ಹಳಿಯಾಳ : ಕಾಡಿನಲ್ಲಿರಬೇಕಾದ ಕೃಷ್ಣಮೃಗ(ಜಿಂಕೆ)ಯೊಂದು ಸೋಮವಾರ ಸಾಯಂಕಾಲ ಹಳಿಯಾಳ ಪಟ್ಟಣದ ಗುಡ್ನಾಪೂರ ಆಶ್ರಯ ಬಡಾವಣೆಯಲ್ಲಿಯ ಮನೆಗೆ ಬಂದು ಜನರ ಪ್ರೇಕ್ಷಣೆಯ ಕೇಂದ್ರಬಿಂದುವಾಗಿತ್ತು. ಗುಡ್ನಾಪುರ, ದೇಶಪಾಂಡೆ ಆಶ್ರಯ ಬಡಾವಣೆಯಲ್ಲಿ ವಾಸಿಸುವ ಸದ್ಯ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ವೃತಾಚರಣೆಯಲ್ಲಿರುವ ಗಣೇಶ ಗೋಸಪ್ಪನವರ ಎನ್ನುವವರ ಮನೆಗೆ ಬಂದಿರುವ ಈ ಅಪರೂಪದ ಅತಿಥಿ ಅವರ ಹಿತ್ತಲು ಬಾಗಿಲಿಂದ ಒಳಗೆ ಪ್ರವೇಶಿಸಿ ಒಂದು ಮೂಲೆಯಲ್ಲಿ ಕುಳಿತುಕೊಂಡಿತ್ತು. ಮನೆಯಲ್ಲಿಯ ಜನರು ಆಕಸ್ಮಿಕವಾಗಿ ಬಂದ ಅಪರೂಪದ ಅತಿಥಿಯನ್ನು ಕಂಡು ಹೌಹಾರಿದರಲ್ಲದೇ ತಕ್ಷಣ ಅಕ್ಕಪಕ್ಕದ ಜನರಿಗೆ ತಿಳಿಸಿದರು ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ಅಷ್ಟರಲ್ಲಾಗಲೇ ನೂರಾರು ಜನತೆ ಗಣೇಶ ಅವರ ಮನೆಗೆ ಆಗಮಿಸಿ ಕೃಷ್ಣಮೃಗವನ್ನು ಕಂಡು ಪೊಟೊಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಅರಣ್ಯ ಇಲಾಖೆಯವರು ಬಂದು ಕೃಷ್ಣಮೃಗವನ್ನು ವಶಕ್ಕೆ ಪಡೆದು ಹತ್ತಿರದಲ್ಲಿರುವ ಕಾಡಿಗೆ ಬಿಟ್ಟು ಬರುವುದಾಗಿ ತಿಳಿಸಿದರು.
Leave a Comment