ಹೊನ್ನಾವರ:
ಮುದ್ದತ್ತು ಠೇವಣೆ ಅವಧಿ ಮೀರಿದರೂ ಹಣ ನೀಡದೇ ಸತಾಯಿಸುತ್ತಿರುವ ಹೊನ್ನಾವರ ತಾಲೂಕಿನ ಸಾಲ್ಕೋಡ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಕಾಯದರ್ಶಿಗೆ ಜಿಲ್ಲಾ ಗ್ರಾಹಕ ವೇದಿಕೆ 10ಸಾವಿರ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.
ಕರ್ಕಿಯ ರಾಮಕೃಷ್ಣ ವೆಂಕ್ರಟಮಣ ಹೆಬ್ಬಾರ ಎಂಬುವವರು ಹೂಡಿದ್ದ ದಾವೆಯ ಹಿನ್ನಲೆಯಲ್ಲಿ ಠೇವಣೆ ಹಣವನ್ನು ಬಡ್ಡಿ ಸಮೇತ ತಕ್ಷಣ ಪಾವತಿಸಬೇಕು ಹಾಗೂ 1 ತಿಂಗಳೊಳಗೆ ದೂರುದಾರರಿಗೆ ನೀಡಬೇಕು ಎಂದು ಗ್ರಾಹಕ ವೇದಿಕೆ ಅಧ್ಯಕ್ಷ ಗಿರಿಮಲ್ಲಪ್ಪ ಕುಂಬಾರ ಆದೇಶಿಸಿದ್ದಾರೆ.
ಹಿನ್ನಲೆ: ರಾಮಕೃಷ್ಣ ಹೆಬ್ಬಾರರವರು 2010ರಲ್ಲಿ ಸಾಲ್ಕೋಡಿನ ಕರಿಕಾನ ಪರಮೇಶ್ವರಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ 5ಲಕ್ಷ ರೂ ಠೇವಣೆಯಲ್ಲಿ 36 ತಿಂಗಳಿಗೆ ಶೇ. 10.50ರ ಬಡ್ಡಿದರದಲ್ಲಿ ಇರಿಸಿದ್ದರು. 2013ರಲ್ಲಿ ಅದನ್ನು 3ವರ್ಷಕ್ಕೆ ಅಂದರೆ 2016ರವರೆಗೆ ಮುಂದುವರೆಸಿದ್ದರು. ಅವಧಿ ಮುಗಿದ ನಂತರ ಮುದ್ದತ್ತು ಠೇವಣೆಯ ಹಣವನ್ನು ವಾಪಸ್ಸು ಕೇಳಲು ಹೊದರೆ ಸಂಘ ಇಲ್ಲದ ಸಬೂಬು ನೀಡಿತ್ತು. ಸಂಘದ ಅಧ್ಯಕ್ಷ ಜಿ.ಜಿ.ಭಟ್ಟ ಬೊಳ್ಗೆರೆ ಕೇಂದ್ರ ಸಚಿವ ಅಂನತಕುಮಾರ ಹೆಗಡೆ ಪರಮಾಪ್ತರು. ರಾಜಕಾರಣದ ತೀರಾ ಪ್ರಭಾವಶಾಲಿ ವ್ಯಕ್ತಿ ಆಗಿದ್ದರಿಂದ ಅವರನ್ನು ಎದುರಿಸಲು ಕಷ್ಟ ಸಾಧ್ಯ ಎಂದು ಮನಗಂಡು, ಗ್ರಾಹಕ ವೇದಿಕೆಯ ಮೆಟ್ಟಿಲು ಏರಿದ್ದರು. ಈ ಹಿಂದೆ ಈ ಸಹಕಾರಿ ಸಂಘದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಈ ಸಂಭದ ಕುಮುಟಾ ಸಹಕಾರಿ ಸಂಘದ ಸಹಾಯಕ ನಿರ್ಭಂದಿಕರಿಗೂ ದೂರು ನೀಡಲಾಗಿತ್ತು. ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಗೂ ನೋಟಿಸ್ ಜಾರಿ ಮಾಡಿದರೂ ಠೇವಣಿ ಪಾವತಿಸದ ಹಿನ್ನಲೆಯಲ್ಲಿ ಗ್ರಾಹಕ ವೇದಿಕೆ 1 ತಿಂಗಳೊಳಗೆ ಠೇವಣೆ ಇಟ್ಟ ಹಣ ಮತ್ತು ಬಡ್ಡಿ 10 ಸಾವಿರ ದಂಡ ನೀಡಬೇಕೆಂದು ಮಹತ್ವದ ಆದೇಶ ಹೊರಬಿದ್ದಿದೆ.
Leave a Comment