ಹೊನ್ನಾವರ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ ನಿಯಮಿತ ಇದರ ಸುವರ್ಣ ಮಹೋತ್ಸವ ಹಬ್ಬ 2018 ಹಾಗೂ ಮಂಕಿ ಶಾಖೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜ. 30ರಂದು ಮಂಗಳವಾರ ಆಚರಿಸಲು ಆಡಳಿತ ಮಂಡಳಿ ಸನ್ನದ್ದವಾಗಿದೆ. ಪ್ರಾರಂಭದಲ್ಲಿ ಬ್ಯಾಂಕಿನ ಕಾರ್ಯಕ್ಷೇತ್ರವು ಮೂಲತಃ ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಿಗೆ ವಿಸ್ತøತವಾಗಿತ್ತು. ಸನ್ 1935ನೇ ಸಾಲಿನಲ್ಲಿ ಸ್ಥಾಪನೆಯಾದ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಜಮೀನು ಅಭಿವೃದ್ಧಿ ಬ್ಯಾಂಕು ನಿಯಮಿತ, ಶಿರಸಿ ಇದು ಇಡೀ ಜಿಲ್ಲೆಯನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಅಳವಡಿಸಿಕೊಂಡ ನಂತರ ನಮ್ಮ ಬ್ಯಾಂಕು ಉತ್ತರಕನ್ನಡ ಜಿಲ್ಲೆಯಲ್ಲಿ ಸ್ಥಾಪನೆಯಾದ ದ್ವಿತೀಯ ಪ್ರಾಥಮಿಕ ಜಮೀನು ಅಭಿವೃದ್ಧಿ ಬ್ಯಾಂಕ ಆಗಿದೆ. ಸನ್ 1972 ನೇ ಸಾಲಿನಲ್ಲಿ ಭಟ್ಕಳ ತಾಲೂಕಿನಲ್ಲಿ ಪ್ರತ್ಯೇಕ ಜಮೀನು ಅಭಿವೃದ್ಧಿ ಬ್ಯಾಂಕು ಅಸ್ತಿತ್ವಕ್ಕೆ ಬಂದಾಗಿನಿಂದ ಹೊನ್ನಾವರ ತಾಲೂಕಿನ ರೈತರಿಗಷ್ಟೆ ಸಾಲ ಸೌಲಭ್ಯ ನೀಡುತ್ತಾ ಬಂದಿರುತ್ತದೆ. ಈ ಬ್ಯಾಂಕಿನ ಮುಖ್ಯ ಪೋಷಕ ಸದಸ್ಯರಾಗಿದ್ದ ದಿ. ಆರ್.ಎಸ್.ಹೆಗಡೆ ಇವರೊಡನೆ ಅಂದಿನ ಸಹಕಾರಿ ವಿಸ್ತರಣಾಧಿಕಾರಿಗಳಾಗಿದ್ದ ಆರ್.ಎಚ್.ನಾಯ್ಕ ಇವರು ಬ್ಯಾಂಕಿನ ರಚನಾ ಕಾರ್ಯದಲ್ಲಿ ತುಂಬಾ ಶ್ರಮಿಸಿರುತ್ತಾರೆ. ಪ್ರಾರಂಭದಲ್ಲಿ ಎರಡು ಜನ ನೌಕರರಿಂದ ಕಾರ್ಯಾರಂಭ ಮಾಡಿದ ಈ ಬ್ಯಾಂಕು ಈಗ ಒಟ್ಟು 18 ಜನ ಸಿಬ್ಬಂದಿಗಳನ್ನು ಹೊಂದಿರುತ್ತದೆ. ಆರ್. ಎಂ. ಪುಲಕರ ಅವರು ಸಂಸ್ಥಾಪಕ ಕಾರ್ಯದರ್ಶಿಯಾಗಿ ನಂತರ 11-05-68 ರಿಂದ 08-05-74ರ ವರೆಗೆ ವಿ. ಪಿ. ಹೆಗಡೆ ಗುಡ್ಗೇ ಇವರು ಸೇವೆ ಸಲ್ಲಿಸಿರುತ್ತಾರೆ. 