿಯಲ್ಲಿ ಶ್ರೀ ಹೊನ್ನ ಮಾಸತಿ ಸ್ಪೋಟ್ರ್ಸ ಕ್ಲಬ್ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು
. ಬೊಳೆ ಬಸ್ತಿಯ ಶ್ರೀ ಹೊನ್ನ ಮಹಾಸತಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣೆಗೆ ಮೂಲಕ ಬಂದು ಬೊಳೆ ಬಸ್ತಿಯಲ್ಲಿ ಶಾಸಕ ಮಂಕಾಳ ವೈದ್ಯರವರು ಮಾಡಿದ ಕಾಮಗಾರಿಯನ್ನು ಉದ್ಘಾಟಿಸಿದರು. ನಂತರ ಶಾಸಕ ಮಂಕಾಳ ವೈದ್ಯರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿದ ಶಾಸಕ ವೈದ್ಯರನ್ನು ಸನ್ಮಾನಿಸಲಾಯಿತು.ನಂತರ ಅವರು ಮಾತನಾಡಿ ನಾನು ಕಳೆದ ವರ್ಷ ಈ ಊರಿಗೆ ಬಂದಾಗ ನನಗೆ ಊರಿನ ಸಮಸ್ಯೆಗಳ ಕುರಿತು ಮನವಿಯನ್ನು ಕೊಟ್ಟಿದ್ದರು. ಒಂದು ಊರಿನ ಅಭಿವೃದ್ದಿ ಆ ಊರಿನ ಜನರಿಂದ ಸಾಧ್ಯ, ಯಾವಾಗ ಮನಸಲ್ಲಿ ಇದು ನನ್ನೂರು ನನ್ನ ಜನ ಈ ಊರಿಗೆ ನಾನೇನಾದರೂ ಮಾಡಬೇಕು ಎನ್ನುವುದು ಬರುತ್ತದೆಯೋ ಆವತ್ತೆ ಆ ಊರು ಅಭಿವೃದ್ದಿಯತ್ತ ಮುಖ ಮಾಡುತ್ತದೆ. ಅದನ್ನು ನಿಮ್ಮ ಊರಿನ ಪ್ರಮುಖರು ಮಾಡಿದ್ದರೆ. ನಾನು ಶಾಸಕನಾಗಿ ಬಂದಾಗ ನನ್ನ ಈ ಕ್ಷೇತ್ರದಲ್ಲಿ ಸರಿಯಾದ ಮನೆ ಇರಲಿಲ್ಲ, ಎಷ್ಟೋ ಮನೆಗಳು ಹಳ್ಳಿಗಳು ವಿದ್ಯುತ್ ಬೆಳಕು ಕಾಣದೇ ದೀಪದ ಬೆಳಕಲ್ಲಿ ದಿನ ಕಳೆಯುತ್ತಿದ್ದರೂ, ಓಡಾಡಲೂ ಸರಿಯಾದ ರಸ್ತೆ ಸೇತುವೆಗಳು ಇರಲಿಲ್ಲ ನಾನು ನನಗೆ ಸಿಕ್ಕಿರುವ ಅವಧಿಯಲ್ಲಿ ನನ್ನ ಶೃಮವಹಿಸಿ ನನ್ನಿಂದಾಗುವ ಕೆಲಸವನ್ನು ಮಾಡಿದ್ದೇನೆ ನೀವು ಕೊಟ್ಟಿರುವ ಕೆಲಸವನ್ನು ನಾನು ನಿಭಾಯಿಸಿದ್ದೇನೆ . ನಾನು ಎಲ್ಲಾ ಕಡೆ ಹೇಳುವಾಗ ಶಿಕ್ಷಣಕ್ಕೆ ಮೊದಲ ಆದ್ಯತೆ ಇಡೀ ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕಂಪ್ಯೂಟರ್, ಪ್ರಿಂಟರ್ನ ಇದೇ ಅಂದರೆ ಅದು ನನ್ನ ಕ್ಷೇತ್ರದಲ್ಲಿ ಮಾತ್ರ ಅದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಯಾರೇ ಎನೇ ಹೇಳಿದರೂ ನನ್ನ ಬಗ್ಗೆ ಠೀಕೆ ಮಾಡಿದರೂ ಕೂಡ ಅದಕ್ಕೆ ನಾನು ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದುಕೊಂಡಿದ್ದೇನೆ ಅವರಿಗೆ ದೇವರು ಒಳ್ಳೆ ಬುದ್ದಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ನಾನು ಶಾಸಕನಾಗಿ ಆಯ್ಕೆ ಆದಮೇಲೆ ಬಡವರಿಗಾಗಿ ಕೆಲಸ ಮಾಡುತ್ತಿದ್ದೆನೆ ಯಾಕೆಂದರೆ ನಾನು ಬಡ ಕುಟುಂಬದಿಂದ ಬಂದಿದ್ದವನು. ಎಂದುರು.
