ಹೊನ್ನಾವರ: ನಾಮಧಾರಿ ಅಭಿವೃದ್ಧಿ ಸಂಘ ಮುಗ್ವಾದ ಸಭಾಭವನದ ಶಿಲಾನ್ಯಾಸ ಸಮಾರಂಭವು ದಿನಾಂಕ 28-01-2018 ರವಿವಾರ ಸಮಯ ಬೆಳಿಗ್ಗೆ 9-00 ಘಂಟೆಗೆ ಮುಗ್ವಾದಲ್ಲಿ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್.ಎಮ್ ನಾಯ್ಕ ತಿಳಿಸಿದ್ದಾರೆ.
ಅವರು ತಾವು ಕರೆದ ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿ ಮಾತನಾಡುತ್ತಿದ್ದರು.
ಕಾರ್ಯಕ್ರಮಕ್ಕೆ ಶಾಸಕರಾದ ಶಾರದಾ ಮೋಹನ ಶೇಟ್ಟಿ, ಮಂಕಾಳು ಎಸ್.ವೈದ್ಯ, ಜಿಲ್ಲಾ ಕಾಂಗೈ ಅಧ್ಯಕ್ಷ ಭೀಮಣ್ಣ ಟಿ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ಬಿ.ಜೆ.ಪಿ ಮುಖಂಡರಾದ ಜೆ.ಡಿ ನಾಯ್ಕ, ಯಶೋಧರ ನಾಯ್ಕ, ಎಮ್.ಜಿ ನಾಯ್ಕ, ನಾಗರಾಜ ನಾಯಕ ತೊರ್ಕೆ, ಸೂರಜ್ ಸೋನಿ, ಮಾಜಿ ಶಾಸಕ ದಿನಕರ ಶೆಟ್ಟಿ, ವಾಮನ ಎಸ್ ನಾಯಕ, ಮಾಜಿ ಕ.ಸಾ.ಪ ಅಧ್ಯಕ್ಷ ರೋಹಿದಾಸ ನಾಯ್ಕ, ಉದ್ಯಮಿಗಳಾದ ವೆಂಕಟ್ರಮಣ ವಿ ಹೆಗಡೆ, ಮಂಜುನಾಥ ಎಲ್ ನಾಯ್ಕ ಅಂಕೋಲಾ, ಸುನೀಲ ನಾಯ್ಕ ಭಟ್ಕ¼,À ವಕೀಲರಾದ ಆರ್.ಎಸ್ ಕಾಮತ್, ತಾಲೂಕಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಆಗಮಿಸಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಗಣೇಶ ನಾಯ್ಕ, ಏಕನಾಥ ನಾಯ್ಕ, ಶಿವರಾಮ ನಾಯ್ಕ, ಸೀತಾರಾಮ ನಾಯ್ಕ, ಬಾಬು ನಾಯ್ಕ, ರಘುವೀರ ನಾಯ್ಕ, ಮಂಜುನಾಥ ನಾಯ್ಕ, ನಾಗೇಶ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು.
Leave a Comment