08-05-74 ರಿಂದ 31-03-2006ರ ವರೆಗೆ ಬಿ. ಎ. ಶೇಖ, ಇವರು ಕಾರ್ಯದರ್ಶಿಯಾಗಿ ತಾಲೂಕಿನಲ್ಲಿ ಶಾಖೆಗಳನ್ನು ತೆರೆದು ಪ್ರಧಾನ ವ್ಯವಸ್ಥಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಪಿ. ಎನ್. ಭಟ್ಟ, ಕಡ್ಲೆ ಇವರು ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿ. ಎಂ. ಗೌಡ, ವೈ. ಜಿ. ಭಟ್ಟ, ಎನ್. ಜಿ. ಹೆಗಡೆ, ವಿ. ಎಂ. ಭಂಡಾರಿ, ಎಸ್. ವಿ. ಮೇಸ್ತ, ಇಸ್ಮಾಯಿಲ್ ಶೇಖ, ಶಂಕರ ಹೆಗಡೆ ಇವರು ಬ್ಯಾಂಕಿನ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಪ್ರಾರಂಭದಲ್ಲಿ ಕೇವಲ ಕೃಷಿ ಸಾಲದ ವ್ಯವಹಾರಗಳಿಗಷ್ಟೇ ಸೀಮಿತವಾಗಿರುವ ಬ್ಯಾಂಕು 1997ರಲ್ಲಿ ಪಿ. ಎಸ್. ಭಟ್ಟ, ಉಪ್ಪೋಣಿ ಇವರ ಅಧ್ಯಕ್ಷರಾಗಿರುವ ಅವಧಿಯಲ್ಲಿ ಕೃಷಿ ವಿಭಾಗದ ಜೊತೆಗೆ ಠೇವಣಿ ವಿಭಾಗವನ್ನು ಪ್ರಾರಂಭಿಸಿತು. ಇಂದು ಠೇವಣಿ ವಿಭಾಗದಲ್ಲಿ ಪ್ರಧಾನ ಕಚೇರಿಯ ಜೊತೆಗೆ 4 ಶಾಖೆಗಳನ್ನು ತೆರೆದು ಉತ್ತಮ ವ್ಯವಹಾರ ನೀಡುತ್ತಿದೆ. ದಿನಾಂಕ 31-12-2017ಕ್ಕೆ ಬ್ಯಾಂಕಿನ ದುಡಿಯುವ ಬಂಡವಾಳ ರೂ. 5203.91 ಲಕ್ಷ ಇದ್ದು ಸಾಲವನ್ನು ಕೃಷಿ ವಿಭಾಗದಲ್ಲಿ 1471.77 ಲಕ್ಷ ಮತ್ತು ಠೇವಣಿ ವಿಭಾಗದಲ್ಲಿ 2137.60 ಲಕ್ಷ ಒಟ್ಟೂ ರೂ. 3609.38 ಲಕ್ಷ ವಿತರಣೆ ಮಾಡಿದೆ ಕೃಷಿ ವಿಭಾಗದಲ್ಲಿ ಶೇ6,4,3ರ ಬಡ್ಡಿ ದರದಲ್ಲಿ ಸಾಲ ಪಡೆದು ನಿಗದಿತ ಅವಧಿಯೊಳಗೆ ಕಂತು ಪಾವತಿಸಿದ ಸಾಲಗಾರರಿಗೆ ಪ್ರತಿ ವರ್ಷ 1 ಕೋಟಿಯಷ್ಷು ಸರ್ಕಾರದ ರಿಯಾಯತಿ ದೊರೆಯುತ್ತಿದೆ. ಬ್ಯಾಂಕು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಲಾಭ ಗಳಿಸುತ್ತಾ ಸದಸ್ಯರಿಗೆ ಶೇರಿನ ಮೇಲೆ ಲಾಭಾಂಶವನ್ನು ನೀಡುತ್ತಾ ಬಂದಿರುತ್ತದೆ. ಸತತ ಲಾಭ ಗಳಿಗೆ ಮತ್ತು ಉತ್ತಮ ವ್ಯವಹಾರಕ್ಕಾಗಿ 1999-2000ನೇ ಸಾಲಿನಲ್ಲಿ ಪ್ರತಿಷ್ಠಿತ ಸುಭಾಷ ಯಾದವ ನಬಾರ್ಡ ರಾಷ್ಟ್ರೀಯ ಪ್ರಶಸ್ತಿ ದೊರಕಿರುತ್ತದೆ. ಬ್ಯಾಂಕು ಪ್ರಸಕ್ತ ಮಂಕಿ, ಗೇರುಸೊಪ್ಪಾ, ಕರ್ಕಿ, ಚಂದಾವರಗಳಲ್ಲಿ ಶಾಖೆಗಳನ್ನು ಹೊಂದಿದ್ದು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಇನ್ನೂ ಕಾರ್ಯ ವ್ಯಾಪ್ತಿಯಲ್ಲಿ ಶಾಖೆಗಳನ್ನು ಹೊಂದುವ ಗುರಿ ಇಟ್ಟುಕೊಳ್ಳಲಾಗಿದೆ. ಪ್ರಧಾನ ಕಛೇರಿಯ ಜೊತೆಗೆ ಎಲ್ಲಾ ಶಾಖೆಗಳನ್ನು ಗಣಕೀಕರಣಗೊಳಿದ್ದು ಆ ಮೂಲಕವೇ ವ್ಯವಹಾರ ನಡೆಯುತ್ತ್ತಿದೆ. ಬ್ಯಾಂಕು ಹೊನ್ನಾವರದ ಹೃದಯ ಭಾಗದಲ್ಲಿ 0-07-0 ಕ್ಷೇತ್ರ ಹೊಂದಿದ್ದು 2 ಅಂತಸ್ಥಿನ ಕಟ್ಟಡ ಹೊಂದಿದೆ. ಭಾರತೀಯ ಸ್ಟೇಟ ಬ್ಯಾಂಕ್ ಹಾಗೂ ನ್ಯಾಶನಲ್ ಇನ್ಸುರೆನ್ಸ್ ಕಂಪನಿಗಳಿಗೆ ಬಾಡಿಗೆ ನೀಡಿರುತ್ತದೆ. ಅಲ್ಲದೇ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಮಂಕಿಯಲ್ಲಿ 0-02-0 ಜಾಗದಲ್ಲಿ ಸ್ವಂತ ಕಟ್ಟಡ ಹೊಂದಿದ್ದು ಮೊದಲನೆ ಮಹಡಿಯಲ್ಲಿ ಬ್ಯಾಂಕಿನ ಶಾಖೆ ಕಾರ್ಯನಿರ್ವಹಿಸುತ್ತಿದ್ದು, ನೆಲ ಮಹಡಿಯಲ್ಲಿ 2400 ಚ.ಅ. ನಷ್ಟು ಕಟ್ಟಡದ ಬಾಡಿಗೆ ನೀಡುವ ದೃಷ್ಠಿಯಿಂದ ಕಾಯ್ದಿರಿಸಲಾಗಿದೆ. ಹೊನ್ನಾವರದ ರಾಮತೀರ್ಥದ ಹತ್ತಿರ ಇರುವ ಎ.ಪಿ.ಎಂ.ಸಿ. ಯಾರ್ಡಿನಲ್ಲಿ 0-06-0 ಕ್ಷೇತ್ರವನ್ನು ಖರೀದಿಸಿರುತ್ತಾರೆ.
ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರುಗಳ ವಿವರ :
1. ಆರ್. ಎಸ್. ಹೆಗಡೆ (ಸಂಸ್ಥಾಪಕ ಅಧ್ಯಕ್ಷರು) 2. ಎಸ್. ಯು. ತಲಕಣಿ 3. ಬಿ. ಪಿ. ಜೀನದತ್ತ ಗೌಡ 4. ಡಾ|| ಎಂ. ಪಿ. ಕರ್ಕಿ 5 ಪಿ. ಆರ್. ಹೆಗಡೆ, ನವಿಲಗೋಣ 6. ಡಾ|| ಜಿ. ಜಿ. ಸಭಾಹಿತ, ಹಳದೀಪುರ 7. ಎನ್. ಜಿ. ಹೆಗಡೆ, ಬೊಮ್ಮಾರ 8. ಎಂ. ಜಿ. ಹೆಗಡೆ ಮೂರ್ತಿ, ಹಡಿನಬಾಳ 9. ಪಿ. ಎಸ್. ಭಟ್ಟ ಉಪ್ಪೋಣಿ 10. ಪಿ. ಜಿ. ಭಟ್ಟ ಅಗ್ನಿ , ಮುಗವಾ 11. ಚಂದ್ರಶೇಖರ ಗೌಡ, ಮಂಕಿ 12. ಯೋಗೇಶ ಆರ್. ರಾಯ್ಕರ್, ಉಪ್ಪೋಣಿ
ಬ್ಯಾಂಕಿನ ಇಲ್ಲಿಯವರೆಗಿನ ಸಾಧನೆಗೆ ದೊರೆತ ಪ್ರಶಸ್ತಿ/ಪುರಸ್ಕಾರಗಳು : – 1. 1969-70 ನೇ ಸಾಲಿನಲ್ಲಿ ಬ್ಯಾಂಕಿನ ಉತ್ತಮ ಕಾರ್ಯನಿರ್ವಹಣೆಗೆ ರಾಜ್ಯ ಬ್ಯಾಂಕಿನಿಂದ ಜಿಲ್ಲಾ ಮಟ್ಟದ ಪ್ರಶಸ್ತಿ.2. 