ಹೊನ್ನಾವರ .ದೇಶೀಯ ಕ್ರೀಡೆ ಕಬ್ಬಡ್ಡಿ ಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ À ಹೊನ್ನಾವರ ತಾಲೂಕಿನ 22 ಕಬ್ಬಡ್ಡಿ ತಂಡಗಳಿಗೆ ಟಿ. ಶರ್ಟ್ ಹಾಗೂ ಟ್ರ್ಯಾಕ್ ಶೂ ಗಳುನು À ಶಾಸಕ ಮಂಕಾಳ ವೈದ್ಯ ್ನ ವಿತರಿಸಿದರು.
ಕಾರ್ಯಕ್ರಮವನ್ನು ಚರ್ಚ್ನ ಧರ್ಮಗುರುಗಳಾದ ಸುದೀಪ್ ಗೊನ್ಸಾಲ್ವಿಸ್ ಉದ್ಘಾಟಿಸಿ ನಂತರ ುಮಾತನಾಡಿ. ಕ್ರೀಡೆ ಎನ್ನುವುದು ಒಂದು ಕಲೆ ಇದ್ದ ಹಾಗೆ ಆ ಕಲೆಯನ್ನು ನಾವು ವಿವಧ ರೂಪದಲ್ಲಿ ಪ್ರದರ್ಶಿಸುತ್ತೇವೆ. ಕ್ರೀಡೆಯೂ ಬೆರೆ ಬೆರೆ ಊರಿನವರೊಂದಿಗೆ ಪ್ರೀತಿ ಸಲುಗೆ ಬಾಂಧವ್ಯ ಬೆಳೆಸುವ ಕಲೆ. ಹಳ್ಳಿಯಿಂದ ದಿಲ್ಲಿಯವರೆಗೆ ನಮ್ಮ ಸಾಧನೆಯನ್ನು ಈ ಕಲೆಯ ಮೂಲಕ ಪ್ರದರ್ಶಿಸುತ್ತೇವೆ ಎಂದರು.
ನಂತರ ಅಧ್ಯಕ್ಷತೆ ವಹಿಸಿದ ಶಾಸಕ ಮಂಕಾಳ ವೈದ್ಯ ಮಾತನಾಡಿ ಜನ ಪ್ರತಿನಿಧಿಗಳೆಂದರೆ ಜನರಿಗೆ ಅನುಕೂಲವಾಗುವ ಕೆಲಸದಲ್ಲಿ ನಿರತರಾಗಿರಬೇಕು. ಯಾವುದೇ ಒಂದು ಯೋಜನೆಯನ್ನು ಸರ್ಕಾರದಿಂದಲೂ ಅಥವಾ ಯಾವುದಾದರೂ ಸಂಘ ಸಂಸ್ತೆಗಳಿಂದಾದರೂ ಜನರಿಗೆ ಮುಟ್ಟಿಸುವ ಕೆಲಸ ಜನಪ್ರತಿನಿಧಿಯದ್ದಾಗಿರಬೆಕು.
ನಾನು ಕಳೆದ 25 ವರ್ಷದಿಂದ ಕ್ರೀಡೆಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇನೆ. ಜಿಲ್ಲಾ ಮಟ್ಟದಲ್ಲಿ ಆಡುವ ಮಕ್ಕಳಿಗೆ ಟ್ರ್ಯಾಕ್ ಶೂ ವಿತರಣೆ ಮಾಡುತ್ತಿದ್ದೇನೆ. ಇದು ಸರ್ಕಾರದಿಂದ ಆಗಲಿ ಇಲಾಖೆಯಂದಾಗಲಿ ಜಿಲ್ಲಾ ಮಟ್ಟದಲ್ಲಿ ಆಡುವ ಮಕ್ಕಳಿಗೆ ಟ್ರಾಕ್ ಶೂ ವಿತರಿಸುವುದಿಲ್ಲ, ಇಲ್ಲಿ ಯಾವುದೇ ರಾಜಕಾರಣ ಇಲ್ಲ. ಕ್ರೀಢಾ ಪಟುಗಳು ಹಾಗೂ ಅಸೊಸಿಯೇಶನ್ನವರು ಮ್ಯಾಟ್ ಬೇಡಿಕೆ ಇಟ್ಟಿದ್ದರು. ಕ್ರೀಡಾಸಚೀವರಾಗೆ ಒತ್ತಾಯ ಮಾಡಿ ಜಿಲ್ಲೆಗೆ 2 ರಂತೆ ಮ್ಯಾಟ್ ಒದಗಿಸುವ ಕೆಲಸ ಮಾಡಿದ್ದೇನೆ ಇದರಲ್ಲಿ 1 ಮ್ಯಾಟ್ ಹೊನ್ನಾವರ ಭಟ್ಕಳಕ್ಕೆ ಕೊಟ್ಟಿದ್ದೇನೆ. ಶೂ, ಡ್ರೆಸ್ ಕೊಡೊದು ರಾಜಕೀಯ ಅಲ್ಲ. ನಾವು ಮಾಡುವ ಕೆಲಸದಿಂದ ಜನರಿಗೆ ತೃಪ್ತಿಯಾಗಬೆಕು ಎಂದರು. ನನ್ನ ಕ್ಷೇತ್ರದ ಕ್ರೀಢಾಪಟುಗಳಿಗೆ ಯಾವುದೇ ತೊಂದರೆ ಆಗಬಾರದು. ನನ್ನ ಕ್ಷೇತ್ರದ ಹೆಸರು ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಎಲ್ಲಾ ರಂಗದಲ್ಲೂ ನನ್ನ ಕ್ಷೇತ್ರದ ಜನ ಇರಬೇಕು ಎನ್ನುವುದು ನನ್ನ ಆಸೆ ಎಂದರು.
ಈ ಸಂಧರ್ಬದಲ್ಲಿ ಚಂದ್ರಶೇಖರ ಗೌಡ, ಗೋಪಾಲ ನಾಯ್ಕ, ಕೃಷ್ಣ ಗೌಡ, ವಾಮನ ಣಾಯ್ಕ, ಗೋಪಾಲಕೃಷ್ಣ ಶೆಟ್ಟಿ ತಿಮ್ಮಪ್ಪ ಗೌಡ, ವಾಸು ಗೌಡ, ಉಪಸ್ಥಿತರಿದ್ದರು.
Leave a Comment