À ಗಣಪತಿ ನಾಯ್ಕ ಮಾತನಾಡಿ ಮಂಕಾಳ ವೈದ್ಯರು ಮಂಕಿ ಕುಂಬಾರಮಕ್ಕಿಗೆ ಮಾಡಿದ ಅಭಿವೃದ್ದಿಯ . ರೈತರ ಸಾಲಮನ್ನ ಘೊಷಣೆಯಾದಾಗ 731 ರೈತರಿಗೆ 2.66 ಕೋಟಿ ರೂಪಾಯಿ ಸಾಲ ಮನ್ನ ಮಾಡಿದ್ದಾರೆ. ಹೊಳೆಯ ನೀರು ಗದ್ದೆಗೆ ನುಗ್ಗಿ ಗದ್ದೆಯಲ್ಲಿ ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿತ್ತು ಶಾಸಕರು 50 ಲಕ್ಷ ಹಣ ಮಂಜೂರಿ ಮಾಡಿ ಹೊಳೆಗೆ ತಡೆಗೋಡೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಬೊಳೆ ಬಸ್ತಿಯ ಕಾಂಕ್ರೀಟ್ ರಸ್ತೆಗೆ 19 ಲಕ್ಷ, ಕುಂಬಾರಕೇರಿ ಕಾಂಕ್ರೀಟ್ ರಸ್ತೆಗೆ 14 ಲಕ್ಷ, ಕಲ್ಯಾಣ ಮಂಟಪಕ್ಕೆ 5 ಲಕ್ಷ, ಸಾರಸ್ವತ ಕೇರಿ ರಸ್ತೆಗೆ 10 ಲಕ್ಷ ಒಟ್ಟೂ ಒಂದು ಕೋಟಿಗೂ ಅಧಿಕ ಹಣವನ್ನು ಕುಂಬಾರಕೇರಿಗೆ ಮಂಜೂರಿ ಮಾಡಿದ್ದಾರೆ. ಯಾತ್ರಾ ನಿವಾಸ ಭವನಕ್ಕೆ 25 ಲಕ್ಷ ರೂಪಾಯಿಯನ್ನು ಘೋಷಣೆ ಮಾಡಿದ್ದಾರೆ ಮಂಕಾಳ ವೈದ್ಯರು ಶಿಕ್ಷಣ ಪ್ರೇಮಿ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಎಂದರೆ ಮಂಕಿಯ ಒಬ್ಬ ಹುಡುಗ ವಿಶಾಲ ಈಶ್ವರ ನಾಯ್ಕ ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾದಲ್ಲಿ ಓದಿಸುತ್ತಿರುವುದು. ಅಂತಹ ಶಾಸಕರನ್ನು ಪಡೆದ ನಾವು ಪುಣ್ಯವಂತರು ಎಂದರು.
ಈ ಸಂಧರ್ಬದಲ್ಲಿ ಸತೀಶ ನಾಯ್ಕ, ಉಲ್ಲಾಸ ನಾಯ್ಕ, ಅಣ್ಣಯ್ಯ ನಾಯ್ಕ, ವನಿತಾ ನಾಯ್ಕ, ಚಂದ್ರಶೇಖರ ಗೌಡ ಗೋಪಾಲ ನಾಯ್ಕ ಮುತಾದವರು ಉಪಸ್ಥಿತರಿದ್ದರು.
Leave a Comment