1974-75 ನೇ ಸಾಲಿನಲ್ಲಿ ಬ್ಯಾಂಕಿನ ಉತ್ತಮ ಕಾರ್ಯನಿರ್ವಹಣೆಗೆ ರಾಜ್ಯ ಬ್ಯಾಂಕಿನಿಂದ ಜಿಲ್ಲಾಮಟ್ಟದ ಪ್ರಶಸ್ತಿ 3. 1979-80 ನೇ ಸಾಲಿನಲ್ಲಿ ಬ್ಯಾಂಕಿಗೆ ರಾಜ್ಯ ಬ್ಯಾಂಕಿನಿಂದ ಸುವರ್ಣ ಮಹೋತ್ಸವ ಪ್ರಶಸ್ತಿ.4. 1992-93 ನೇ ಸಾಲಿನಲ್ಲಿ ಬ್ಯಾಂಕಿನ ಅತ್ಯುತ್ತಮ ಕಾರ್ಯನಿರ್ವಹಣೆಗೆ ರಾಜ್ಯ ಬ್ಯಾಂಕಿನಿಂದ ಪ್ರಶಸಿ.5. 1993-94 ನೇ ಸಾಲಿನಲ್ಲಿ ಸಹ ಬ್ಯಾಂಕಿನ ಅತ್ಯುತ್ತಮ ಕಾರ್ಯನಿರ್ವಹಣೆಗೆ ರಾಜ್ಯ ಬ್ಯಾಂಕಿನಿಂದ ಪ್ರಶಸ್ತಿ .6. 1994-95 ನೇ ಸಾಲಿನಲ್ಲಿ ಅತಿ ಹೆಚ್ಚಿನ ಸಾಲ ವಸೂಲಾತಿ ಸಾಧನೆಗೆ ಹಾಗೂ ಅತ್ಯತ್ತಮ ಕಾರ್ಯನಿರ್ವಹಣೆಗೆ ರಾಜ್ಯ ಬ್ಯಾಂಕಿನಿಂದ ಪ್ರಶಸ್ತಿ.7. 1999-2000 ನೇ ಸಾಲಿನಲ್ಲಿ ಪ್ರತಿಷ್ಟಿತ ಸುಭಾಷ ಯಾದವ ನಬಾರ್ಡ ರಾಷ್ಟ್ರೀಯ ಪ್ರಶಸ್ತಿ.8. 2004-05 ನೇ ಸಾಲಿನಲ್ಲಿ ವಿಭಾಗೀಯ ಮಟ್ಟದಲ್ಲಿ ಉತ್ತಮ ಪ್ರಗತಿ ಸಾಧನೆ ಪ್ರಶಸ್ತಿ ರಾಜ್ಯ ಬ್ಯಾಂಕಿನ ಅಮೃತ ಮಹೋತ್ಸವ ಪ್ರಶಸ್ತಿ ಹಾಗೂ ಸಹಕಾರ ಮಹಾ ಮಂಡಳಿ ನೀಡಿದ ರಾಜ್ಯ ಪ್ರಶಸ್ತಿ.9. 2004-05 ರಲ್ಲಿ ರಾಜ್ಯ ಬ್ಯಾಂಕ್ ಅಮೃತ ಮಹೋತ್ಸವ ಪ್ರಶಸ್ತಿ.10. 2004-15 ರಲ್ಲಿ ಸಹಕಾರ ಮಹಾಮಂಡಳಿ ನೀಡಿದ ರಾಜ್ಯ ಪ್ರಶಸ್ತಿ.11. 2011-12 ನೇ ಸಾಲಿನಲ್ಲಿ ಸಾಲ ವಸೂಲಾತಿಯಲ್ಲಿ ಶೇ. 80.60 ರಷ್ಟು ಸಾಧನೆಗೆ ರಾಜ್ಯ ಬ್ಯಾಂಕಿನಿಂದ ಜಿಲ್ಲಾ ಮಟ್ಟದ ಪ್ರಥಮ ಬಹುಮಾನ.12. 2011-12 ನೇ ಸಾಲಿನಲ್ಲಿ ರಾಜ್ಯ ಮಟ್ಟದ ಸರ್ವಾಂಗೀಣ ಸಾಧನೆಗೆ ರಾಜ್ಯ ಬ್ಯಾಂಕಿನಿಂದ ತೃತೀಯ ಪ್ರಶಸ್ತಿ.13. 2012-13 ನೇ ಸಾಲಿನಲ್ಲಿ ಸಾಲ ವಸೂಲಿ ಪ್ರಗತಿಯನ್ನು ಗುರುತಿಸಿ ಜಿಲ್ಲಾ ಮಟ್ಟದ ಪ್ರಥಮ ಬಹುಮಾನ.14. 2014-15 ನೇ ಸಾಲಿನಲ್ಲಿ ಸಾಧಿಸಿರುವ ಸಾಲ ಹಂಚಿಕೆ ಮತ್ತು ಸಾಲ ವಸೂಲಾತಿ ಪ್ರಗತಿಯನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಜಿಲ್ಲಾ ಮಟ್ಟದ ಪ್ರಥಮ ಪ್ರಶಸ್ತಿ.15. 2016-17 ನೇ ಸಾಲಿನಲ್ಲಿ ಸಾಧಿಸಿರುವ ಸಾಲ ವಸೂಲಿಗಾಗಿ ಜಿಲ್ಲಾ ಮಟ್ಟದ ಪ್ರಶಸ್ತಿ.
Leave a Comment