ಹೊನ್ನಾವರ ,
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಹೊನ್ನಾವರ ಇವರು ರಾಷ್ಟ್ರೀಯ ಪಿಂಚಣಿ ಯೋಜನೆ (ಓ.P.S) ರದ್ದು ಪಡಿಸಲು ಬೃಹತ್ ಹೋರಾಟ ಇದರ ಅಂಗವಾಗಿ ತಹಸೀಲ್ದಾರರಿಗೆ ಮನವಿ ಕೊಡುವ ಕಾರ್ಯಕ್ರಮ ನಡೆಯಿತು.
ಕೇಂದ್ರ ಸರಕಾರ 2004 ರಲ್ಲಿ ಅವೈಜ್ಞಾನಿಕ ಸಿದ್ದಾಂತ ಹಾಗೂ ಅಭದ್ರತೆಯಿಂದ ಕೂಡಿದ ಎನ್.ಡಿ.ಎಸ್. ಯೋಜನೆಯನ್ನು ಜಾರಿಗೊಳಿಸಿದ ತರುವಾಯು ಈ ಯೋಜನೆಯನ್ನು ರಾಷ್ಟ್ರದ ಪಶ್ಚಿಮ ಬಂಗಾಳ ಮತ್ತು ತ್ರಿಪುರ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯ ಸರ್ಕಾರಗಳು ನೂತನ ಪಿಂಚಣಿ ಯೋಜನೆಯನ್ನ ಅಳವಡಿಸಿ ಕೊಂಡಿರುತ್ತದೆ. ಅದರಂತೆ ಕರ್ನಾಟಕ ಸರ್ಕಾರವು 2006ರಲ್ಲಿ ಈ ಯೋಜನೆಯನ್ನು ಅಳವಡಿಸಿಕೊಂಡಿರುತ್ತದೆ. ಆದರೆ 2006 ರ ನಂತರ ರಾಜ್ಯದಲ್ಲಿ ನೇಮಕಗೊಂಡ ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯದಲ್ಲಿ ಹಲವು ನ್ಯೂನತೆಗಳು ಉಂಟಾಗಿರುವುದಲ್ಲದೆ, ಟ್ರಸ್ಟ್ ಮ್ಯಾನೇಜ್ಮೆಂಟ್ನವರು ನಿರ್ವಹಿಸುವ ಇದರ ಆರ್ಥಿಕ ನಿರ್ವಹಣೆಯಲ್ಲಿ ಯಾವುದೇ ಬದ್ಧತೆಗಳು ಇಲ್ಲದೆ, ಅನಿಶ್ಚಿತ ಪಿಂಚಣಿ ಯೋಜನೆಯಾಗಿದ್ದು ಇದರಿಂದ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 1.80 ಲಕ್ಷ ಸರ್ಕಾರಿ ನೌಕರರು ಸೇವಾ ನಿವೃತ್ತ ಸಂದರ್ಭದಲ್ಲಿ ಪಿಂಚಣಿ ಮತ್ತು ಇನ್ನಿತರ ಸವಲತ್ತುಗಳಿಂದ ವಂಚಿತರಾಗಿ ಸಾಮಾಜಿಕ ಅನ್ಯಾಯಕ್ಕೆ ತುತ್ತಾಗಲಿದ್ದಾರೆ. ಕೇಂದ್ರ ಸರ್ಕಾರದ ಅನಿಶ್ಚಿತ ಹಾಗೂ ಅಭದ್ರತೆಯಿಂದ ಕೂಡಿರುವ ನೂತನ ಪಿಂಚಣಿ ಯೋಜನೆಯಿಂದಾಗಿ ರಾಷ್ಟ್ರಾದ್ಯಂತ ನೌಕರರು ಹಾಗೂ ಕಾರ್ಮಿಕರು ಅನ್ಯಾಯಕ್ಕೆ ಒಳಗಾಗಿರುವ ಈ ಸನ್ನಿವೇಶದಲ್ಲಿ ರಾಷ್ಟ್ರಾದ್ಯಂತ ಎಲ್ಲ ರಾಜ್ಯಗಳಲ್ಲಿ ಹಾಗೂ ಕೇಂದ್ರ ಸರ್ಕಾರದ ಹಂತರದಲ್ಲಿನ ನೌಕರರ ಸಂಘಟನೆ ಹಾಗೂ ಕಾರ್ಮಿಕ ಸಂಘಟನೆಗಳು ಈ ಯೋಜನೆಯನ್ನು ವಿರೋಧಿಸಿ ಹಳೆ ಪಿಂಚಣಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರಗಳನ್ನು ಒತ್ತಾಯಿಸಿ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆರ್. ಪಿ. ಭಟ್ಟು ತಹಸೀಲ್ದಾರ ಮನವಿ ಸಮರ್ಥಿಸಿದ್ದರು.
ಈ ಸಂದರ್ಭದಲ್ಲಿ ಹೊನ್ನಾವರ ತಾಲೂಕು ಎನ್.ಪಿ.ಎಸ್ ಘಟಕದ ಅಧ್ಯಕ್ಷರಾದ ವಿ.ಎ.ಪಟಗಾರ ಹಾಗೂ ತಾಲೂಕು ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಎಂ. ಈ. ನಾಯ್ಕ, ಕಾರ್ಯದಶಿಗಳಾದ ಆರ್. ಓ. ನಾಯ್ಕ, ಖಜಾಂಚಿ ಎನ್. ಎಸ್ ನಾಯ್ಕ, ಅರುಣ ನಾಯ್ಕ, ಮೋಹನ ಸಾಳೆಹಿತ್ತಲ, ಅಣ್ಣಪ್ಪ ಮುಕ್ರಿ ಹಾಗೂ ಪದಾಧಿಕಾರಿಗಳು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎನ್. ಎಸ್. ನಾಯ್ಕ, ವಿ.ಜಿ ಹೆಗಡೆ, ಸುಧೀಶ ನಾಯ್ಕ, ಸಾಧನಾ ಬರ್ಗಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತಿಶ ನಾಯ್ಕ, ಹಾಗೂ ಪದಾಧಿಕಾರಿಗಳು ವಿವಿಧ ವೃಂದ ಸಂಘಗಳ ಅಧ್ಯಕ್ಷ ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ 200ಕ್ಕೆ ಹೆಚ್ಚು ಎನ್.ಪಿ.ಎಸ್ ನೌಕರರು ಸಾಂಕೇತಿಕ ಧsÀರಣಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
Leave a Comment