ಹಳಿಯಾಳ : ಖಚಿತ ಮಾಹಿತಿ ಆಧರಿಸಿ ಅಕ್ರಮವಾಗಿ ಸಾಗವಾಣಿ ಕಟ್ಟಿಗೆ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವಾರ ಮಧ್ಯಾಹ್ನ ಈ ಕಾರ್ಯಾಚರಣೆ ನಡೆಸಲಾಗಿದ್ದು ತಾಲೂಕಿನ ಮುಗದಕೊಪ್ಪ ಕ್ರಾಸ್ದಿಂದ ಕಾಳಗಿನಕೊಪ್ಪ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅನಧೀಕೃತವಾಗಿ ಅಶೋಕ ಲೆಯಲ್ಯಾಂಡ್ ವಾಹನದಲ್ಲಿ ಅಂದಾಜು 1 ಲಕ್ಷ ರೂ. ಬೆಲೆ ಬಾಳುವ ಸಾಗವಾಣಿ ಜಾತಿಯ 4=0.368 ಘ.ಮೀ ತುಂಡುಗಳನ್ನು ಸಾಗಿಸುತ್ತಿರುವಾಗÀ ಆರೋಪಿತರಾದ ಹಂಪಿನಳ್ಳಿ ಗ್ರಾಮದ ನಿಂಗಪ್ಪಾ ಮಲ್ಲೇಶಿ ಕೇರಕಾರ ಮತ್ತು ರವಿ ರಾಮನ್ನಾ ನೇಕಾರನನ್ನು ಬಂಧಿಸಲಾಗಿದೆ.
ಇವರ ವಿರುದ್ದ ಕರ್ನಾಟಕ ಅರಣ್ಯ ಕಾಯ್ದೆ ಮತ್ತು ಅರಣ್ಯ ನಿಯಮ ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು ಆರೋಪಿಗಳನ್ನು ಹಳಿಯಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹಳಿಯಾಳ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ ಎಸ್, ಎಸಿಎಫ್ ಸಂತೋಷ ಕೆಂಚಪ್ಪನವರ ಮಾರ್ಗದರ್ಶನದಲ್ಲಿ ಹಳಿಯಾಳ ವಲಯದ ಅರಣ್ಯಾಧಿಕಾರಿ ಪ್ರಸನ್ ಸುಬೇದಾರ, ಎಸ್.ಜೆ. ಮುಕ್ರಿ, ಅರಣ್ಯ ರಕ್ಷಕರಾದ ಮಲ್ಲಪ್ಪಾ ಕದಾಂಪೂರ, ರಾಜಶೇಖರ ರಾಜನ್ನವರ, ವಾಯ. ಎ. ಬಾನಸೆ, ಪರಶುರಾಮ ತೋರಸ್ಕರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Leave a Comment